10:36 PM Wednesday10 - December 2025
ಬ್ರೇಕಿಂಗ್ ನ್ಯೂಸ್
ಮೈಸೂರು-ಕುಶಾಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ: 4126 ಕೋಟಿ ವೆಚ್ಚದಲ್ಲಿ ಅಗಲೀಕರಣ ಭೂ ಪರಿವರ್ತನೆ ನಿಯಮಗಳ ಸರಳೀಕರಣ: ವಿಧಾನ ಪರಿಷತ್ ನಲ್ಲಿ ಸಚಿವ ಕೃಷ್ಣ ಬೈರೇಗೌಡ ರಾಜ್ಯದಲ್ಲಿ 37,48,700 ವಸತಿ ರಹಿತರು: ವಿಧಾನ ಪರಿಷತ್ ನಲ್ಲಿ ಸಚಿವ ಜಮೀರ್ ಖಾನ್ ಬೆಂಗಳೂರು ಸೈಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರ ಉದ್ಘಾಟನೆ ಬೆಂಗಳೂರು ನಗರದಲ್ಲಿ ಕ್ವಾಂಟಮ್ ಮೆಟೀರಿಯಲ್ಸ್ ನೆಟ್‌ವರ್ಕ್ (Q-MINt) ಸ್ಥಾಪಿಸಲು ಪ್ರಧಾನಿಗೆ ಸಿಎಂ ಪತ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನೆಗಳ ಸಮರ್ಪಕ ಜಾರಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆಎಸ್ಸಾರ್ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್… ಸುವರ್ಣಸೌಧ ಮುತ್ತಿಗೆ ಹಾಕಲು ಯತ್ನ; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಪ್ರತಿಭಟನಾಕಾರರು ಪೊಲೀಸ್… ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ನೂತನ ಪ್ರಭಾರ ಅಧ್ಯಕ್ಷರಾಗಿ ಗೀತಾ ರಮೇಶ್ ಆಯ್ಕೆ ಸಿಎ ಸೈಟ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಕಾಲಮಿತಿ ಷರತ್ತು ಸಡಿಲಿಕೆಗೆ ಕ್ರಮ: ವಿಧಾನ…

ಇತ್ತೀಚಿನ ಸುದ್ದಿ

ಮುದ್ದೇಬಿಹಾಳ: ಭಕ್ತಸಾಗರದ ನಡುವೆ ನಾಲತವಾಡ ಅಯ್ಯನಗುಡಿ ರಥೋತ್ಸವ; ಪಲ್ಲಕ್ಕಿ ಮೆರವಣಿಗೆ

09/02/2025, 21:12

ಶಿವು ರಾಠೋಡ ಹುಣಸಗಿ ವಿಜಯಪುರ

info.reporterkarnataka@gmail.com
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡ ಸರ್ವ ಧರ್ಮಗಳ ಸಾಮರಸ್ಯದ ಪ್ರತೀಕವಾದ ಅಯ್ಯನಗುಡಿ ಗಂಗಪ್ಪಯ್ಯನ ರಥೋತ್ಸವ ನಡೆಯಿತು.

ರಥೋತ್ಸವ ಆರಂಭಕ್ಕೂ ಮುನ್ನ ದೇಗುಲದ ಮುಂಭಾಗದಲ್ಲಿ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಸಹೋದರರ ಸಹಭಾಗಿತ್ವದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳ ಪರವಂತಿಕೆ, ನಂದಿ ಕೋಲು ಪ್ರದರ್ಶನ, ಪಲ್ಲಕ್ಕಿ ಮೆರವಣಿಗೆ ರಥದ ಸುತ್ತಲೂ ಪ್ರದಕ್ಷಿಣೆ ನಡೆಯಿತು.
*ಭಕ್ತಿ ಅರ್ಪಣೆ:* ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಅಪಾರ ಭಕ್ತರ ದಂಡು ರಥಕ್ಕೆ ಉತ್ತತ್ತಿ ಲಿಂಬೆ ಬಾಳೆ ಹಣ್ಣಿನಿಂದ ಎಸೆದು ಗಂಗಪ್ಪಯ್ಯ ಹರ ಹರ ಮಹಾದೇವ ಘೋಷಣೆಯಿಂದ ರಥ ತಲುಪುವ ಸುಮಾರು 200 ಮೀಟರ್ ದೂರದ ಪಾದ ಗಟ್ಟೆದರೆಗೆ ತೆರಳಿ ತಮ್ಮ ಭಕ್ತಿ ತೋರ್ಪಡಿಸಿಕೊಂಡರು.
*ಶಾಸಕರಿಂದ ಚಾಲನೆ:* ರಥ ಎಳೆಯುವ ಮುಂಚೆ ಸಾಂಪ್ರದಾಯದಂತೆ ಗಂಗಪ್ಪಯ್ಯನ ಜಾತ್ರೋತ್ಸವವನ್ನು ಹಬ್ಬದ
ರೂಪದಲ್ಲಿ ಆಚರಿಸಲು ಬಲದಿನ್ನಿ ನಾಡಗೌಡ ಧಣಿಗಳು ವ್ಯವಸ್ಥೆ ಮಾಡಿದ್ದರು. ಶಾಸಕ ಸಿ.ಎಸ್.ನಾಡಗೌಡ ಸಹೋದರರಾದ ಮುನ್ನಾಧಣಿ, ಬಾಳಸಾಹೇಬ, ಪ.ಪಂ ಮಾಜಿ ಅಧ್ಯಕ್ಷ_ ಹಾಲಿ ಸದಸ್ಯರಾದ ಹೃತ್ತಿರಾದ, ರಾಹುಲ್, ರಿತೀಶ್ ಅವರು ರಥೋತ್ಸವಕ್ಕೆ ಪೂಜೆ ನೆರವೇರಿಸಿ ತಾವೂ ಸಹ ರಥದ ಹಗ್ಗಕ್ಕೆ ಕೈ ಜೋಡಿಸಿ ಚಾಲನೆ ನೀಡಿದರು.
*ಬಿಗಿ ಬಂದೋಬಸ್ತ್:* ರಥೋತ್ಸವಕ್ಕೆ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಮುದ್ದೇಬಿಹಾಳದ ಸಿಪಿಐ ಮಹದ ಫೈಜುದ್ದಿನ್, ಪಿಎಸೈ ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪೋಲೀಸ್ ಬಂದೋಬಸ್ತ ಕೈಗೊಳ್ಳಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು