6:13 PM Thursday13 - February 2025
ಬ್ರೇಕಿಂಗ್ ನ್ಯೂಸ್
ಮಂಗಳೂರು: ನೇಶನಲ್ ಈಜು ಚಾಂಪಿಯನ್ 35 ವರ್ಷಗಳಿಂದಲೂ ಸ್ವಿ‌ಮ್ಮಿಂಗ್ ಪೂಲ್ ಲೈಫ್ ಗಾರ್ಡ್! ಮೈಸೂರಿನಲ್ಲಿ ಗಲಭೆಕೋರರಿಗೆ ಇಡೀ ಸರಕಾರ ಬೆಂಬಲ ನೀಡಿದೆ: ಪ್ರತಿಪಕ್ಷದ ನಾಯಕ ಆರ್. ಆಶೋಕ್ ಕ್ವಿನ್ ಸಿಟಿ ಆಗಲಿದೆ ಹೆಲ್ತ್ ಸಿಟಿ: ಜಾಗತಿಕ ಹೂಡಿಕೆದಾರರ ಚರ್ಚಾಗೋಷ್ಠಿಯಲ್ಲಿ ಸಚಿವ ಶರಣ್… Chitradurga | ಚಳ್ಳಕೆರೆ: ನಿಧಿಯಾಸೆಗೆ ನರಬಲಿ; ಡ್ರಾಪ್ ಕೊಡುವ ನೆಪದಲ್ಲಿ ಕೊಲೆ; ಜ್ಯೋತಿಷಿ… ಕಾಂಗ್ರೆಸ್‌ ಸರಕಾರ ಪ್ರಕರಣ ವಾಪಸ್‌ ಪಡೆಯುವುದರಿಂದ ಮತಾಂಧರಿಗೆ ಹಲ್ಲೆ ಮಾಡುವ ಧೈರ್ಯ ಬಂದಿದೆ:… ಬೀರೂರು: ರಥ ಟರ್ನ್ ಆಗಲು ಜಾಗದ ವಿವಾದ ತಣ್ಣಗಾಗುತ್ತಿದ್ದಂತೆ ಹೊತ್ತಿ ಉರಿದ ಟ್ರ್ಯಾಕ್ಟರ್,… ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮುನ್ನ ಎಚ್ಚರ ಇರಲಿ: ಹೆಣ್ಮಕ್ಕಳಿಗೆ ಎಸಿಪಿ… ಪರಶುರಾಂಪುರ ತಾಲೂಕು ಮಾಡುವುದು ನನ್ನ ಸಂಕಲ್ಪ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನಂಜನಗೂಡು: ಶ್ರೀ ಮುರಗಿ ಸ್ವಾಮಿ ಮಠದ ನೂತನ ಗದ್ದುಗೆ, ರಾಜದ್ವಾರ ಲೋಕಾರ್ಪಣೆ ಮಂಗಳೂರಿನ ವೆನ್ಲಾಕ್ ಗೆ ʼರೀಜನಲ್ ಆಸ್ಪತ್ರೆʼ ಸ್ಥಾನಮಾನ: ಸಿಎಂಗೆ ಸಂಸದ ಕ್ಯಾ. ಬ್ರಿಜೇಶ್…

ಇತ್ತೀಚಿನ ಸುದ್ದಿ

ಮುದ್ದೇಬಿಹಾಳ: ಭಕ್ತಸಾಗರದ ನಡುವೆ ನಾಲತವಾಡ ಅಯ್ಯನಗುಡಿ ರಥೋತ್ಸವ; ಪಲ್ಲಕ್ಕಿ ಮೆರವಣಿಗೆ

09/02/2025, 21:12

ಶಿವು ರಾಠೋಡ ಹುಣಸಗಿ ವಿಜಯಪುರ

info.reporterkarnataka@gmail.com
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡ ಸರ್ವ ಧರ್ಮಗಳ ಸಾಮರಸ್ಯದ ಪ್ರತೀಕವಾದ ಅಯ್ಯನಗುಡಿ ಗಂಗಪ್ಪಯ್ಯನ ರಥೋತ್ಸವ ನಡೆಯಿತು.

ರಥೋತ್ಸವ ಆರಂಭಕ್ಕೂ ಮುನ್ನ ದೇಗುಲದ ಮುಂಭಾಗದಲ್ಲಿ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಸಹೋದರರ ಸಹಭಾಗಿತ್ವದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳ ಪರವಂತಿಕೆ, ನಂದಿ ಕೋಲು ಪ್ರದರ್ಶನ, ಪಲ್ಲಕ್ಕಿ ಮೆರವಣಿಗೆ ರಥದ ಸುತ್ತಲೂ ಪ್ರದಕ್ಷಿಣೆ ನಡೆಯಿತು.
*ಭಕ್ತಿ ಅರ್ಪಣೆ:* ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಅಪಾರ ಭಕ್ತರ ದಂಡು ರಥಕ್ಕೆ ಉತ್ತತ್ತಿ ಲಿಂಬೆ ಬಾಳೆ ಹಣ್ಣಿನಿಂದ ಎಸೆದು ಗಂಗಪ್ಪಯ್ಯ ಹರ ಹರ ಮಹಾದೇವ ಘೋಷಣೆಯಿಂದ ರಥ ತಲುಪುವ ಸುಮಾರು 200 ಮೀಟರ್ ದೂರದ ಪಾದ ಗಟ್ಟೆದರೆಗೆ ತೆರಳಿ ತಮ್ಮ ಭಕ್ತಿ ತೋರ್ಪಡಿಸಿಕೊಂಡರು.
*ಶಾಸಕರಿಂದ ಚಾಲನೆ:* ರಥ ಎಳೆಯುವ ಮುಂಚೆ ಸಾಂಪ್ರದಾಯದಂತೆ ಗಂಗಪ್ಪಯ್ಯನ ಜಾತ್ರೋತ್ಸವವನ್ನು ಹಬ್ಬದ
ರೂಪದಲ್ಲಿ ಆಚರಿಸಲು ಬಲದಿನ್ನಿ ನಾಡಗೌಡ ಧಣಿಗಳು ವ್ಯವಸ್ಥೆ ಮಾಡಿದ್ದರು. ಶಾಸಕ ಸಿ.ಎಸ್.ನಾಡಗೌಡ ಸಹೋದರರಾದ ಮುನ್ನಾಧಣಿ, ಬಾಳಸಾಹೇಬ, ಪ.ಪಂ ಮಾಜಿ ಅಧ್ಯಕ್ಷ_ ಹಾಲಿ ಸದಸ್ಯರಾದ ಹೃತ್ತಿರಾದ, ರಾಹುಲ್, ರಿತೀಶ್ ಅವರು ರಥೋತ್ಸವಕ್ಕೆ ಪೂಜೆ ನೆರವೇರಿಸಿ ತಾವೂ ಸಹ ರಥದ ಹಗ್ಗಕ್ಕೆ ಕೈ ಜೋಡಿಸಿ ಚಾಲನೆ ನೀಡಿದರು.
*ಬಿಗಿ ಬಂದೋಬಸ್ತ್:* ರಥೋತ್ಸವಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಮುದ್ದೇಬಿಹಾಳದ ಸಿಪಿಐ ಮಹದ ಫೈಜುದ್ದಿನ್, ಪಿಎಸೈ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪೋಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು