1:16 PM Wednesday8 - July 2026
ಬ್ರೇಕಿಂಗ್ ನ್ಯೂಸ್
ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ…

ಇತ್ತೀಚಿನ ಸುದ್ದಿ

ಕೋಪ ಬಂದಾಗಲೆಲ್ಲ ಗೋಡೆಗೆ ಮೊಳೆ ಹೊಡಿ: ಸಿಡುಕಿನ ಪುತ್ರನಿಗೆ ಅಪ್ಪ ಮಾಡಿದ ಉಪದೇಶ

01/06/2021, 18:36

ಯುವಚಿಂತನ
ಒಮ್ಮೆ ಒಬ್ಬ ಬಹು ಸಿಡುಕಿನ ಹುಡುಗನಿದ್ದ. ಅವನಿಗೆ ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ಕೋಪ. ಅವನ ಕೋಪದಿಂದ ಅವನಿಗೇ ತೊಂದರೆಯಾಗುತ್ತಿತ್ತು. ಆದರೆ ಅದರಿಂದ ಹೊರಬರಲಾಗುತ್ತಿರಲಿಲ್ಲ.

ಆ ಹುಡುಗ ತನ್ನ ತಂದೆಯ ಬಳಿ ಇದಕ್ಕೆ ಒಂದು ಪರಿಹಾರವನ್ನು ಕೇಳಿದ. ತಂದೆ ಹೇಳಿದರು ‘ಮಗನೇ, ನಾನು ಒಂದು ಸಲಹೆಯನ್ನು ಕೊಡುತ್ತೇನೆ. ಪ್ರತಿ ಬಾರಿ ಕೋಪ ಬರುವಾಗ ಒಂದು ಮೊಳೆಯನ್ನು ಗೋಡೆಗೆ ಹೊಡೆ. ಬೇರೆ ಏನನ್ನೂ ಮಾಡಬೇಡ’.

ಮಗನು ತನ್ನ ತಂದೆಯ ಮಾತನ್ನು ಅನುಸರಿಸಲು ಪ್ರಯತ್ನ ಮಾಡಿದ. ಪ್ರತೀ ಬಾರಿ ಕೋಪ ಬರುವಾಗ ಒಂದು ಮೊಳೆಯನ್ನು ಗೋಡೆಗೆ ಬಡಿದ. ಮೊದಲ ದಿನ ಮೂವತ್ತು ಮೊಳೆಗಳು ಗೋಡೆಯನ್ನೇರಿದವು. ದಿನದಿಂದ ದಿನಕ್ಕೆ ಅದರ ಲೆಕ್ಕ ಕಡಿಮೆ ಆಯಿತು. ಹೀಗೆ ಒಂದು ತಿಂಗಳು ಕಳೆಯುವಾಗ ಒಂದು ಪೂರ್ತಿ ಗೋಡೆಯು ಮೊಳೆಗಳಿಂದ ತುಂಬಿತ್ತು ಮತ್ತು ಅವನ ಕೋಪವೂ ಬಹುಪಾಲು ಕಮ್ಮಿ ಆಗಿತ್ತು. ಏಕೆಂದರೆ ಮೊಳೆ ಹೊಡೆಯುವುದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಸುಲಭ ಅನ್ನಿಸಿತ್ತು. ಅದನ್ನು ತನ್ನ ತಂದೆಯ ಬಳಿ ಹೇಳಿದ. ತಂದೆ ಹೇಳಿದರು ‘ ಮಗನೇ, ಇನ್ನು ಮುಂದೆ ಪ್ರತೀ ಬಾರಿ ಕೋಪ ಬಂದು ಅದನ್ನು ನಿಯಂತ್ರಿಸಿಕೊಳ್ಳುವಾಗ ಹೊಡೆದಿರುವ ಒಂದೊಂದು ಮೊಳೆಯನ್ನು ಗೋಡೆಯಿಂದ ತೆಗೆ.

ಹೀಗೆ ಎರಡು ತಿಂಗಳು ಕಳೆಯುವಾಗ ಗೋಡೆಯಲ್ಲಿರುವ ಎಲ್ಲಾ ಮೊಳೆಗಳು ಖಾಲಿಯಾದವು. ಹಾಗೂ ಹುಡುಗನ ಕೋಪವೂ ಕಮ್ಮಿಯಾಯಿತು. ಬಲು ಖುಷಿಯಿಂದ ಹುಡುಗ ತನ್ನ ತಂದೆಗೆ ಗೋಡೆಯನ್ನು ತೋರಿಸಿದ.ಆಗ ತಂದೆ ಮಗನಿಗೆ ಮನ ಮುಟ್ಟುವಂತೆ ಒಂದು ಮಾತನ್ನು ಹೇಳಿದರು ‘ ಮಗನೇ, ಈ ಗೋಡೆಯನ್ನು ನೋಡು. ಅದರಲ್ಲಿ ಆಗಿರುವ ರಂಧ್ರಗಳು ನೀನು ಮಾಡಿರುವ ಮೊದಲ ತಪ್ಪುಗಳನ್ನು ತೋರಿಸುತ್ತಿವೆ. ಕೋಪದಿಂದ ಆಗುವ ಅನಾಹುತವೂ ಹಾಗೆಯೇ. ಆಡಿದ ಮಾತು, ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುತ್ತವೆ ಮತ್ತು ಜೀವನ ಪೂರ್ತಿಯೂ ಕಾಡುತ್ತಿರುತ್ತವೆ. ನಂತರ ಪ್ರಾಯಶ್ಚಿತ್ತ ಪಟ್ಟು ಪ್ರಯೋಜನವಿಲ್ಲ “. ಹುಡುಗನಿಗೆ ತನ್ನ ತಪ್ಪಿನ ಅರಿವಾಯಿತು.

ಕ್ರೋಧೋ ಮೂಲಂ ಅನರ್ಥಾನಾಮ್, ಕ್ರೋಧಃ ಸಂಸಾರ ಬಂಧನಮ್, ಧರ್ಮಕ್ಷಯಕರಃ ಕ್ರೋಧಃ, ತಸ್ಮಾತ್ ಕ್ರೋಧಮ್ ವಿವರ್ಜಯೇತ್ ” ಅಂದರೆ ಕೋಪವು ಎಲ್ಲಾ ಅನಾಹುತಗಳಿಗೂ ಮೂಲ ಕಾರಣ. ಕೋಪವು ಸಂಸಾರ ಬಂಧನಕ್ಕೂ, ಧರ್ಮ ನಾಶಕ್ಕೂ ಕಾರಣೀಭೂತ. ಅದಕ್ಕೋಸ್ಕರ ಕೋಪವನ್ನು ತ್ಯಜಿಸಬೇಕು ಎಂಬ ಸಂಸ್ಕೃತದ ನುಡಿಯು ಅರ್ಥಗರ್ಭಿತವಾದದ್ದು,

ಈ ಮೇಲಿನ ಕಥೆಯು ಕೋಪ ಮಾತ್ರವಲ್ಲದೇ, ಯುವಜನತೆಗೆ ಯಾವುದೇ ದುರಭ್ಯಾಸಗಳು ಹೇಗೆ ದುಷ್ಪರಿಣಾಮ ಬೀಳಬಹುದೆಂದು ಮಾರ್ಮಿಕವಾಗಿ ತಿಳಿಸುತ್ತದೆ. ಕುಡಿತ, ಮಾದಕ ವ್ಯಸನ, ತಂಬಾಕು ಸೇವನೆ, ಸುಳ್ಳು ಹೇಳುವುದು ಯಾವುದೇ ಕೆಟ್ಟ ಚಟಗಳಿಗೆ ಬಿದ್ದರೆ ಅದರಿಂದ ಹೊರ ಬರುವುದು ತುಂಬಾ ಕಷ್ಟ ಹಾಗೂ ಹೊರ ಬಂದ ಮೇಲೆಯೂ ಅದರ ಪರಿಣಾಮಗಳು ಜೀವನದುದ್ದಕ್ಕೂ ಇರುತ್ತವೆ. ಇದನ್ನು ಅರಿತವರು ಒಳ್ಳೆಯ ಮಾರ್ಗದಲ್ಲಿ ಸಂಸ್ಕಾರಯುತರಾಗಿ ಬಾಳಬಹುದು ಎಂಬುದೇ ಇದರ ಸಂದೇಶ.

 ಪ್ರತಿಜ್ಞಾ ಸುಹಾಸಿನಿ  

ಪ್ರಾಂಶುಪಾಲರು ಮಂಗಳ ಕಾಲೇಜು

ಇತ್ತೀಚಿನ ಸುದ್ದಿ

ಜಾಹೀರಾತು