6:14 AM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಕಾಶ್ಮೀರದ ಹಿಮಪರ್ವತದಲ್ಲಿ ಮಸ್ಕಿಯ ಹೆಸರು!!: ಅಭಿಮಾನ ಮೆರೆದ ರಾಯಚೂರು ಯೋಧ

11/01/2022, 10:23

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ 

ಅಂತರಗಂಗೆ ರಾಯಚೂರು

info.reporterkarnataka.com

ರಾಯಚೂರಿನ ಮಸ್ಕಿಯಿಂದ ದೇಶ ಸೇವೆ ಮಾಡಲು ಸೈನ್ಯ ಸೇರಿದ ಯೋಧರೊಬ್ಬರು ಕಾಶ್ಮೀರದಲ್ಲಿ ಹಿಮದಿಂದ ಕೂಡ ಪರ್ವತ ಶ್ರೇಣಿಯಲ್ಲಿ ಮಸ್ಕಿಯ ಹೆಸರು ಬರೆದು ನಾಡಿನ ಅಭಿಮಾನವನ್ನು ಮೆರೆದಿದ್ದಾರೆ.

ಮಸ್ಕಿಯ ಯುವಕ ಮನೋಜ್ ಕುಮಾರ್ ಕಳೆದ 10 ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಾಶ್ಮೀರದ ಗಡಿ ಭಾಗದಲ್ಲಿ ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಕಾಶ್ಮೀರದ ಹಿಮ ಪರ್ವತದಲ್ಲಿ ತನ್ನ ಹುಟ್ಟೂರಿನ ಅಭಿಮಾನದಿಂದ ಹಿಮಗುಡ್ಡೆಯ ಮೇಲೆ ಮಸ್ಕಿ ಹೆಸರು ಬರೆದು ಅಭಿಮಾನ ಮೆರೆದಿದ್ದಾರೆ.

ಮನೋಜ್ ಕುಮಾರ್ ಮಸ್ಕಿಯ ಜೋಗಿನ ರಾಮಣ್ಣ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದರು. ಶಾಲಾ ದಿನಗಳಲ್ಲಿ ದೇಶ ಅಭಿಮಾನ ಹೊಂದಿದ್ದು, ದೇಶಸೇವೆ ಮಾಡುವ ಅಭಿಲಾಷೆಯನ್ನು ತನ್ನ ಸ್ನೇಹಿತರ ಜತೆ ಹಂಚಿಕೊಂಡಿದ್ದರು. ಇದನ್ನು ಮಸ್ಕಿಯಲ್ಲಿರುವ ಅವ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಮಸ್ಕಿ ಯೋಧ ಮನೋಜ್ ಕುಮಾರ್ ದೇಶಸೇವೆ ಮಾಡಲು ಸೇರಿದಾಗಿನಿಂದ ಆತನಿಗೆ ಹುಟ್ಟೂರಿನ ಅಭಿಮಾನಿಗಳು ಹೆಚ್ಚಾಗಿದ್ದಾರೆ. 

ಇತ್ತೀಚಿನ ಸುದ್ದಿ

ಜಾಹೀರಾತು