5:14 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

ಹಾಸನ, ಶಿರಸಿಗೆ ಇಂದಿನಿಂದ ಕೆಎಸ್ಸಾರ್ಟಿಸಿ  ವೋಲ್ವೋ ಬಸ್ ಆರಂಭ: ಕಡಿಮೆ ದರದಲ್ಲಿ ಆರಾಮದಾಯಕ ಪ್ರಯಾಣ

18/02/2022, 10:39

ಮಂಗಳೂರು(reporterkarnataka.com):-ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದಿಂದ ಮಂಗಳೂರು-ಹಾಸನ-ಮಂಗಳೂರು ವಯಾ ಬಿ.ಸಿ. ರೋಡು, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಗುಂಡ್ಯ, ಸಕಲೇಶಪುರ ಮಾರ್ಗದಲ್ಲಿ ವೋಲ್ವೋ ಸಾರಿಗೆಯನ್ನು ಇದೇ ಫೆ.18ರ ಶುಕ್ರವಾರದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅತ್ಯಂತ ಕಡಿಮೆ ದರದಲ್ಲಿ ಪ್ರಾರಂಭಿಸಲಾಗುತ್ತಿದೆ. 

ಮಂಗಳೂರಿನಿಂದ ಸಂಜೆ 5ಕ್ಕೆ ಹೊರಟು ಹಾಸನಕ್ಕೆ ರಾತ್ರಿ 9.30ಕ್ಕೆ ತಲುಪಲಿದೆ. ಅದೇ ರೀತಿ ಹಾಸನದಿಂದ  ಮುಂಜಾನೆ 5.15 ಗಂಟೆಗೆ ಹೊರಟು ಮಂಗಳೂರಿಗೆ ಬೆಳಿಗ್ಗೆ 9.45ಕ್ಕೆ ತಲುಪಲಿದೆ. ಬಸ್ ದರ  320 ರೂ.ಗಳು.

ಮಂಗಳೂರು-ಶಿರಸಿ ವಯಾ ಉಡುಪಿ-ಕುಂದಾಪುರ-ಭಟ್ಕಳ-ಮುರ್ಡೇಶ್ವರ ಕ್ರಾಸ್-ಹೊನ್ನಾವರ ಸರ್ಕಲ್-ಕುಮಟ ಮಾರ್ಗದಲ್ಲಿ ನೂತನವಾಗಿ ವೋಲ್ವೋ ಸಾರಿಗೆಯನ್ನು  ಇದೇ ಫೆ.18ರ ಶುಕ್ರವಾರದಿಂದ ಪ್ರಾರಂಭಿಸಲಾಗುವುದು.

ಮಂಗಳೂರಿನಿಂದ ಮಧ್ಯಾಹ್ನ 3.15 ಹೊರಟು ಶಿರಸಿಗೆ ರಾತ್ರಿ 9.30ಗಂಟೆಗೆ ತಲುಪಲಿದೆ. ಶಿರಸಿಯಿಂದ ಮುಂಜಾನೆ 5 ಗಂಟೆಗೆ ಹೊರಟು ಮಂಗಳೂರನ್ನು ಬೆಳಿಗ್ಗೆ 11 ಗಂಟೆಗೆ ತಲುಪಲಿದೆ. ಬಸ್ ದರ 420 ರೂ.ಗಳಾಗಿವೆ.  

     ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ.

  ಹೆಚ್ಚಿನ ಮಾಹಿತಿಗೆ ಮಂಗಳೂರು ಬಸ್ ನಿಲ್ದಾಣ: 7760990720, ಹಾಸನ ಬಸ್ ನಿಲ್ದಾಣ: 7760990520, ಸಕಲೇಶಪುರ ಬಸ್ ನಿಲ್ದಾಣ: 7022030210, ಉಡುಪಿ ಬಸ್ ನಿಲ್ದಾಣ: 9663266400, ಕುಂದಾಪುರ ಬಸ್ ನಿಲ್ದಾಣ: 9663266009, ಕುಮಟ ಬಸ್ ನಿಲ್ದಾಣ: 7760991730, ಶಿರಸಿ: 7795984168, ಮಂಗಳೂರು ಘಟಕ: 7760990714/7760990728, ಅವತಾರ್: ಮಂಗಳೂರು-9663211553 ಮೊಬೈಲ್ ನಂಬರ್‍ಗಳನ್ನು ಸಂಪರ್ಕಿಸುವಂತೆ ಕರಾರಸಾಸಂಸ್ಥೆಯ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು