1:45 PM Monday17 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ ಒಂದೇ ಕುಟುಂಬದ 4 ಮಂದಿ ದಾರುಣ ಸಾವು

30/09/2024, 21:55

ಕಾರ್ಕಳ(reporterkarnataka.com): ಕಾರ್ಕಳ- ಧರ್ಮಸ್ಳಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ  ಕೋಟಿಚೆನ್ನಯ್ಯರ ಬಾವಿಯ ಸಮೀಪ ಈಚರ್ ಲಾರಿ ಮತ್ತು ಬೈಕ್ ಮಧ್ಯೆ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು ಸಹಿತ ಒಂದೇ ಕುಟುಂಬದ 4 ಮಂದಿ ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಸುರೇಶ್ ಅಚಾರ್ಯ  ಹಾಗೂ ಕುಟುಂಬ ಬೈಕಿನಲ್ಲಿ  ವೇಣೂರಿನಿಂದ ಕಾರ್ಕಳದತ್ತ ಪ್ರಯಾಣಿಸುತ್ತಿದ್ದ ವೇಳೆ    ಈಚರ್  ಕ್ಯಾಂಟರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಈಚರ್ ಕ್ಯಾಂಟರ್ ಲಾರಿ ಕಾರ್ಕಳದಿಂದ ಬೆಳ್ತಂಗಡಿ ಕಡೆಗೆ ಸಾಗುತಿತ್ತು. ಬೈಕಿನಲ್ಲಿದ್ದ  ಸುರೇಶ್ ಆಚಾರ್ಯ (36)ಸಮೀಕ್ಷಾ (7) ಸುಶ್ಮಿತಾ( ,5) ಸುಶಾಂತ್ (2)  ಮೃತಪಟ್ಟ ವರು. ಅಪಘಾತ ತೀವ್ರತೆಗೆ ಸ್ಥಳದಲ್ಲೇ  ಸುರೇಶ್ ಆಚಾರ್ಯ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಒಂದು ಮಗು ಆಸ್ಪತ್ರೆ ಸಾಗಿಸುವ ವೇಳೆ ಅಸು ನೀಗಿದೆ. ಕಾರನ್ನು ಓವರ್ ಟೇಕ್ ಮಾಡುವ ವೇಳೆ  ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ಲಾರಿ ಹಿಂಬದಿಗೆ  ಬೈಕ್  ಡಿಕ್ಕಿ ಹೊಡೆದಿದೆ.  ಎಂದು ಸ್ಥಳೀಯರು ತಿಳಿಸಿದ್ದಾರೆ
ಸುರೇಶ್ ಅವರ ಪತ್ನಿ ಮೀನಾಕ್ಷಿ( 32) ಗಂಭೀರ
ಗಾಯಗೊಂಡಿದ್ದು,ಉಡುಪಿ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ‌
ಸುರೇಶ್ ಆಚಾರ್ಯ ನಲ್ಲೂರಿನ ನಿವಾಸಿಯಾಗಿದ್ದು   ಕಮ್ಮಾರಿಕೆ ವೃತ್ತಿ ಮಾಡುತ್ತಿದ್ದರು .ವೇಣೂರಿನಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ನಲ್ಲೂರು ತನ್ನ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
*ಓವರ್ ಸ್ಪೀಡ್ ಅಪಘಾತ ಕ್ಕೆ ಕಾರಣವಾಯಿತೆ?:*
ವೇಣೂರಿನಿಂದ ಮಹಾಲಯ ಕಾರ್ಯಕ್ರಮ ಮುಗಿಸಿಕೊಂಡು ಬೈಕ್ ಹಿಂದುಗಡೆಯಿಂದ  ಸಮೀಕ್ಷಾ,  ಸುಶ್ಮಿತಾ ಸುಶಾಂತ್  ಹಾಗೂ ಪತ್ನಿ ಮೀನಾಕ್ಷಿ ಜೊತೆಗೆ ಬ್ಯಾಗ್ ಅನ್ನು ಹಿಡಿದು ಕೊಂಡು  ಒಂದು ಮಗುವನ್ನು ಬೈಕಿನ ಮುಂಭಾಗದಲ್ಲಿ ಕುಳ್ಳಿರಿಸಿ ಕೊಂಡು  ಓವರ್ಸ್ಪೀಡ್ನಲ್ಲಿ ಬರುತ್ತಿದ್ದರು. ಕಾರನ್ನು ಓವರ್ ಟೇಕ್  ಮಾಡುವ ಸಂದರ್ಭದಲ್ಲಿ  ವೇಗವು ಹೆಚ್ಚಿದ್ದು ಎದುರಿನಲ್ಲಿ ಬರುತ್ತಿದ್ದ ಕ್ಯಾಂಟರ್ ಲಾರಿಯ  ಹಿಂಬಾಗಕ್ಕೆ ಬೈಕ್ ಢಿಕ್ಕಿ ಹೊಡೆದಿದೆ.
*ಅಪಾಯಕಾರಿ ತಿರುವು:* ಪಾಜೆಗುಡ್ಡೆ ರಸ್ತೆ ಅಪಾಯಕಾರಿ ತಿರುವು ಹಾಗೂ ಇಳಿಜಾರು ಪ್ರದೇಶ ವಾಗಿದೆ.   ಕಳೆದ ಐದು ವರ್ಷಗಳಲ್ಲಿ ಹದಿನೈದಕ್ಕೂ ಹೆಚ್ಚು  ಅಪಘಾತಗಳು ಸಂಭವಿಸಿದ್ದು ಹತ್ತು  ಜನರು ಮೃತಪಟ್ಟಿದ್ದಾರೆ.ಕಳೆದ ಎರಡು ವರ್ಷಗಳಲ್ಲಿ ಕಾರ್ಕಳ  ಧರ್ಮಸ್ಥಳ ದ ಸಾಗುವ ರಾಜ್ಯ ಹೆದ್ದಾರಿ ಯ ಪಾಜೆಗುಡ್ಡೆ ಅಪಾಯಕಾರಿ  ತಿರುವನ್ನು   20 ಲಕ್ಷ ರೂಪಾಯಿ ವೆಚ್ಚದಲ್ಲಿ ಅಗಲೀಕರಣ ಗೊಳಿಸಲಾಗಿತ್ತು. ಈ ರಸ್ತೆ ಅರಣ್ಯ ಪ್ರದೇಶ ವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು