3:48 AM Friday22 - May 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ…

ಇತ್ತೀಚಿನ ಸುದ್ದಿ

ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳಿಂದ ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಮತ್ತು ಮಜ್ಜಿಗೆ ವಿತರಣೆ

25/02/2025, 15:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಹಾಶಿವರಾತ್ರಿ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಹೊರ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಮಲೆನಾಡು ಪ್ರದೇಶದಲ್ಲಿ ವಿಶಿಷ್ಟ ಭಕ್ತಿಯ ಸ್ಮರಣೆ ಮೂಡಿಸಿತು. ದೈವ ಮಾನವ ಎಂದೇ ಹೆಸರುವಾಸಿಯಾಗಿದ್ದ ದಿ. ಮಹೇಂದ್ರ ಕುಮಾರ್ ಪಲ್ಗುಣಿ ಅವರ ಸವಿನೆನಪಿನಲ್ಲಿ ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳು ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು ಮತ್ತು ಮಜ್ಜಿಗೆ ಹಂಚುವ ಮೂಲಕ ಅವರ ಭಕ್ತಿಯ ನಮನವನ್ನು ಸಲ್ಲಿಸಿದರು.


ಈ ಪುಣ್ಯ ಕಾರ್ಯದಲ್ಲಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಸೇರಿದಂತೆ ಹಲವರು ಭಾಗವಹಿಸಿದರು. ಅವರ ಜೊತೆ ನಟ ತರುಣ್ ಶಿಶೀರ್, ಛಾಯಾಗ್ರಾಹಕರು ಪಿಕೆ ಹೆಚ್ ದಾಸ್, ರವಿಕುಮಾರ್ ಬೆಂಗಳೂರು, ರಾಕೇಶ್ ರೇವಣ್ಣ, ರಿಜ್ವಾನ್, ಪ್ರವೀಣ್ ಪೂಜಾರಿ, ನಿರಂಜನ್ ಜಿಂದಾಲ್, ಮತ್ತು ಪ್ರಕರ್ತಾ ಸಂತೋಷ್ ಅತ್ತಿಗೆರೆ ಹಾಜರಿದ್ದರು.
ಮರಡಿಹಳ್ಳಿ ನಾಗಚಂದ್ರ ಅವರ ಗುರು ಭಕ್ತಿ ಮತ್ತು ಬದುಕಿನ ಮೇಲೆ ಅವರ ಪ್ರಭಾವದ ಕಥೆ ವಿಶೇಷವಾಗಿದೆ. ಅವರು ಗುರುಗಳೊಂದಿಗೆ 25 ವರ್ಷಗಳ ಪರಿಚಯವನ್ನು ಹೊಂದಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನದಿಂದ “ನಾಗಚಂದ್ರ” ಎಂಬ ಹೆಸರನ್ನು ಬದಲಾಯಿಸಿ “ಮರಡಿಹಳ್ಳಿ ನಾಗಚಂದ್ರ” ಎಂಬ ಹೊಸ ಗುರುತನ್ನು ಗಳಿಸಿದರು. ಗುರುಗಳ ಸ್ಪೂರ್ತಿಯಿಂದ ಅವರ ಬದುಕಿಗೆ ದಾರಿ ದೀಪ ಸಿಕ್ಕಿತು. ಚಿತ್ರರಂಗದಲ್ಲಿ ಗುರುಗಳ ನಂಟು ಅಪಾರವಾಗಿದ್ದು, ಅವರಿಂದ ಪಡೆದ ಸ್ಫೂರ್ತಿಯಿಂದ नागಚಂದ್ರ ಅವರ ಚಿತ್ರಜೀವನ ಗಾಢವಾಗಿದೆ.

ಈ ಪ್ರಸಂಗವು ಗುರು-ಶಿಷ್ಯರ ಅಜರಾಮರ ಸಂಬಂಧವನ್ನು ಸ್ಮರಿಸಿತು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಸಂದೇಶವು ಈ ಕಾರ್ಯಕ್ರಮದ ಆತ್ಮವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು