2:52 AM Monday9 - March 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು

ಇತ್ತೀಚಿನ ಸುದ್ದಿ

ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5 ಕೋಟಿ ಮೌಲ್ಯದ ಜಾಗ ದಾನ

05/09/2025, 12:23

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಕೊಡಗಿನ ಗೌಡ ಜನಾಂಗಕ್ಕೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ವಿರಾಜಪೇಟೆ ಯಲ್ಲಿ ಸುಸಜ್ಜಿತ ಸಮಾಜದ ಕಟ್ಟಡ ಕಟ್ಟುವ ಅವಶ್ಯಕತೆಯಿದೆ ಎಂದು ದಿವಂಗತ ಕುರುಂಜಿ ವೆಂಕಟರಮಣ ಗೌಡರವರು 2004 ನೇ ಇಸವಿಯಲ್ಲಿ 77 ಸೆಂಟ್ ಜಾಗವನ್ನು 22 ಲಕ್ಷ ಹಣ ನೀಡಿ ಅವರ ಮಕ್ಕಳಾದ ಡಾ. ಕೆ ವಿ. ಚಿದಾನಂದ ಮತ್ತು ಡಾ ಕೆ ವಿ ರೇಣುಕಾ ಪ್ರಸಾದ್ ರವರ ಹೆಸರಿನಲ್ಲಿ ಖರೀದಿಸಿದ್ದ ಜಾಗ ಹಲವು ಕಾರಣಗಳಿಂದ 21 ವರ್ಷ ಗಳಿಂದ ವರ್ಗಾವಣೆ ಆಗದೇ ಇದ್ದ ಜಾಗವನ್ನು ಬಳಿಕ ತದ ನಂತರದಲ್ಲಿ ಅವರು ಆ ಜಾಗವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಏಪ್ರಿಲ್ 18 ರ ಪ್ರಥಮ ಸಭೆಯಲ್ಲಿಯೇ ಈ ಕೆಲಸ ಕೈಗೆತ್ತಿಕೊಳ್ಳುವ ದೃಢ ತೀರ್ಮಾನ ಮಾಡಿಕೊಳ್ಳಲಾಯಿತು.
ಸತತ 4 ತಿಂಗಳು ದಾನಿಗಳ ಸಂಪರ್ಕದಲ್ಲಿದ್ದು ಹಲವಾರು ಸುತ್ತಿನ ಮಾತುಕತೆಗಳ ನಂತರ ಡಾ. ಕೆ ವಿ. ಚಿದಾನಂದ ಅವರ ಮನವೊಲಿಸಿ 5-6 ಬಾರಿಯ ಕರಡು ತಿದ್ದುಪಡಿಯ ನಂತರ ಡಾ ಕೆ. ವಿ. ಚಿದಾನಂದ ರವರ ಪರವಾಗಿ ಅವರ ಮಗ ಕೆ. ಸಿ. ಅಕ್ಷಯ್ ಹಾಗೇ ಡಾ ಕೆ. ವಿ. ರೇಣುಕಾ ಪ್ರಸಾದ್ ರವರ ಪರವಾಗಿ ಅವರ ಮಗ ಕೆ.ಆರ್. ಮೌರ್ಯರವರು ಮಡಿಕೇರಿ ಉಪ ನೋಂದಾವಣೆ ಕಚೇರಿಗೆ ಹಾಜರಾಗಿ ಇಂದಿಗೆ ಅಂದಾಜು 3.5 ಕೋಟಿ ಬೆಲೆಬಾಳುವ ಜಾಗವನ್ನು ವಿರಾಜಪೇಟೆ ಸಮಾಜಕ್ಕೆ ಅದರ ಅದ್ಯಕ್ಷರಾದ ಮುಕ್ಕಾಟಿ ವಾಸು ಗಣಪತಿ ಅವರ ಹೆಸರಿಗೆ ಜಾಗದ ದಾನಪತ್ರ ಬರೆಸಿ ಹಸ್ತಾಂತರ ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು