12:39 PM Monday3 - August 2026
ಬ್ರೇಕಿಂಗ್ ನ್ಯೂಸ್
ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ… ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ…

ಇತ್ತೀಚಿನ ಸುದ್ದಿ

ಮುದ್ದೇಬಿಹಾಳ: ಭಕ್ತಸಾಗರದ ನಡುವೆ ನಾಲತವಾಡ ಅಯ್ಯನಗುಡಿ ರಥೋತ್ಸವ; ಪಲ್ಲಕ್ಕಿ ಮೆರವಣಿಗೆ

09/02/2025, 21:12

ಶಿವು ರಾಠೋಡ ಹುಣಸಗಿ ವಿಜಯಪುರ

info.reporterkarnataka@gmail.com
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡ ಸರ್ವ ಧರ್ಮಗಳ ಸಾಮರಸ್ಯದ ಪ್ರತೀಕವಾದ ಅಯ್ಯನಗುಡಿ ಗಂಗಪ್ಪಯ್ಯನ ರಥೋತ್ಸವ ನಡೆಯಿತು.

ರಥೋತ್ಸವ ಆರಂಭಕ್ಕೂ ಮುನ್ನ ದೇಗುಲದ ಮುಂಭಾಗದಲ್ಲಿ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಸಹೋದರರ ಸಹಭಾಗಿತ್ವದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳ ಪರವಂತಿಕೆ, ನಂದಿ ಕೋಲು ಪ್ರದರ್ಶನ, ಪಲ್ಲಕ್ಕಿ ಮೆರವಣಿಗೆ ರಥದ ಸುತ್ತಲೂ ಪ್ರದಕ್ಷಿಣೆ ನಡೆಯಿತು.
*ಭಕ್ತಿ ಅರ್ಪಣೆ:* ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಅಪಾರ ಭಕ್ತರ ದಂಡು ರಥಕ್ಕೆ ಉತ್ತತ್ತಿ ಲಿಂಬೆ ಬಾಳೆ ಹಣ್ಣಿನಿಂದ ಎಸೆದು ಗಂಗಪ್ಪಯ್ಯ ಹರ ಹರ ಮಹಾದೇವ ಘೋಷಣೆಯಿಂದ ರಥ ತಲುಪುವ ಸುಮಾರು 200 ಮೀಟರ್ ದೂರದ ಪಾದ ಗಟ್ಟೆದರೆಗೆ ತೆರಳಿ ತಮ್ಮ ಭಕ್ತಿ ತೋರ್ಪಡಿಸಿಕೊಂಡರು.
*ಶಾಸಕರಿಂದ ಚಾಲನೆ:* ರಥ ಎಳೆಯುವ ಮುಂಚೆ ಸಾಂಪ್ರದಾಯದಂತೆ ಗಂಗಪ್ಪಯ್ಯನ ಜಾತ್ರೋತ್ಸವವನ್ನು ಹಬ್ಬದ
ರೂಪದಲ್ಲಿ ಆಚರಿಸಲು ಬಲದಿನ್ನಿ ನಾಡಗೌಡ ಧಣಿಗಳು ವ್ಯವಸ್ಥೆ ಮಾಡಿದ್ದರು. ಶಾಸಕ ಸಿ.ಎಸ್.ನಾಡಗೌಡ ಸಹೋದರರಾದ ಮುನ್ನಾಧಣಿ, ಬಾಳಸಾಹೇಬ, ಪ.ಪಂ ಮಾಜಿ ಅಧ್ಯಕ್ಷ_ ಹಾಲಿ ಸದಸ್ಯರಾದ ಹೃತ್ತಿರಾದ, ರಾಹುಲ್, ರಿತೀಶ್ ಅವರು ರಥೋತ್ಸವಕ್ಕೆ ಪೂಜೆ ನೆರವೇರಿಸಿ ತಾವೂ ಸಹ ರಥದ ಹಗ್ಗಕ್ಕೆ ಕೈ ಜೋಡಿಸಿ ಚಾಲನೆ ನೀಡಿದರು.
*ಬಿಗಿ ಬಂದೋಬಸ್ತ್:* ರಥೋತ್ಸವಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಮುದ್ದೇಬಿಹಾಳದ ಸಿಪಿಐ ಮಹದ ಫೈಜುದ್ದಿನ್, ಪಿಎಸೈ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪೋಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು