5:45 PM Wednesday17 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಬಳ್ಳಾರಿ: ‘ಸ್ಟೀಲ್ ಸಿಟಿ ರನ್’ ನಲ್ಲಿ 4 ಸಾವಿರ ಜನರು ಭಾಗಿ; 10 ಕಿಮೀ. ನಲ್ಲಿ ಮಹಾರಾಷ್ಟ್ರದ ರಾಹುಲ್ ಸಂಘೀ ಪ್ರಥಮ

04/08/2024, 21:28

ಗಣೇಶ ಇನಾಂದಾರ ಬಳ್ಳಾರಿ

info.reporterkarnataka@gmail.com
ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನಿಂದ ಆಯೋಜಿಸಿದ್ದ ‘ಸ್ಟೀಲ್ ಸಿಟಿ ರನ್’ ಓಟದಲ್ಲಿ ಭಾರತದ ವಿವಿಧ 11 ರಾಜ್ಯಗಳ 4 ಸಾವಿರಕ್ಕೂ ಜನರು ಭಾಗವಹಿಸಿದ್ದರು.
10 ಕಿ.ಮೀ. ನಲ್ಲಿ ಮಹಾರಾಷ್ಟ್ರದ ರಾಹುಲ್ ಸಂಘೀ ಹಾಗೂ 5 ಕಿ.ಮೀ.ನಲ್ಲಿ ಬೆಳಗಾವಿಯ ಶಿವಾನಂದ ಲಕ್ಷ್ಮಣ ಶಿಗಾರೆ ಅವರು ಅತಿ ವೇಗದ ಓಟಗಾರರಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದವರಿಗೆ 5, ದ್ವಿತೀಯ ಸ್ಥಾನ ಪಡೆದವರಿಗೆ 3 ಮತ್ತು ತೃತೀಯ ಸ್ಥಾನ ಪಡೆದವರಿಗೆ 2 ಸಾವಿರ ರೂ ಬಹುಮಾನವನ್ನು ಶಾಸಕ ಭರತ್ ರೆಡ್ಡಿ, ಎಸ್ಪಿ ಡಾ.ಶೋಭಾರಾಣಿ ನೀಡಿದರು.
ಮಹಿಳಾ ವಿಭಾಗದ ವಿಜೇತರಿಗೆ ಡಾ.ಸೋಮನಾಥ, ಮಂಜು ಮೋದಿ ಅವರು ಬಹುಮಾನ ವಿತರಿಸಿದರು. 10 ಕಿ.ಮೀ. ಓಟದಲ್ಲಿ 5ಕ್ಕೂ ಹೆಚ್ಚು ಜನ, 5 ಕಿಲೋ ಮೀಟರ್ ಓಟದಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಹಾಗು 3 ಕಿ.ಮೀ ಓಟದಲ್ಲಿ 350ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಶೇ. 30ಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರು ಭಾಗವಹಿಸಿದ್ದರು.
ಇದರಲ್ಲಿ ಮಹಾರಾಷ್ಟ್ರ, ಆಂಧ್ರ
ಪ್ರದೇಶ, ತೆಲಂಗಾಣ, ತಮಿಳುನಾಡು ಮೊದಲಾದ 11 ರಾಜ್ಯಗಳ ಹಾಗೂ ಕಿನ್ಯಾ ದೇಶದ ಓರ್ವ ಓಟಗಾರ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜನರು ಆರೋಗ್ಯದಿಂದ ಇರಲು ದಿನ ನಿತ್ಯ ಒಂದಿಷ್ಟು ಓಟದ ಅಭ್ಯಾಸದ ಬಗ್ಗೆ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜಿಸಿತ್ತು.
ಇದು 3ನೇ ವರ್ಷದ ಓಟವಾಗಿದೆ.
ಬೆಳಗ್ಗೆ ಓಟಕ್ಕೆ ತೋರಣಗಲ್ಲಿ ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಮುರುಗನ್, ಎಸ್ಪಿ ಡಾ.ಶೋಭಾರಾಣಿ, ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ ಮೊದಲಾದವರು ಚಾಲನೆ ನೀಡಿದರು. ಸೈಕ್ಲಿಂಗ್ ಕ್ಲಬ್ ನ ಅಧ್ಯಕ್ಷ ಡಾ.ರವಿಶಂಕರ್, ಡಾ.ಸುಂದರ್, ಡಾ.ಸೋಮನಾಥ, ಮೊದಲಾದವರು ಪಾಲ್ಗೊಂಡಿದ್ದರು. ಓಟಗಾರರಿಗೆ ನೀರು, ಆರೋಗ್ಯ ಪರೀಕ್ಷೆ ಉಪಹಾರ ಮೊದಲಾದ ವ್ಯವಸ್ಥೆ ಮಾಡಲಾಗಿತ್ತು.
ಮೈಂಡ್ ಟ್ರೀಯ ಸಹ ಸಂಸ್ಥಾಪಕ ನಾಮಕಲ್ ಪಾರ್ಥಸಾರಥಿ, ವಿಶ್ವದ ಆರು ಮ್ಯಾರಥಾನಗಳಲ್ಲಿ ಭಾಗವಹಿಸಿ ಐದರಲ್ಲಿ ಜಯಿಸಿರುವ ಮೂರ್ತಿ ಆರ್.ಕೆ, ವೇಗದ ಓಟಗಾತಿ ಅನುಷಾ ಪಾಠಕ್ ಮೊದಲಾದವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು