7:20 PM Monday25 - May 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ… ದುಬಾರೆಯಲ್ಲಿ ಆನೆಗಳ ಸ್ನಾನ ನಾಳೆಯಿಂದ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ:… ಕೊಡಗಿನ ತಮ್ಮ ಕಾಫಿ ಎಸ್ಟೇಟ್‌ಗೆ ನುಗ್ಗಿದ ಆನೆಗಳ ಹಿಂಡಿನ ವಿಡಿಯೋ ಹಂಚಿಕೊಂಡ ಉದ್ಯಮಿ…

ಇತ್ತೀಚಿನ ಸುದ್ದಿ

ಅಮ್ಮನ ಸಾವಿನ ದುಃಖದಲ್ಲೂ ಛಲ ಬಿಡದೆ ಪರೀಕ್ಷೆ ಬರೆದ ದಿಶಾ ಸ್ಟೇಟ್ ಗೆ ಟಾಪರ್!: ಕರಾವಳಿ ಹುಡ್ಗಿಯ ಮಹಾ ಸಾಧನೆ

09/04/2026, 18:39

ಮಂಗಳೂರು(reporterkarnataka.com): ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆಯ ಈ ಸಾಧನೆಯನ್ನು ನೋಡಿ ಇಡೀ ನಾಡು ಸಂಭ್ರಮಿಸುತ್ತಿದೆ. ಆದರೆ, ಈ ನಗುವಿನ ಮುಖದ ಹಿಂದೆ ಯಾರೂ ಊಹಿಸಲಾಗದಷ್ಟು ದೊಡ್ಡ ಶೋಕವೊಂದಿದೆ.
ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ದಿಶಾ ಬಹಳ ಹುಮ್ಮಸ್ಸಿನಿಂದ ಹಾಗೂ ಅಷ್ಟೇ ಶ್ರದ್ಧೆಯಿಂದ ತನ್ನ ಮೊದಲ ಮೂರು ಪರೀಕ್ಷೆಗಳನ್ನು ಬರೆದು ಮುಗಿಸಿದ್ದಳು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಮೂರು ಪರೀಕ್ಷೆಗಳು ಮುಗಿಯುತ್ತಿದ್ದಂತೆ ದಿಶಾ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆತ್ತ ತಾಯಿಯನ್ನು ಕಳೆದುಕೊಂಡಳು. ಅಮ್ಮನಿಲ್ಲದ ಆ ಘೋರ ಕ್ಷಣ ಆಕೆಯ ಪಾಲಿಗೆ ಅಕ್ಷರಶಃ ಸಿಡಿಲು ಬಡಿದಂತಿತ್ತು.

*ಕಣ್ಣೀರು ಒರೆಸಿಕೊಳ್ಳುತ್ತಲೇ ಪರೀಕ್ಷಾ ಕೇಂದ್ರಕ್ಕೆ!*
ತನ್ನನ್ನು ಹೆತ್ತು ಹೊತ್ತು ಬೆಳೆಸಿದ ತಾಯಿಯ ಮೃತದೇಹದ ಮುಂದೆ ನಿಂತು ರೋಧಿಸುತ್ತಿದ್ದ ಆ ಕಂದಮ್ಮನ ಕಣ್ಣೀರು ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ತಾಯಿಯ ಅಗಲಿಕೆಯ ಆ ಭೀಕರ ನೋವನ್ನು ಎದೆಗವಚಿಕೊಂಡು, ಉಕ್ಕಿ ಬರುವ ಕಣ್ಣೀರನ್ನು ತಡೆಯುತ್ತಲೇ ಆಕೆ ತನ್ನ ಉಳಿದ ಪರೀಕ್ಷೆಗಳನ್ನು ಬರೆಯಲು ಮುಂದಾದಳು. ಎದೆ ಸೀಳುವಂತಹ ನೋವಿದ್ದರೂ, ತನ್ನ ಅಮ್ಮನ ಕನಸನ್ನು ನನಸು ಮಾಡಬೇಕೆಂಬ ಆಕೆಯ ಛಲ ಮಾತ್ರ ಒಂದು ಚೂರು ಕಡಿಮೆಯಾಗಲಿಲ್ಲ.

*’ಅಮ್ಮಾ.. ನಾನು ಮಾಡಿಬಿಟ್ಟೆ..*
ಫಲಿತಾಂಶ ಬಂದಾಗ ತನಗೆ 600ಕ್ಕೆ 600 ಅಂಕ ಬಂದಿದೆ ಎಂದು ತಿಳಿಯುತ್ತಿದ್ದಂತೆ ದಿಶಾ ಗಟ್ಟಿಯಾಗಿ ಕೂಗಿದಳು. “ಅಮ್ಮಾ.. ನಾನು ಮಾಡಿಬಿಟ್ಟೆ, ನಿನ್ನ ಆಸೆಯಂತೆ ನಾನು ಸ್ಟೇಟ್‌ಗೆ ಫಸ್ಟ್ ಬಂದೆ” ಎಂದುಹೇಳಿದಳು. ತನ್ನ ಗೆಲುವನ್ನು ಅಪ್ಪಿಕೊಂಡು ಸಂಭ್ರಮಿಸಲು ಇಂದು ತನ್ನ ಹೆತ್ತವ್ವನೇ ಇಲ್ಲವಲ್ಲ ಎಂಬ ನೋವು ಅವಳ ಕಣ್ಣೀನಲ್ಲಿ ಕಾಣುತ್ತಿತ್ತು.

*’ಅಮ್ಮನೇ ನನ್ನ ಬೆನ್ನಿನ ಆಸರೆಯಾಗಿದ್ದಳು’*
“ನಾನು ಚೆನ್ನಾಗಿ ಓದಬೇಕು, ದೊಡ್ಡ ಸಾಧನೆ ಮಾಡಬೇಕು ಎಂದು ಅಮ್ಮ ಸದಾ ಹೇಳುತ್ತಿದ್ದಳು. ಅವಳು ಇದ್ದಾಗ ನನಗೆ ಸಿಕ್ಕಾಪಟ್ಟೆ ಸಹಾಯ ಮಾಡುತ್ತಿದ್ದಳು. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆಯ ಪ್ರೀತಿಯಿತ್ತು. ಇಂದು ಈ ರಿಸಲ್ಟ್ ನೋಡಲು ಅವಳಿದ್ದಿದ್ದರೆ ಎಷ್ಟೊಂದು ಸಂತೋಷ ಪಡುತ್ತಿದ್ದಳೋ.. ಈಗಲೂ ಮೇಲಿಂದ ನೋಡಿ ಅಮ್ಮ ಖಂಡಿತ ಸಂತೋಷ ಪಡುತ್ತಿದ್ದಾಳೆ ಅಂತ ನನಗೆ ಗೊತ್ತು” ಎಂದು ಗದ್ಗದಿತಳಾಗಿ ದಿಶಾ ನುಡಿದಿದ್ದಾಳೆ.

*ಪರೀಕ್ಷಾ ಕೇಂದ್ರದಲ್ಲಿ ಕಣ್ಣೀರ ಧಾರಾಕಾರ*
ಮನೆಯಲ್ಲಿ ತಾಯಿಯಿಲ್ಲದ ಶೂನ್ಯತೆ ಕಾಡುತ್ತಿದ್ದರೆ, ಇತ್ತ ಪರೀಕ್ಷಾ ಕೇಂದ್ರದಲ್ಲಿ ದಿಶಾಳ ಕಣ್ಣುಗಳಿಂದ ಅಶ್ರುಧಾರೆ ಹರಿಯುತ್ತಲೇ ಇತ್ತು. ಪ್ರತಿ ಬಾರಿ ಉತ್ತರ ಬರೆಯುವಾಗಲೂ ಅಮ್ಮನ ನೆನಪುಗಳು ಆಕೆಯನ್ನು ಕಾಡುತ್ತಿದ್ದವು. ಆದರೂ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ತನ್ನ ತಾಯಿಯ ಮೇಲಿದ್ದ ಅಪಾರ ಪ್ರೀತಿಯನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಳು. ಅಮ್ಮನ ಕನಸಿಗೆ ಎಂದಿಗೂ ದ್ರೋಹ ಬಗೆಯಬಾರದು ಎಂಬ ದೃಢ ಸಂಕಲ್ಪವೇ ಆಕೆಯನ್ನು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡಿತು.
ನೋವನ್ನೇ ಮೆಟ್ಟಿಲಾಗಿ ಮಾಡಿಕೊಂಡ ಸಾಧಕಿ ತಾಯಿಯ ಸಾವಿನಂತಹ ದೊಡ್ಡ ಆಘಾತ ಬಂದರೂ ದಿಶಾ ಮಾಡಿದ ಸಾಧನೆ ನಿಜವಾಗಿಯೂ ಅದ್ವಿತೀಯ. ಬೆಟ್ಟದಷ್ಟು ದುಃಖ ಇದ್ದರೂ ಗುರಿಯ ಮೇಲೆ ಗಮನ ಕಳೆದುಕೊಳ್ಳದ ಆಕೆಯ ಮನೋಬಲ ಇಂದಿನ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ.ರಾಜ್ಯಕ್ಕೆ 1st ಸ್ಥಾನ ಬಂದರೂ ಅಮ್ಮನಿಲ್ಲದ ಖಾಲಿತನ ದಿಶಾಳನ್ನು ಕಾಡುತ್ತಿದೆ. ದಿಶಾಳ ಕಣ್ಣೀರನ್ನು ನೋಡಿ ಇಡೀ ಕರುನಾಡು ಕರಗಿದ್ದು, ಆಕೆಯ ಭವಿಷ್ಯ ಬಂಗಾರವಾಗಲಿ ಎಂದು ಹಾರೈಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು