10:54 PM Friday21 - February 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ಅಭಿವೃದ್ಧಿ ಸೊನ್ನೆ, ಬಿಬಿಎಂಪಿ ಚುನಾವಣೆ ನಡೆಸಿ: ಸರಕಾರಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಳೆ ಬೆಳೆಗೆ ದೃಷ್ಟಿ ತಾಗದಂತೆ ಅರೆಬೆತ್ತಲೆ ಮಾಡಲ್ ಗಳ ಫೋಟೋ ಅಳವಡಿಸಿದ ಕಿಲಾಡಿ… ಹಾವೇರಿ ಜಾನಪದ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ?: ರಾಜಕೀಯ ಕರಿನೆರಳು.!? State Budget | ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ… Deeptech & AI | ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನವೋದ್ಯಮಗಳಿಗೆ ನೆರವು: ಸಚಿವದ್ವಯರಾದ… ಇಂದಿರಾ ಕ್ಯಾಂಟಿನಿನಲ್ಲಿ ಕಳಪೆ ಗುಣಮಟ್ಟದ ಆಹಾರ: ಗುತ್ತಿಗೆ ರದ್ದುಪಡಿಸಲು ಕರವೇ ಒತ್ತಾಯ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲಾಕ್ ಪೇಪರ್ ಬಿಡುಗಡೆ: ಮಾಜಿ ಸಿಎಂ ಬಸವರಾಜ… Lokayukta | ಮುಡಾ ಹಗರಣದಲ್ಲಿ ಸಿಎಂಗೆ ಕ್ಲೀನ್ ಚಿಟ್ ನಿರೀಕ್ಷಿತ: ಹುಬ್ಬಳ್ಳಿಯಲ್ಲಿ ಕೇಂದ್ರ… ನಂಜನಗೂಡು: ಆಹಾರ ಸುರಕ್ಷತಾ ಅಧಿಕಾರಿಗಳಿಂದ ಹೋಟೆಲ್ ಗಳಿಗೆ ದಿಢೀರ್ ದಾಳಿ; ಇಡ್ಲಿ ತಯಾರಿಕೆಯಲ್ಲಿ… ಲಿಂಗಸುಗೂರ: ಉದ್ಯೋಗ ಖಾತ್ರಿ ಅನುದಾನ ದುರ್ಬಳಕೆ; ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ,…

ಇತ್ತೀಚಿನ ಸುದ್ದಿ

ಕತಾರ್ ನ “ತುಳು ಜಾತ್ರೆ” ಯಲ್ಲಿ ಮಿಂಚಿದ ಬಿಲ್ಲವಾಸ್ ಕತಾರ್ ನ “ಅಮ್ಮನ ತಮ್ಮನ” ತಂಡ

20/02/2025, 21:33

ದೋಹಾ(reporterkarnataka.com): ‘ತುಳು ಕೂಟ ಕತಾರ್’ ಆಶ್ರಯದಲ್ಲಿ “ತುಳು ಜಾತ್ರೆ” “ಐಡಿಯಲ್ ಇಂಡಿಯನ್ ಸ್ಕೂಲ್”, ಕತಾರ್ ನ ರಂಗವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು. ತುಳುವರ ಪಾರಂಪರಿಕ ಪರಿಕಲ್ಪನೆ “ತುಳು ಜಾತ್ರೆ” ಯ ಅಂಗವಾಗಿ ನೃತ್ಯ,ಯಕ್ಷಗಾನ, ಪ್ರತಿಭಾ ಪುರಸ್ಕಾರ, ಜಾನಪದ ಆಟಗಳು ಮತ್ತು ವಿವಿಧ ತುಳು ನಾಡಿನ ತಿನಿಸುಗಳ ಪ್ರದರ್ಶನಗೊಂಡಿತು. ಸಾವಿರಗಟ್ಟಲೆ ಜನರು ಭಾಗವಹಿಸಿ ತಮ್ಮ ಊರಿನ ಜಾತ್ರೆಯ ಆನಂದವನ್ನು ಕತಾರ್ ನ ಮಣ್ಣಿನಲ್ಲಿ ಅನುಭವಿಸಿದರು.
ಬಿಲ್ಲವಾಸ್ ಕತಾರ್ ನ ಅವಿಭಾಜ್ಯ ಅಂಗವಾದ “ಅಮ್ಮನ ತಮ್ಮನ” ತಂಡದವರು ವಿಶೇಷವಾದ ಆಕರ್ಷಣೆಯೊಂದಿಗೆ ಎಲ್ಲರಿಗಿಂತ ವಿಭಿನ್ನವಾಗಿ ತಮ್ಮ ತಿನಿಸಂಗಡಿಯನ್ನು ಅಲಂಕಾರ ಮಾಡಿದ್ದು ಹಾಗೂ ವಿಶೇಷವಾಗಿ ಮನೆಯಲ್ಲಿ ಸಿದ್ದಪಡಿಸಿದ ಅಡುಗೆ ಜನರ ಮನ ತಣಿಸುವುದರೊಂದಿಗೆ ಭಾರೀ ಮನ್ನಣೆಯನ್ನು ಪಡೆಯುವಲ್ಲಿ ಸಾರ್ಥಕವಾಯಿತು.
ತುಳು ಜಾತ್ರೆಯಲ್ಲಿ ಪ್ರತೀ ಭಾರಿ ವಿಭಿನ್ನ ರೀತಿಯಲ್ಲಿ ಕಂಗೊಳಿಸುವ “ಅಮ್ಮನ ತಮ್ಮನ” ತಂಡದ ಇದು ಮೂರನೆಯ ವರ್ಷದ ಪ್ರದರ್ಶನವಾಗಿದೆ ಎನ್ನುವುದು ಉಲ್ಲೇಖನೀಯ.
ಈ ಭಾರಿಯ ರುಚಿ ರುಚಿ ಅಡುಗೆ ಮತ್ತು ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಮನ ಸೋತ ತುಳು ಕೂಟ ಕತಾರ್, “ಅಮ್ಮನ ತಮ್ಮನ” ತಂಡದವರನ್ನು ಅತ್ಯುತ್ತಮ ತಂಡವೆಂದು ಘೋಷಿಸಿ ಪ್ರಶಸ್ತಿಯನ್ನಿತ್ತು ಮನ್ನಿಸಿತು. “ಅಮ್ಮನ ತಮ್ಮನ” ತಂಡದವರ ಪರಿಶ್ರಮಕ್ಕೆ ಸಂದ ಸಮಯೋಚಿತ ಗೌರವವಿದು.

ಇತ್ತೀಚಿನ ಸುದ್ದಿ

ಜಾಹೀರಾತು