9:59 AM Friday21 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5 ಕೋಟಿ ಮೌಲ್ಯದ ಜಾಗ ದಾನ

05/09/2025, 12:23

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಕೊಡಗಿನ ಗೌಡ ಜನಾಂಗಕ್ಕೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ವಿರಾಜಪೇಟೆ ಯಲ್ಲಿ ಸುಸಜ್ಜಿತ ಸಮಾಜದ ಕಟ್ಟಡ ಕಟ್ಟುವ ಅವಶ್ಯಕತೆಯಿದೆ ಎಂದು ದಿವಂಗತ ಕುರುಂಜಿ ವೆಂಕಟರಮಣ ಗೌಡರವರು 2004 ನೇ ಇಸವಿಯಲ್ಲಿ 77 ಸೆಂಟ್ ಜಾಗವನ್ನು 22 ಲಕ್ಷ ಹಣ ನೀಡಿ ಅವರ ಮಕ್ಕಳಾದ ಡಾ. ಕೆ ವಿ. ಚಿದಾನಂದ ಮತ್ತು ಡಾ ಕೆ ವಿ ರೇಣುಕಾ ಪ್ರಸಾದ್ ರವರ ಹೆಸರಿನಲ್ಲಿ ಖರೀದಿಸಿದ್ದ ಜಾಗ ಹಲವು ಕಾರಣಗಳಿಂದ 21 ವರ್ಷ ಗಳಿಂದ ವರ್ಗಾವಣೆ ಆಗದೇ ಇದ್ದ ಜಾಗವನ್ನು ಬಳಿಕ ತದ ನಂತರದಲ್ಲಿ ಅವರು ಆ ಜಾಗವನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಏಪ್ರಿಲ್ 18 ರ ಪ್ರಥಮ ಸಭೆಯಲ್ಲಿಯೇ ಈ ಕೆಲಸ ಕೈಗೆತ್ತಿಕೊಳ್ಳುವ ದೃಢ ತೀರ್ಮಾನ ಮಾಡಿಕೊಳ್ಳಲಾಯಿತು.
ಸತತ 4 ತಿಂಗಳು ದಾನಿಗಳ ಸಂಪರ್ಕದಲ್ಲಿದ್ದು ಹಲವಾರು ಸುತ್ತಿನ ಮಾತುಕತೆಗಳ ನಂತರ ಡಾ. ಕೆ ವಿ. ಚಿದಾನಂದ ಅವರ ಮನವೊಲಿಸಿ 5-6 ಬಾರಿಯ ಕರಡು ತಿದ್ದುಪಡಿಯ ನಂತರ ಡಾ ಕೆ. ವಿ. ಚಿದಾನಂದ ರವರ ಪರವಾಗಿ ಅವರ ಮಗ ಕೆ. ಸಿ. ಅಕ್ಷಯ್ ಹಾಗೇ ಡಾ ಕೆ. ವಿ. ರೇಣುಕಾ ಪ್ರಸಾದ್ ರವರ ಪರವಾಗಿ ಅವರ ಮಗ ಕೆ.ಆರ್. ಮೌರ್ಯರವರು ಮಡಿಕೇರಿ ಉಪ ನೋಂದಾವಣೆ ಕಚೇರಿಗೆ ಹಾಜರಾಗಿ ಇಂದಿಗೆ ಅಂದಾಜು 3.5 ಕೋಟಿ ಬೆಲೆಬಾಳುವ ಜಾಗವನ್ನು ವಿರಾಜಪೇಟೆ ಸಮಾಜಕ್ಕೆ ಅದರ ಅದ್ಯಕ್ಷರಾದ ಮುಕ್ಕಾಟಿ ವಾಸು ಗಣಪತಿ ಅವರ ಹೆಸರಿಗೆ ಜಾಗದ ದಾನಪತ್ರ ಬರೆಸಿ ಹಸ್ತಾಂತರ ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು