10:13 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು ಹಿಂಡು ಕುಟುಂಬ!

10/09/2025, 13:09

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ತಲೆ ಮೇಲೆ ಒಂದು ಚೀಲ ಬೆನ್ನಿನಲ್ಲಿ ಒಂದು ಬಟ್ಟೆ ತುಂಬಿದ ಬ್ಯಾಗ್ ನಿಂತ ಗಂಡಸರು, ಕಂಕುಳದಲ್ಲಿ ಒಂದು ಮಗು ಅಕ್ಕ ಪಕ್ಕ ಮತ್ತೇರಡು ಮಕ್ಕಳು. ಹಾಸನ ಬಸ್ ಅಂತೂ ಫುಲ್. ಈ ದೃಶ್ಯಗಳು ಕಂಡು ಬಂದದ್ದು ಕುಶಾಲನಗರ ಬಸ್ ನಿಲ್ದಾಣದಲ್ಲಿ.
ಸರಿ ಸುಮಾರು 10 ಗಂಟೆಗೆ ಒಂದರ ಹಿಂದೆ ಒಂದರಂತೆ, ಕೋಣನೂರು, ಅರಕಲಗೋಡು, ಸಕಲೇಶಪುರ, ಚಿಕ್ಕಮಗಳೂರು ಭಾಗಕ್ಕೆ ಕುಶಾಲನಗದಿಂದ ಬಸ್ ಗಳು ಹೆಚ್ಚಾಗಿ ಸಂಚರಿಸುತ್ತದೆ.


ಸಾಮಾನ್ಯವಾಗಿ ಈ ಸಮಯದಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಹಾಸನ ಬಸ್ ಹತ್ತಿದರೆ, ಬುಧವಾರ ಬಸ್ ನಿರ್ವಾಹಕರು ಸ್ಥಳೀಯರಿಗಿಂತ ಅಸ್ಸಾಂ ಕಾರ್ಮಿಕರನ್ನು ತುಂಬಿಸುವಲ್ಲಿ ಬ್ಯುಸಿ ಆಗಿದ್ದ ದೃಶ್ಯಗಳು ಕಂಡು ಬಂತು. ಕೊಡಗಿನ ಯಾವುದೇ ಖಾಸಗಿ, ಸಾರಿಗೆ ಬಸ್ ಗಳಾಗಲಿ ಕನಿಷ್ಠ ಹತ್ತು ಮಂದಿ ಅಂತೂ ಅಸ್ಸಾಂ ಕಾರ್ಮಿಕರು ಇದ್ದೆ ಇರುತ್ತಾರೆ. ಅವರ ಭಾಷೆ, ಚೀರಾಟ, ವಿಮಲ್ ಪಾನ್ ಮಸಾಲೆ ಘಾಟು ಅಸ್ಸಾಂ, ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯದಲ್ಲಿ ಇದೆವೋ ಅನ್ನಿಸುತ್ತದೆ. ಇವರೆಲ್ಲ ನಿಜಕ್ಕೂ ಅಸ್ಸಾಮಿಗಳ ಅಥವಾ ನೆರೆಯ ರಾಷ್ಟ್ರ ಬಾಂಗ್ಲಾದೇಶದವರ ಎಂದು ಅನುಮಾನಿಸುವುದು ಕಷ್ಟ ಕಾರಣ ಇವರ ಬಳಿ ಸ್ಥಳೀಯ ವಿಳಾಸದ ಆಧಾರ್ ಕಾರ್ಡ್ ಗಳಿದೆ. ಒಟ್ಟಿನಲ್ಲಿ, ಕೆಲ ಗಂಟೆಗಳ ಕಾಲ ಸ್ಥಳೀಯರಂತೂ ಬಸ್ ಗಳಲ್ಲಿ ಸೀಟು ಸಿಗದೆ ಹೈರಾಣ ಆಗಿದಂತೂ ಸತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು