4:58 AM Friday18 - July 2025
ಬ್ರೇಕಿಂಗ್ ನ್ಯೂಸ್
ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು…

ಇತ್ತೀಚಿನ ಸುದ್ದಿ

ಬಳ್ಳಾರಿ: ‘ಸ್ಟೀಲ್ ಸಿಟಿ ರನ್’ ನಲ್ಲಿ 4 ಸಾವಿರ ಜನರು ಭಾಗಿ; 10 ಕಿಮೀ. ನಲ್ಲಿ ಮಹಾರಾಷ್ಟ್ರದ ರಾಹುಲ್ ಸಂಘೀ ಪ್ರಥಮ

04/08/2024, 21:28

ಗಣೇಶ ಇನಾಂದಾರ ಬಳ್ಳಾರಿ

info.reporterkarnataka@gmail.com
ಬಳ್ಳಾರಿ ಸೈಕ್ಲಿಂಗ್ ಕ್ಲಬ್ ನಿಂದ ಆಯೋಜಿಸಿದ್ದ ‘ಸ್ಟೀಲ್ ಸಿಟಿ ರನ್’ ಓಟದಲ್ಲಿ ಭಾರತದ ವಿವಿಧ 11 ರಾಜ್ಯಗಳ 4 ಸಾವಿರಕ್ಕೂ ಜನರು ಭಾಗವಹಿಸಿದ್ದರು.
10 ಕಿ.ಮೀ. ನಲ್ಲಿ ಮಹಾರಾಷ್ಟ್ರದ ರಾಹುಲ್ ಸಂಘೀ ಹಾಗೂ 5 ಕಿ.ಮೀ.ನಲ್ಲಿ ಬೆಳಗಾವಿಯ ಶಿವಾನಂದ ಲಕ್ಷ್ಮಣ ಶಿಗಾರೆ ಅವರು ಅತಿ ವೇಗದ ಓಟಗಾರರಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಥಮ ಸ್ಥಾನ ಪಡೆದವರಿಗೆ 5, ದ್ವಿತೀಯ ಸ್ಥಾನ ಪಡೆದವರಿಗೆ 3 ಮತ್ತು ತೃತೀಯ ಸ್ಥಾನ ಪಡೆದವರಿಗೆ 2 ಸಾವಿರ ರೂ ಬಹುಮಾನವನ್ನು ಶಾಸಕ ಭರತ್ ರೆಡ್ಡಿ, ಎಸ್ಪಿ ಡಾ.ಶೋಭಾರಾಣಿ ನೀಡಿದರು.
ಮಹಿಳಾ ವಿಭಾಗದ ವಿಜೇತರಿಗೆ ಡಾ.ಸೋಮನಾಥ, ಮಂಜು ಮೋದಿ ಅವರು ಬಹುಮಾನ ವಿತರಿಸಿದರು. 10 ಕಿ.ಮೀ. ಓಟದಲ್ಲಿ 5ಕ್ಕೂ ಹೆಚ್ಚು ಜನ, 5 ಕಿಲೋ ಮೀಟರ್ ಓಟದಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಹಾಗು 3 ಕಿ.ಮೀ ಓಟದಲ್ಲಿ 350ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಶೇ. 30ಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರು ಭಾಗವಹಿಸಿದ್ದರು.
ಇದರಲ್ಲಿ ಮಹಾರಾಷ್ಟ್ರ, ಆಂಧ್ರ
ಪ್ರದೇಶ, ತೆಲಂಗಾಣ, ತಮಿಳುನಾಡು ಮೊದಲಾದ 11 ರಾಜ್ಯಗಳ ಹಾಗೂ ಕಿನ್ಯಾ ದೇಶದ ಓರ್ವ ಓಟಗಾರ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಜನರು ಆರೋಗ್ಯದಿಂದ ಇರಲು ದಿನ ನಿತ್ಯ ಒಂದಿಷ್ಟು ಓಟದ ಅಭ್ಯಾಸದ ಬಗ್ಗೆ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜಿಸಿತ್ತು.
ಇದು 3ನೇ ವರ್ಷದ ಓಟವಾಗಿದೆ.
ಬೆಳಗ್ಗೆ ಓಟಕ್ಕೆ ತೋರಣಗಲ್ಲಿ ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಮುರುಗನ್, ಎಸ್ಪಿ ಡಾ.ಶೋಭಾರಾಣಿ, ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ ಮೊದಲಾದವರು ಚಾಲನೆ ನೀಡಿದರು. ಸೈಕ್ಲಿಂಗ್ ಕ್ಲಬ್ ನ ಅಧ್ಯಕ್ಷ ಡಾ.ರವಿಶಂಕರ್, ಡಾ.ಸುಂದರ್, ಡಾ.ಸೋಮನಾಥ, ಮೊದಲಾದವರು ಪಾಲ್ಗೊಂಡಿದ್ದರು. ಓಟಗಾರರಿಗೆ ನೀರು, ಆರೋಗ್ಯ ಪರೀಕ್ಷೆ ಉಪಹಾರ ಮೊದಲಾದ ವ್ಯವಸ್ಥೆ ಮಾಡಲಾಗಿತ್ತು.
ಮೈಂಡ್ ಟ್ರೀಯ ಸಹ ಸಂಸ್ಥಾಪಕ ನಾಮಕಲ್ ಪಾರ್ಥಸಾರಥಿ, ವಿಶ್ವದ ಆರು ಮ್ಯಾರಥಾನಗಳಲ್ಲಿ ಭಾಗವಹಿಸಿ ಐದರಲ್ಲಿ ಜಯಿಸಿರುವ ಮೂರ್ತಿ ಆರ್.ಕೆ, ವೇಗದ ಓಟಗಾತಿ ಅನುಷಾ ಪಾಠಕ್ ಮೊದಲಾದವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು