ಇತ್ತೀಚಿನ ಸುದ್ದಿ
ಲೈವ್ ಬಂದು ಅಭಿಮಾನಿಗಳಿಗೆ ಬಹುಮುಖ್ಯ ಮಾಹಿತಿ ನೀಡಿದ ನಟ ದರ್ಶನ್
04/06/2026, 19:52
ಬೆಂಗಳೂರು(reporterkarnataka.com): ಶೀಘ್ರದಲ್ಲೇ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದು ಸಿನಿಮಾ ಮಾಡಲಿದ್ದಾರೆ ಅಂತ ಜೈಲು ಪಾಲಾಗಿರುವ ನಟ ದರ್ಶನ್ ಭರವಸೆ ಇಟ್ಟುಕೊಂಡಿದ್ದಾರೆ.
ಸದ್ಯ ಹರಿದಾಡುತ್ತಿರುವ ಹಳೆಯ ವಿಡಿಯೋ ಯಾವ ಸಂದರ್ಭದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಅದರಲ್ಲಿ ದರ್ಶನ್ ತಮ್ಮ ಅಭಿಮಾನಿಗಳ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿರುವುದು ಕಾಣಿಸುತ್ತದೆ.. “ನನ್ನ ಮೇಲೆ ಇಷ್ಟೊಂದು ಪ್ರೀತಿ ಮತ್ತು ಬೆಂಬಲ ತೋರಿದ ಪ್ರತಿಯೊಬ್ಬ ಅಭಿಮಾನಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಈ ಪ್ರೀತಿಗೆ ನಾನು ಸದಾ ಋಣಿಯಾಗಿರುತ್ತೇನೆ,” ಎಂದು ದರ್ಶನ್ ಹೇಳಿರುವ ಮಾತುಗಳು ಈಗ ಅವರ ಅಭಿಮಾನಿಗಳನ್ನು ಭಾವುಕರನ್ನಾಗಿಸುತ್ತಿವೆ. ಹಲವಾರು ಜನರು ವಿ ಮಿಸ್ ಯೂ ಬಾಸ್ ಅಂತ ಕಾಮೆಂಟ್ ಮೂಲಕ ಪ್ರೀತಿ ತೋರುತ್ತಿದ್ದಾರೆ.
*ಗ್ಲೋಬಲ್ ಬ್ಯೂಟಿಗೆ ಸತತ ಎರಡನೇ ಬಾರಿಗೆ ಪ್ರಶಸ್ತಿ!.. ಇದರ ವಿಶೇಷತೆ ಏನು?*
‘ಕಲಾಸಿಪಾಳ್ಯ’ ರೀ-ರಿಲೀಸ್ ಮುನ್ಸೂಚನೆ! : ಇದರ ನಡುವೆ ದರ್ಶನ್ ಕೆರಿಯರ್ನಲ್ಲಿ ಬಿಗ್ ಬ್ಲಾಕ್ಬಸ್ಟರ್ ಆಗಿದ್ದ ‘ಕಲಾಸಿಪಾಳ್ಯ’ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಆಗಲಿದೆ ಎಂಬ ಮಾತುಗಳು ಗಾಂಧಿನಗರದ ವಲಯದಲ್ಲಿ ಕೇಳಿಬರುತ್ತಿದೆ.. ಆದರೆ, ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ..
ಹಾಗೆ ನೋಡಿದರೆ ನಟ ದರ್ಶನ್ಗೆ ಇಂತಹ ಪರಿಸ್ಥಿತಿ ಹೊಸದೇನಲ್ಲ. ಈ ಹಿಂದೆ 2011ರಲ್ಲಿ ದರ್ಶನ್ ಜೈಲಿನಲ್ಲಿದ್ದಾಗಲೇ ಬಿಡುಗಡೆಯಾಗಿದ್ದ ‘ಸಾರಥಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ, ಸಾರ್ವಕಾಲಿಕ ದಾಖಲೆ ಬರೆದಿತ್ತು. ಈಗ ‘ಕಲಾಸಿಪಾಳ್ಯ’ ಚಿತ್ರದ ಮರು-ಬಿಡುಗಡೆಯ ಸುದ್ದಿಯು ಅದೇ ಇತಿಹಾಸ ಮತ್ತೆ ಮರುಕಳಿಸುತ್ತಾ ಎಂಬ ಕುತೂಹಲವನ್ನು ಸ್ಯಾಂಡಲ್ವುಡ್ನಲ್ಲಿ ಮೂಡಿಸಿದೆ.













