9:36 PM Tuesday10 - March 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು

ಇತ್ತೀಚಿನ ಸುದ್ದಿ

ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು ಹಿಂಡು ಕುಟುಂಬ!

10/09/2025, 13:09

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ತಲೆ ಮೇಲೆ ಒಂದು ಚೀಲ ಬೆನ್ನಿನಲ್ಲಿ ಒಂದು ಬಟ್ಟೆ ತುಂಬಿದ ಬ್ಯಾಗ್ ನಿಂತ ಗಂಡಸರು, ಕಂಕುಳದಲ್ಲಿ ಒಂದು ಮಗು ಅಕ್ಕ ಪಕ್ಕ ಮತ್ತೇರಡು ಮಕ್ಕಳು. ಹಾಸನ ಬಸ್ ಅಂತೂ ಫುಲ್. ಈ ದೃಶ್ಯಗಳು ಕಂಡು ಬಂದದ್ದು ಕುಶಾಲನಗರ ಬಸ್ ನಿಲ್ದಾಣದಲ್ಲಿ.
ಸರಿ ಸುಮಾರು 10 ಗಂಟೆಗೆ ಒಂದರ ಹಿಂದೆ ಒಂದರಂತೆ, ಕೋಣನೂರು, ಅರಕಲಗೋಡು, ಸಕಲೇಶಪುರ, ಚಿಕ್ಕಮಗಳೂರು ಭಾಗಕ್ಕೆ ಕುಶಾಲನಗದಿಂದ ಬಸ್ ಗಳು ಹೆಚ್ಚಾಗಿ ಸಂಚರಿಸುತ್ತದೆ.


ಸಾಮಾನ್ಯವಾಗಿ ಈ ಸಮಯದಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಹಾಸನ ಬಸ್ ಹತ್ತಿದರೆ, ಬುಧವಾರ ಬಸ್ ನಿರ್ವಾಹಕರು ಸ್ಥಳೀಯರಿಗಿಂತ ಅಸ್ಸಾಂ ಕಾರ್ಮಿಕರನ್ನು ತುಂಬಿಸುವಲ್ಲಿ ಬ್ಯುಸಿ ಆಗಿದ್ದ ದೃಶ್ಯಗಳು ಕಂಡು ಬಂತು. ಕೊಡಗಿನ ಯಾವುದೇ ಖಾಸಗಿ, ಸಾರಿಗೆ ಬಸ್ ಗಳಾಗಲಿ ಕನಿಷ್ಠ ಹತ್ತು ಮಂದಿ ಅಂತೂ ಅಸ್ಸಾಂ ಕಾರ್ಮಿಕರು ಇದ್ದೆ ಇರುತ್ತಾರೆ. ಅವರ ಭಾಷೆ, ಚೀರಾಟ, ವಿಮಲ್ ಪಾನ್ ಮಸಾಲೆ ಘಾಟು ಅಸ್ಸಾಂ, ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯದಲ್ಲಿ ಇದೆವೋ ಅನ್ನಿಸುತ್ತದೆ. ಇವರೆಲ್ಲ ನಿಜಕ್ಕೂ ಅಸ್ಸಾಮಿಗಳ ಅಥವಾ ನೆರೆಯ ರಾಷ್ಟ್ರ ಬಾಂಗ್ಲಾದೇಶದವರ ಎಂದು ಅನುಮಾನಿಸುವುದು ಕಷ್ಟ ಕಾರಣ ಇವರ ಬಳಿ ಸ್ಥಳೀಯ ವಿಳಾಸದ ಆಧಾರ್ ಕಾರ್ಡ್ ಗಳಿದೆ. ಒಟ್ಟಿನಲ್ಲಿ, ಕೆಲ ಗಂಟೆಗಳ ಕಾಲ ಸ್ಥಳೀಯರಂತೂ ಬಸ್ ಗಳಲ್ಲಿ ಸೀಟು ಸಿಗದೆ ಹೈರಾಣ ಆಗಿದಂತೂ ಸತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು