11:26 PM Friday21 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳಿಂದ ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಮತ್ತು ಮಜ್ಜಿಗೆ ವಿತರಣೆ

25/02/2025, 15:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಹಾಶಿವರಾತ್ರಿ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಹೊರ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಮಲೆನಾಡು ಪ್ರದೇಶದಲ್ಲಿ ವಿಶಿಷ್ಟ ಭಕ್ತಿಯ ಸ್ಮರಣೆ ಮೂಡಿಸಿತು. ದೈವ ಮಾನವ ಎಂದೇ ಹೆಸರುವಾಸಿಯಾಗಿದ್ದ ದಿ. ಮಹೇಂದ್ರ ಕುಮಾರ್ ಪಲ್ಗುಣಿ ಅವರ ಸವಿನೆನಪಿನಲ್ಲಿ ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳು ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು ಮತ್ತು ಮಜ್ಜಿಗೆ ಹಂಚುವ ಮೂಲಕ ಅವರ ಭಕ್ತಿಯ ನಮನವನ್ನು ಸಲ್ಲಿಸಿದರು.


ಈ ಪುಣ್ಯ ಕಾರ್ಯದಲ್ಲಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಸೇರಿದಂತೆ ಹಲವರು ಭಾಗವಹಿಸಿದರು. ಅವರ ಜೊತೆ ನಟ ತರುಣ್ ಶಿಶೀರ್, ಛಾಯಾಗ್ರಾಹಕರು ಪಿಕೆ ಹೆಚ್ ದಾಸ್, ರವಿಕುಮಾರ್ ಬೆಂಗಳೂರು, ರಾಕೇಶ್ ರೇವಣ್ಣ, ರಿಜ್ವಾನ್, ಪ್ರವೀಣ್ ಪೂಜಾರಿ, ನಿರಂಜನ್ ಜಿಂದಾಲ್, ಮತ್ತು ಪ್ರಕರ್ತಾ ಸಂತೋಷ್ ಅತ್ತಿಗೆರೆ ಹಾಜರಿದ್ದರು.
ಮರಡಿಹಳ್ಳಿ ನಾಗಚಂದ್ರ ಅವರ ಗುರು ಭಕ್ತಿ ಮತ್ತು ಬದುಕಿನ ಮೇಲೆ ಅವರ ಪ್ರಭಾವದ ಕಥೆ ವಿಶೇಷವಾಗಿದೆ. ಅವರು ಗುರುಗಳೊಂದಿಗೆ 25 ವರ್ಷಗಳ ಪರಿಚಯವನ್ನು ಹೊಂದಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನದಿಂದ “ನಾಗಚಂದ್ರ” ಎಂಬ ಹೆಸರನ್ನು ಬದಲಾಯಿಸಿ “ಮರಡಿಹಳ್ಳಿ ನಾಗಚಂದ್ರ” ಎಂಬ ಹೊಸ ಗುರುತನ್ನು ಗಳಿಸಿದರು. ಗುರುಗಳ ಸ್ಪೂರ್ತಿಯಿಂದ ಅವರ ಬದುಕಿಗೆ ದಾರಿ ದೀಪ ಸಿಕ್ಕಿತು. ಚಿತ್ರರಂಗದಲ್ಲಿ ಗುರುಗಳ ನಂಟು ಅಪಾರವಾಗಿದ್ದು, ಅವರಿಂದ ಪಡೆದ ಸ್ಫೂರ್ತಿಯಿಂದ नागಚಂದ್ರ ಅವರ ಚಿತ್ರಜೀವನ ಗಾಢವಾಗಿದೆ.

ಈ ಪ್ರಸಂಗವು ಗುರು-ಶಿಷ್ಯರ ಅಜರಾಮರ ಸಂಬಂಧವನ್ನು ಸ್ಮರಿಸಿತು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಸಂದೇಶವು ಈ ಕಾರ್ಯಕ್ರಮದ ಆತ್ಮವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು