ಇತ್ತೀಚಿನ ಸುದ್ದಿ
ಪಿರಿಯಾಪಟ್ಟಣ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿ ಯಾದ ಕೇರಳ ಲಾರಿ; ಅಪಾಯದಿಂದ ಪಾರು
14/09/2025, 09:49
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail com
ಕೇರಳದಿಂದ ಮರದ ಹೊಟ್ಟು ತುಂಬಿದ ಈಚರ್ ವಾಹನವು ತಿತಿಮತ್ತಿಯಲ್ಲಿ  ತಾಂತ್ರಿಕ ದೋಷದಿಂದ  ರಸ್ತೆ ಬದಿಯಲ್ಲಿ ನಿಲುಗಡೆ ಗೊಂಡಿತ್ತು. ವಾಹನದ ಚಾಲಕ ಸ್ಥಳೀಯ ವರ್ಕ್ ಶಾಪ್ ಗೆ ಭೇಟಿ ನೀಡಿ ತಾಂತ್ರಿಕ ದೋಷ ಸರಿಪಡಿಸಿಕೊಂಡು ವರ್ಕ್ ಶಾಪ್ ನ ಸಿಬ್ಬಂದಿ ಟೆಸ್ಟ್ ಡ್ರೈವ್ ಮಾಡಿಕೊಂಡು ಪಿರಿಯಾಪಟ್ಟಣದ ಕಡೆ ಪ್ರಯಾಣ ಬೆಳೆಸಿದ್ದರು.

ತಿತಿಮತಿ ಚೆಕ್ ಪೋಸ್ಟ್ ಸಮೀಪದ  ಮುತ್ತುರಾಯನ ದೇವಾಲಯದ ಸಮೀಪದ ತಿರುವು ರಸ್ತೆಯಲ್ಲಿ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದ್ದೆ ಅದೃಷ್ಟ ವಾಶ ವಾಹನದಲ್ಲಿದ ವರು ಸಣ್ಣಪುಟ್ಟ ಗಾಯಗಳಿಂದ ಪ್ರಾಣ ಅಪಾಯದಿಂದ ಪಾರಾಗಿರಿದ್ದಾರೆ. ಇದೇ ಮಾರ್ಗವಾಗಿ ಪ್ರಯಾಣ ಬೆಳೆಸುತ್ತಿದ್ದ ವಾಹನ ಸವಾರರು ವಾಹನದ ಒಳಗೆ ಇದ್ದವರ ರಕ್ಷಣೆ ಮಾಡಿ ಪಿರಿಯಾಪಟ್ಟಣದ ಆಸ್ಪತ್ರೆಗೆ ತುರ್ತು ಚಿಕಿತ್ಸೆ ದಾಖಲು ಪಡಿಸಿದ್ದಾರೆ.














