4:42 PM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಕಾಶ್ಮೀರದ ಹಿಮಪರ್ವತದಲ್ಲಿ ಮಸ್ಕಿಯ ಹೆಸರು!!: ಅಭಿಮಾನ ಮೆರೆದ ರಾಯಚೂರು ಯೋಧ

11/01/2022, 10:23

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ 

ಅಂತರಗಂಗೆ ರಾಯಚೂರು

info.reporterkarnataka.com

ರಾಯಚೂರಿನ ಮಸ್ಕಿಯಿಂದ ದೇಶ ಸೇವೆ ಮಾಡಲು ಸೈನ್ಯ ಸೇರಿದ ಯೋಧರೊಬ್ಬರು ಕಾಶ್ಮೀರದಲ್ಲಿ ಹಿಮದಿಂದ ಕೂಡ ಪರ್ವತ ಶ್ರೇಣಿಯಲ್ಲಿ ಮಸ್ಕಿಯ ಹೆಸರು ಬರೆದು ನಾಡಿನ ಅಭಿಮಾನವನ್ನು ಮೆರೆದಿದ್ದಾರೆ.

ಮಸ್ಕಿಯ ಯುವಕ ಮನೋಜ್ ಕುಮಾರ್ ಕಳೆದ 10 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಾಶ್ಮೀರದ ಗಡಿ ಭಾಗದಲ್ಲಿ ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಕಾಶ್ಮೀರದ ಹಿಮ ಪರ್ವತದಲ್ಲಿ ತನ್ನ ಹುಟ್ಟೂರಿನ ಅಭಿಮಾನದಿಂದ ಹಿಮಗುಡ್ಡೆಯ ಮೇಲೆ ಮಸ್ಕಿ ಹೆಸರು ಬರೆದು ಅಭಿಮಾನ ಮೆರೆದಿದ್ದಾರೆ.

ಮನೋಜ್ ಕುಮಾರ್ ಮಸ್ಕಿಯ ಜೋಗಿನ ರಾಮಣ್ಣ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದರು. ಶಾಲಾ ದಿನಗಳಲ್ಲಿ ದೇಶ ಅಭಿಮಾನ ಹೊಂದಿದ್ದು, ದೇಶಸೇವೆ ಮಾಡುವ ಅಭಿಲಾಷೆಯನ್ನು ತನ್ನ ಸ್ನೇಹಿತರ ಜತೆ ಹಂಚಿಕೊಂಡಿದ್ದರು. ಇದನ್ನು ಮಸ್ಕಿಯಲ್ಲಿರುವ ಅವ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಮಸ್ಕಿ ಯೋಧ ಮನೋಜ್ ಕುಮಾರ್ ದೇಶಸೇವೆ ಮಾಡಲು ಸೇರಿದಾಗಿನಿಂದ ಆತನಿಗೆ ಹುಟ್ಟೂರಿನ ಅಭಿಮಾನಿಗಳು ಹೆಚ್ಚಾಗಿದ್ದಾರೆ. 

ಇತ್ತೀಚಿನ ಸುದ್ದಿ

ಜಾಹೀರಾತು