3:04 AM Wednesday24 - June 2026
ಬ್ರೇಕಿಂಗ್ ನ್ಯೂಸ್
ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ…

ಇತ್ತೀಚಿನ ಸುದ್ದಿ

ಐನಾಪುರ: ಕೃಷ್ಣಾ ಕಿತ್ತೂರ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಕಳಸಾರೋಹಣ ಸಂಪನ್ನ

14/05/2022, 22:22

ಬೆಳಗಾವಿ(reporterkarnataka.com):
ಒಳ್ಳೆಯದನ್ನು ನೋಡಬೇಕು, ಕೇಳಬೇಕು, ಉಣ್ಣಬೇಕು, ತಿನ್ನಬೇಕು,l. ಅಷ್ಟೇಯಲ್ಲದೆ.ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ  ಸಿದೇಶ್ವರ ಮಹಾಸ್ವಾಮಿಜಿ ಹೇಳಿದರು.

ಅವರು ಐನಾಪುರ ಸಮೀಪದ ಕೃಷ್ಣಾ ಕಿತ್ತೂರ ಗ್ರಾಮದ ಮಹಾಲಕ್ಷ್ಮಿ ದೇವಿ ಕಮಿಟಿ ಮತ್ತು ಸಮಸ್ತ ನಾಗರಿಕರು ಆಯೋಜಿಸಿದ  ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ  ಕಳಸಾರೋಹಣವನ್ನು ಸಮಾರಂಭದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.

ಈ ಶರೀರಕ್ಕೆ ಪ್ರಾಸಾದ ಭಾವ ಬರಲ್ಲಿ ಅಂತಾ ಗುಡಿಗಳನ್ನು ಕಟ್ಟುತ್ತಾರೆ. ಗುಡಿಗಳು ನಮ್ಮಗೆ ಪಾಠಯಲಿಕ್ಕೆ ಇರುತ್ತವೆ. ಗುಡಿಗಳನ್ನು ಸುಂದರವಾಗಿ ಕಟ್ಟಿದಿರಿ. ಅವುಗಳು ಪಾವಿತ್ರತೆ ಪಡೆದಿವೆ. ಅದೇ ರೀತಿ ದೇವರು ಕಟ್ಟಿದ ಗುಡಿಗಳು ಅಂದರೆ ನಿಮ್ಮ ದೇಹಗಳು ಎಷ್ಟು ಪಾವಿತ್ರ್ಯ ಪಡೆದಿವೆ. ದೇವರು ಕಟ್ಟಿದ ಗುಡಿಗಳು ನೀವೆಲ್ಲ ಎಷ್ಟು ಭಾಗ್ಯಶಾಲಿಗಳು ಎಂದು ಹೇಳಿದರು.

ಸಾನಿಧ್ಯ ವಹಿಸಿದ ಗದಗ ಬ್ರಹನ್ಮಠದ ಸದಾಶಿವಾನಂದ ಸ್ವಾಮಿಜಿ ಆರ್ಶಿವಚನ  ನೀಡಿ ಶ್ರೀ ಮಹಾಲಕ್ಷ್ಮಿ ದೇವಿ ಗುಡಿಗೆ ಅತ್ಯಂತ ಸುಂದರವಾದ ಗೋಪುರ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಇದು ದಕ್ಷಿಣ ಭಾರತದಲ್ಲಿ ವೈಶಿಷ್ಟ್ಯ ಪೂರ್ಣ ವಾದದು. ನಮ್ಮ ದೇಶದಲ್ಲಿ ದೇವಸ್ಥಾನ ಕಟ್ಟುವುದು ರಾಜಗೋಪುರ ನಿರ್ಮಾಣ ಮಾಡುವದು  ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು. 


ಸಾನಿದ್ಯವನ್ನು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮಿಜಿ ವಹಿಸಿದರು. ನೇತ್ರತ್ವವನ್ನು ಐನಾಪುರ ಕೃಷ್ಣಾಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ವಹಿಸಿದರು. ಅಥಣಿ ಶುರ್ಗಸನ ವ್ಯವಸ್ಥಾಪಕ ನಿದೇರ್ಶಕ ಯೋಗೇಶ ಪಾಟೀಲ, ತಹಸೀಲ್ದಾರ ಆರ್ ಆರ್ ಬುರ್ಲಿ, ಕಾಗವಾಡ ಪಿ ಎಸ್ ಐ ಭೀಮಪ್ಪಾ ರಬಕವಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು