5:12 PM Wednesday20 - August 2025
ಬ್ರೇಕಿಂಗ್ ನ್ಯೂಸ್
ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು… ಸಂಸೆ ಯುವಕ ಆತ್ಮಹತ್ಯೆ ಪ್ರಕರಣ: ಕುದುರೆಮುಖ ಪೊಲೀಸ್ ಕಾನ್ ಸ್ಟೇಬಲ್ ಸಿದ್ದೇಶ್ ಗೋವಾದಲ್ಲಿ… ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರ: ಮಲೆನಾಡು ಅಕ್ಷರಶಃ ಜಲಾವೃತ ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ…

ಇತ್ತೀಚಿನ ಸುದ್ದಿ

ಜೈ ತುಳುನಾಡ್ ಬೆಂಗಳೂರು ಘಟಕದ ವಾರ್ಷಿಕ ಮಹಾಸಭೆ: ಧನಂಜಯ ಆಚಾರ್ಯ ನೂತನ ಅಧ್ಯಕ್ಷ

20/03/2024, 11:30

ಬೆಂಗಳೂರು(reporterkarnataka.com): ಜೈ ತುಳುನಾಡ್ ಬೆಂಗಳೂರು ಘಟಕದ ವಾರ್ಷಿಕ ಮಹಾಸಭೆ ಭಾನುವಾರ ಮೆಜೆಸ್ಟಿಕ್ ನ ಸ್ವಾಗತ್ ಹೋಟೆಲಿನಲ್ಲಿ ನಡೆಯಿತು.


ಸಭೆಯಲ್ಲಿ ಪ್ರಸ್ತುತ ಸಮಿತಿ ಕಳೆದ ವರ್ಷ ಮಾಡಿದ ತುಳು ಪರವಾದ ಕಾರ್ಯಕ್ರಮಗಳ ಬಗ್ಗೆ ವರದಿ ವಾಚನ ಸಲ್ಲಿಸಲಾಯಿತು. ಹಾಗೆಯೇ ಸಂಸ್ಥಾಪಕ ಸಮಿತಿಯ ಮಾರ್ಗದರ್ಶನದಲ್ಲಿ, ಜೈ ತುಳುನಾಡ್ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಶು ಶ್ರೀಕೇರ ಅವರ ಉಪಸ್ಥಿತಿಯಲ್ಲಿ ಹೊಸ ಸಮಿತಿ ರಚನೆಯಾಯಿತು. ಧನಂಜಯ ಆಚಾರ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಿಧೀಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಅಕ್ಷಯ್ ಆಚಾರ್ಯ, ಜೊತೆ ಕಾರ್ಯದರ್ಶಿಗಳಾಗಿ ಶಕುಂತಳಾ ಹಾಗೂ ವಿನಯ್, ಖಜಾಂಜಿಯಾಗಿ ಅನುದೀಪ್ ಶೆಟ್ಟಿ , ಜೊತೆ ಖಜಾಂಜಿಯಾಗಿ ಪ್ರಗತಿ ಎಸ್., ಸಂಘಟನಾ ಕಾರ್ಯದರ್ಶಿಗಳಾಗಿ ಶರತ್ ಕೊಡವೂರು, ಕಾಶಿನಾಥ್ ಮತ್ತು ಪ್ರಶಾಂತ್ ಅವರು ಆಯ್ಕೆಯಾದರು.
ಅಧ್ಯಕ್ಷರಾಗಿ ಆಯ್ಕೆಯಾದ, ಧನಂಜಯ ಆಚಾರ್ಯ ಅವರು ಮಾತನಾಡುತ್ತಾ ತುಳು ಭಾಷೆಯ ಬೆಳವಣಿಗೆ ಹಾಗೂ ತುಳು ಭಾಷೆಯ ಉಳಿವಿಗೆ ಶ್ರಮಿಸುವೆ ಮತ್ತು ತುಳುಪರ ಕೆಲಸ ಮಾಡುವವರ ಜೊತೆ ನಾವು ಬೆನ್ನುಲುಬಾಗಿ ನಿಲ್ಲುತ್ತೇವೆ. ಆ ಸಲುವಾಗಿ ಸರ್ವ ತುಳುವರ ಸಹಕಾರವನ್ನು ಕೋರುತ್ತೇವೆ ಎಂದು
ಹೇಳಿದರು.
ವಿಶು ಶ್ರೀಕೇರ ಅವರು ಮಾತನಾಡುತ್ತಾ ಜೈ ತುಳುನಾಡು (ರಿ.) ಸಂಘಟನೆಯ ಸಾಧನೆಯ ಬಗ್ಗೆ, ಸಾಮರ್ಥ್ಯದ ಬಗ್ಗೆ ತಿಳಿಸುತ್ತಾ ಹೊಸ ಘಟಕದ ಅವಧಿಯಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿ ಎಂದು ಶುಭ ಹಾರೈಸಿದರು. ಘಟಕದ ಮಾಜಿ ಅಧ್ಯಕ್ಷರಾದ ವಿಶಾಲ್ ಕೊಡಿಯಾಲ್ ಅವರು ತಮ್ಮ ಅವಧಿಯಲ್ಲಿ ಘಟಕದ ವತಿಯಿಂದಾಗಿರುವ ಸಾಧನೆಗಳನ್ನು ವಿವರಿಸಿದರು ಹಾಗೂ ಅವಕಾಶ ಕಲ್ಪಿಸಿದ ಸಂಘಟನೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಿಧೀಶ್ ಶೆಟ್ಟಿ ಯವರು ವರದಿ ವಾಚಿಸಿದರು. ಧನಂಜಯ ಅವರು ಲೆಕ್ಕಪತ್ರ ವಾಚಿಸಿದರು. ಸಭೆಯಲ್ಲಿ ಸ್ಥಾಪಕ ಸಮಿತಿಯ ಸದಸ್ಯರು , ಕೇಂದ್ರ ಸಮಿತಿಯ ಸದಸ್ಯರು ಹಾಗೂ ಘಟಕದ ಸದಸ್ಯರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು