10:02 AM Tuesday3 - June 2025
ಬ್ರೇಕಿಂಗ್ ನ್ಯೂಸ್
ಎರಡು ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ… ಪ್ರಧಾನಿ ಮೋದಿ ಸಂಕಲ್ಪದಂತೆ ದೇಶಿಯ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಕೇಂದ್ರದಿಂದ ಬೃಹತ್‌ ಯೋಜನೆ:… ಕಡೂರು: ಮನೆ ಮುಂದೆ ನಿಲ್ಲಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರ ಕಾರಿನ… Chikkamagaluru | ಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪಿಕಪ್; ಇಬ್ಬರು… ರಾಜ್ಯದಲ್ಲಿ ಹುಕ್ಕಾ ಬಾರ್ ಗಳ ನಿಷೇಧಕ್ಕೆ ರಾಷ್ಟ್ರಪತಿ ಅಂಕಿತ: ತಂಬಾಕು ಉತ್ಪನ್ನ ಖರೀದಿ… ತುಮಕೂರು ಹೇಮಾವತಿ ನದಿ ಕೆನಾಲ್ ಯೋಜನೆ ಸಮಸ್ಯೆ ಬಗೆಹರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆ ನಿಷೇಧ: ಸರಕಾರದ ಅಧಿಸೂಚನೆ Koppala | ಮಾಹಿತಿ ಆಯೋಗವನ್ನು ಜನರ ಬಳಿ ಕೊಂಡೊಯ್ಯುವ ಚಿಂತನೆ: ರುದ್ರಣ್ಣ ಹರ್ತಿಕೋಟೆ ಇಬ್ಬರು ಮಕ್ಕಳು, ಎರಡೂ ಕಾಲು ಕಳೆದುಕೊಂಡ ಅಶ್ವಿನಿಗೆ ಸರಕಾರಿ ನೌಕರಿ ನೀಡಿ: ಬಿಜೆಪಿ… ಕೆಪಿಟಿಸಿಎಲ್ ಜಿಐಎಸ್ ಮ್ಯಾಪಿಂಗ್ ಅಪ್ಲಿಕೇಶನ್ ಬಿಡುಗಡೆ: ಭೂಗತ ಕೇಬಲ್ ಕಾಮಗಾರಿಗಳ ನೈಜ-ಸಮಯದ ಮಾಹಿತಿ…

ಇತ್ತೀಚಿನ ಸುದ್ದಿ

ದುಬೈ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಅಡ್ಡೂರಿನ ಮುಹಮ್ಮದ್ ಅಹ್ನಾಫ್ ಹುಸೈನ್ ರಚಿಸಿದ “ದಿ ಹೀರೋಯಿಕ್ ಟೇಲ್ಸ್ ಆಫ್ ಅನ್ನಾ ಎಂಡ್ ಸಾರ” ಬಿಡುಗಡೆ

15/11/2024, 12:21

ಶಾರ್ಜಾ(reporterkarnataka.com): ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ 43ನೆಯ ಆವೃತ್ತಿಯಲ್ಲಿ ದ.ಕ. ಜಿಲ್ಲೆಯ ಅಡ್ಡೂರಿನ ಪ್ರಸಕ್ತ ದುಬೈಯಲ್ಲಿ ಉದ್ಯಮಿಯಾಗಿರುವ ಅನ್ವರ್ ಹುಸೈನ್ ಮತ್ತು ಶಹನಾಝ್ ದಂಪತಿಯ ಪುತ್ರನಾದ ದುಬೈಯ ಜೆಮ್ಸ್ ಮಿಲೆನಿಯಮ್ ಶಾಲೆಯಲ್ಲಿ  ಐದನೆಯ ತರಗತಿಯಲ್ಲಿ ಕಲಿಯುತ್ತಿರುವ ಮುಹಮ್ಮದ್ ಅಹ್ನಾಫ್ ಹುಸೈನ್ ಆಂಗ್ಗ ಭಾಷೆಯಲ್ಲಿ ರಚಿಸಿದ ಕೃತಿ ಕಥಾ ಸಂಕಲನ “ದಿ ಹೀರೋಯಿಕ್ ಟೇಲ್ಸ್ ಆಫ್ ಅನ್ನಾ ಎಂಡ್ ಸಾರ” ಬಿಡುಗಡೆಗೊಂಡಿತು. ಶಾರ್ಜಾದ ಉದ್ಯಮಿ ಪ್ರಮೋದ್ ಅವರು ಕೃತಿಯನ್ನು ಬಿಡುಗಡೆಗೊಳಿಸಿ ನೂರ್ ಅಶ್ಫಕ್ ಕಾರ್ಕಳ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೃತಿಯನ್ನು ಸ್ವೀಕರಿಸಿದ ನೂರ್ ಅಶ್ಫಕ್ ರವರು ಮಾತನಾಡಿ, ಇಂದಿನ ಯುವ ಪೀಳಿಗೆ ಸೊಶಿಯಲ್ ಮೀಡಿಯಾದಲ್ಲಿ ಮುಳುಗಿರುವಾಗ ಸಣ್ಣ ಪ್ರಾಯದ ಅಹ್ನಾಫ್ ರವರ ಪ್ರಯತ್ನ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಕೃತಿಯನ್ನು ಬರೆದ ಅಹ್ನಾಫ್ ಮಾತನಾಡುತ್ತಾ ಪುಸ್ತಕಗಳನ್ನು ಓದುವ ಹವ್ಯಾಸ ಇದ್ದುದರಿಂದ ಕೆಲವೊಂದು ಪುಸ್ತಕಗಳಿಂದ ಪ್ರೇರಣೆ ಪಡೆದು ಈ ಕೃತಿಯನ್ನು ರಚಿಸಲು ಸಾಧ್ಯವಾಯಿತು ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು