4:19 PM Thursday9 - July 2026
ಬ್ರೇಕಿಂಗ್ ನ್ಯೂಸ್
ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;… Kodagu | ಮಡಿಕೇರಿ ರಾಜಾಸೀಟ್ ನಾಳೆಯಿಂದ ಜುಲೈ 12ರವರೆಗೆ ಕ್ಲೋಸ್: ಜಿಲ್ಲಾಧಿಕಾರಿ ಆದೇಶ ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ…

ಇತ್ತೀಚಿನ ಸುದ್ದಿ

ದೇಶದಲ್ಲಿ ಎರಡು ಮನಸ್ಥಿತಿಗಳ ನಡುವೆ ಯುದ್ದ ನಡೆಯುತ್ತಿದೆ: ಸಂತ ಮದರ್ ತೆರೇಸಾ 27ನೇ ಸಂಸ್ಮರಣಾ ಸಮಾರಂಭದಲ್ಲಿ ಸಸಿಕಾಂತ್ ಸೆಂಥಿಲ್

03/09/2024, 19:06

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಎರಡು ಮನಸ್ಥಿತಿಗಳ ನಡುವೆ ದೇಶದಲ್ಲಿ ದೊಡ್ಡ ಯುದ್ದ ನಡೆಯುತ್ತಿದೆ. ಒಂದು ಎಲ್ಲರನ್ನೂ ಸಮಾನತೆಯಿಂದ ನೋಡುವುದು, ಮತ್ತೊಂದು ಮೇಲು- ಕೀಳು ಭಾವನೆಯಿಂದ ನೋಡುವುದು. ಗಾಂಧೀಜಿಯವರು ಸಮಾನತೆಗಾಗಿ ಹೋರಾಟ ನಡೆಸಿದವರು. ನಮ್ಮ ದೇಶದ ರೈತರಲ್ಲಿ ಬಟ್ಟೆ ಇಲ್ಲ ಎಂಬ ಕಾರಣಕ್ಕೆ ಅವರು ಧೋತಿ ಮಾತ್ರ ಹಾಕಿಕೊಂಡರು ಎಂದು ದ.ಕ. ಜಿಲ್ಲಾಧಿಕಾರಿ ಆಗಿದ್ದ ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದರು.
ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಹಾಗೂ ಸಾಮರಸ್ಯ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷ ವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾ ಅವರ 27ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ ಎಂಬ ವಿಷಯದಲ್ಲಿ ದ.ಕ‌.ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ನಾನು ಕೆಲಸ ಬಿಟ್ಟು ಹೋಗಿದ್ದೆ. ಕೆಲಸ ಕಂಪ್ಲೀಟ್ ಆಗಿಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ. ಆದರೆ ಮಂಗಳೂರು ಜೊತೆಗೆ ಬಿಡಲಾರದ ನೆಂಟು ಇಟ್ಟುಕೊಂಡಿದ್ದೇನೆ. ಮಂಗಳೂರು ಸ್ಟೇಟ್ ಆಫ್ ಇಂಡಿಯಾ ಮೊದಲ ಸಿಟಿ ಎಂದರು.
ಮಂಗಳೂರಿನಲ್ಲಿ ಇರುವಷ್ಟು ವೈವಿಧ್ಯ ಬೇರೆ ಕಡೆ ಇಲ್ಲ. ಇದು ಮಿನಿ ಇಂಡಿಯಾ. ವಿಭಿನ್ನತೆಯ ಆಚರಣೆ ಮಾಡಲು ನಾವು ಕಲಿಯಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಎರಡು ಮನಸ್ಥಿತಿ ಇದೆ. ಒಂದು ಎಲ್ಲರನ್ನೂ ಸಮಾನತೆಯಿಂದ ನೋಡುವುದು, ಮತ್ತೊಂದು ಮೇಲು ಕೀಳು ಭಾವನೆಯನ್ನು ಹೊಂದಿದ್ದು. ತುಂಬ ವರ್ಷಗಳಿಂದ ಈ ಮನಸ್ಥಿತಿಗಳ ನಡುವೆ ಯುದ್ಧ ಆಗ್ತಾನೇ ಇದೆ. ಈಗಲೂ ವರ್ಚಸ್ಸು ಮತ್ತು ಸಮಾನತೆಯ ಯುದ್ಧ ಇದೆ. ನಮ್ಮ ಸ್ವಾತಂತ್ರ ಹೋರಾಟ ಕೇಳಿದರೆ ಬ್ರಿಟಿಷ್ ವಿರುದ್ಧದ ಹೋರಾಟ ಅಂತ ಹೇಳ್ತಾರೆ. ಆದರೆ 70℅ ಸಮಾನತೆಗಾಗಿ ಹೋರಾಟ ಮಾಡಿರುವುದು. ನನ್ನ ದೇಶದ ರೈತರಲ್ಲಿ ಬಟ್ಟೆ ಇಲ್ಲ ಎಂದು ಗೊತ್ತಿದ್ದೇ ಗಾಂಧೀಜಿಯವರು ಧೋತಿ ಮಾತ್ರ ಹಾಕಿಕೊಂಡರು. ಗಾಂಧೀಜಿ ಮಾಡಿದ್ದು ಸಮಾನತೆಗಾಗಿ ಹೋರಾಟ, ಬ್ರಿಟಿಷರ ವಿರುದ್ಧ ಅಲ್ಲ ಎಂದು ಅವರು ನುಡಿದರು.
ಸಂವಿಧಾನದಲ್ಲಿ ಸಮಾನತೆಗಾಗಿ ಕಾನೂನು ಮಾಡಿದ್ದೇವೆ. ಇದನ್ನು ಬಹಳ ಜನ ಒಪ್ಪಲಿಲ್ಲ. ಈಗಲು ಒಪ್ಪುವುದಿಲ್ಲ. ನಾನು ತಮಿಳುನಾಡಿನಲ್ಲಿ ಹುಟ್ಟಿದ್ದು. 30 ವರ್ಷ ಅಲ್ಲೇ ಇದ್ದೆ. ಈಗ ಕನ್ನಡ, ಹಿಂದಿ ಕಲಿತಿದ್ದೇನೆ. ನಾವೆಲ್ಲ ಬೇರೆ ಬೇರೆ ಜಾತಿ, ಭಾವನೆಯವರು. ಆದರೆ, ಬ್ರಿಟಿಷರ ವಿರುಧ್ಧ ಒಗ್ಗಟ್ಟಿನ ಹೋರಾಟ ಮಾಡಿದ್ದೇವೆ ಎಂದರು.
ನಮ್ಮಲ್ಲಿ ಸಹಾನುಭೂತಿಯ ಭಿನ್ನತೆ ಇಲ್ಲ. ಸೆಲಬ್ರೇಟೆಡ್ ಭಿನ್ನತೆ ಇದೆ. ದಿವಾಳಿ, ರಂಜಾನ್ ಜೊತೆಯಾಗಿ ಆಚರಣೆ ಮಾಡುತ್ತೇವೆ. ಇದು ಐಡಿಯಾ ಆಫ್ ಇಂಡಿಯಾ. ವಿಭಿನ್ನತೆ ಇದ್ದರೂ ಸಮಾನತೆಯನ್ನು ತೋರಿಸುತ್ತಿದ್ದೇವೆ. ಸಂವಿಧಾನದ ಕಾರಣ ನಾವೆಲ್ಲ ಜೊತೆಗಿದ್ದೇವೆ. ದೇವರು ಬೇರೆ ಬೇರೆ ರೂಪದಲ್ಲಿ ಇರೋದಲ್ಲ. ನಮಗೆ ಸಂವಿಧಾನದ ರೂಪದಲ್ಲಿ ದೇವರು ಇದ್ದಾನೆ.
ಸಂಸತ್ತಿನಲ್ಲಿ ಪ್ರತಿಜ್ಞೆ ಸ್ವೀಕರಿಸುವಾಗ ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದುಕೊಂಡಿದ್ದೆ ಎಂದು ಅವರು ನುಡಿದರು.
ಪಾಲಿಟಿಕ್ಸ್ ಮಕ್ಕಳಿಗೆ ಏನು ಒಳ್ಳೆದು ಬೇಕು ಅದನ್ನು ಮಾಡಬೇಕು. ಶಾಂತಿ, ಸೌಹಾರ್ದತೆ, ನೆಮ್ಮದಿ ಅಷ್ಟೇ ನಮಗೆ ಬೇಕು. ಅದನ್ನು ನೋಡಿಕೊಂಡು ಪಾಲಿಟಿಕ್ಸ್ ಮಾಡಬೇಕು. ಮುಖ್ಯ ವಾಹಿನಿಯ ಪಾಲಿಟಿಕ್ಸ್ ಇಲ್ಲಾಂದ್ರೆ ನಮಗೆ ಭವಿಷ್ಯ ಇರಲ್ಲ ಎಂದರು.
ಸ್ಪರ್ಧೆ ಯಾಕೆ ಬೇಕು, ನಾವು ಸಹಕಾರ ಮಾಡಿಕೊಳ್ಳಬೇಕು. ಬುಡಕಟ್ಟು ಸಂಸ್ಕೃತಿಯಲ್ಲಿ ಸ್ಪರ್ಧೆ ಇಲ್ಲ. ಮಕ್ಕಳಲ್ಲಿ ನಾವು ಸ್ಪರ್ಧೆ ಭಾವನೆಯನ್ನು ಹೋಗಲಾಡಿಸಬೇಕು. ಸಹಕಾರದ ಭಾವನೆ ಬೆಳೆಸಬೇಕು. ನನ್ನ ಕೆಲಸ ಮುಗಿದಿಲ್ಲ. ಸಾಮರಸ್ಯ, ಸಮಾನತೆಯನ್ನು ನಂಬುವವರು ಈ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.


ನಂಬದೇ ಇರೋರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರೀತಿ ಇರೋರು ಮಂಗಳೂರನ್ನು ಕಟ್ಟಬೇಕು. ನಾವೆಲ್ಲ ದೇಶ, ಸಮಾಜಕ್ಕೆ ಅಲ್ಲ. ಮಕ್ಕಳಿಗೋಸ್ಕರ ಒಳ್ಳೆ ಸಮಾಜ ಕೊಡದೆ ಇದ್ದರೆ ಹೇಗೆ. ನಾವು ಒಟ್ಟಿಗೆ ಸೇರಬೇಕು. ಸಾಮರಸ್ಯದ ಸಂಸ್ಕೃತಿಯನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಅವರು ನುಡಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಾಮಾಜಿಕ ಚಿಂತಕಿ ಹಾಗೂ ಸಾಹಿತಿ ಆಯಿಶಾ ಫರ್ಝಾನಾ ಯು.ಟಿ., ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ,
ಸಾಮರಸ್ಯ ಮಂಗಳೂರು ಅಧ್ಯಕ್ಷರಾದ ಮಂಜುಳಾ ನಾಯಕ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಜತ್ತಬೈಲ್, ಸಂತ ಮದರ್ ತೆರೇಸಾ ವಿಚಾರ ವೇದಿಕೆ ಖಜಾಂಚಿ ಡೋಲ್ಫಿ ಡಿಸೋಜ, ಮಾಧ್ಯಮ ಸಮಿತಿ ಸಂಚಾಲಕ ಸ್ಟಾನಿ ಡಿಕುನ್ನಾ, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಉಪಾಧ್ಯಕ್ಷ ಇಲಿಯಾಸ್ ಫರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು