6:16 AM Wednesday1 - July 2026
ಬ್ರೇಕಿಂಗ್ ನ್ಯೂಸ್
ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ… ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ…

ಇತ್ತೀಚಿನ ಸುದ್ದಿ

Chikkamagaluru | ಮೂಡಿಗೆರೆ: ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬ ಉತ್ಸವ, ಕೆಂಡ ಸೇವೆ

07/04/2025, 19:56

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ತಾಲೂಕಿನ ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬ ನಡೆಯಿತು.
ಅಜ್ಜಮ್ಮ ಹಾಗೂ ನಾಗಲಮ್ಮ ದೇವರುಗಳ ಜಾತ್ರಾ ಮಹೋತ್ಸವ ಒಂದು ವಾರದಿಂದ ನಡೆಯುತ್ತಿದೆ.
ಭಾನುವಾರ ರಾತ್ರಿಯಿಂದ ಪ್ರಾರಂಭವಾದ ರಾತ್ರಿ ಸುಗ್ಗಿ ಹಾಗೂ ಸೋಮವಾರ ಹಗಲು ಸುಗ್ಗಿ ನಡೆಯಿತು.


ಸುತ್ತಮುತ್ತಲ ನೂರಾರು ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು ಭಾನುವಾರ ರಾತ್ರಿ ನಿಸಾನಿ ಶಬ್ದಕ್ಕೆ ದೇವರ ಅಡ್ಡಿಯೊಂದಿಗೆ ಯುವಕರು ಹೆಜ್ಜೆ ಹಾಕುವುದು ಕಂಡುಬಂತು. ಸೋಮವಾರ ಬೆಳಗ್ಗೆ ಕೆಂಡೋತ್ಸವ ನಡೆಯಿತು.
ಈ ಜಾತ್ರಾ ಮಹೋತ್ಸವಕ್ಕೆ ಅರಮನೆ ತಲಗೂರು,ಮಾಳಿಂಗ ನಾಡು, ಹೆಮ್ಮಕ್ಕಿ, ಬಿಳಗಲಿ, ನೆರಂಕಿ. ಬಲಿಗೆ. ಸುಂಕ ಸಾಲೆ. ಕೆ‌ಳಗೂರು ಮೊದಲಾದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ. ಲೋಕಪ್ಪ ಗೌಡ. ಕೃಷ್ಣೇಗೌಡ. ಅಭಿಜಿತ್. ಮಂಜಪ್ಪ ಶೆಟ್ಟಿ. ಶಂಕರ್ ಶೆಟ್ಟಿ. ಲಕ್ಷ್ಮಣ್ ಗೌಡ್ರು. ಶಂಕರಗೌಡ. ರವಿಚಂದ್ರ. ಸುಧಾಕರ, ರಾಮಚಂದ್ರ, ರತ್ನಾಕರ್, ಅಶ್ವಥ್, ಸುದರ್ಶನ್ ಮೊದಲಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು