11:09 AM Friday19 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಪೆಹಲ್ಗಾಮ್ ನಲ್ಲಿ 26 ಜನ ಸತ್ರು, ಕೇಂದ್ರದ ಫೆಯ್ಯ್ಲೂರು, ನಾವು ಪ್ರಧಾನಿ ರಾಜೀನಾಮೆ ಕೇಳಿದ್ವಾ: ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನೆ

08/06/2025, 21:38

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರಗಾಮಿಗಳು ನಡೆಸಿದ ದಾಳಿಗೆ 26 ಜನ ಸತ್ರು, ಇದು ಕೇಂದ್ರದ ಫೆಯ್ಯ್ಲೂರು, ನಾವು ಪ್ರಧಾನಿ ರಾಜೀನಾಮೆ ಕೇಳುದ್ವಾ ಎಂದು ಲೋಕೋಪಯೋಗಿ
ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಹಿಂದಿನ ಸರ್ಕಾರಗಳಿದ್ದಾಗ ಬಹಳಷ್ಟು ಘಟನೆ ನಡೆದಿದೆ, ನಾವು ರಾಜೀನಾಮೆ ಕೇಳಿರಲಿಲ್ಲ. ಪಾಕಿಸ್ತಾನದ ಜೊತೆ ಯುದ್ಧವಾದಾಗ ಎಲ್ಲ ಪಕ್ಷಗಳು ಬಿಜೆಪಿ ಜೊತೆ ಕೈಜೋಡಿಸಿದ್ರು. ಅಲ್ಲೂ ಫೆಯ್ಲ್ಯೂರ್ ಆಗಿತ್ತು, ಆಗ ಯಾರೂ ರಾಜೀನಾಮೆ ಕೇಳಿಲ್ಲ.
ಯಾರು ತಮ್ಮ ಕೆಲಸ ಸರಿಯಾಗಿ ಮಾಡಿಲ್ಲ ಅನ್ನೋದು ತನಿಖೆಯಿಂದ ಹೊರಬರಬೇಕು. ಯಾರು ಅನುಮತಿ ಕೇಳಿದ್ರು, ಯಾರು ನಿರಾಕರಿಸಿದ್ರು, ಯಾವಾಗ ಕೊಟ್ರು ಯಾರಿಗೂ ಗೊತ್ತಿಲ್ಲ, ಎಲ್ಲಾ ಬೂದಿ ಮುಚ್ಚಿದ ಕೆಂಡ ಎಂದು ಸಚಿವ ಜಾರಕಿಹೊಳಿ ನುಡಿದರು.

ಕಮಿಷನರ್, ಡಿಸಿಪಿ, ಇನ್ಸ್ಪೆಕ್ಟರ್, ಪೊಲೀಸ್ ಒಬ್ಬೊಬ್ಬರ ಲೆವೆಲ್ ನಲ್ಲಿ ಒಂದೊಂದು ಆಗಿದೆ ತನಿಖೆಯಿಂದ ಸತ್ಯ ಹೊರಬರಲಿ. ಹೈಕಮಾಂಡ್ ಜವಾಬ್ದಾರಿ ಇದೆ, ದೆಹಲಿಗೆ ಕರೆಸಿ ವರದಿ ಕೇಳಬಹುದು, ಮುಂದೆ ಆಗದಂತೆ ಎಚ್ಚರ ವಹಿಸಲು ಸಲಹೆ ಸೂಚನೆ ಕೊಡಬಹುದು ಎಂದರು.
ಬೆಳಗಾವಿ ವಿಭಜನೆ ಸದ್ಯಕ್ಕಿಲ್ಲ, ಆಮೇಲೆ ಮಾಡಬಹುದು, ಮಾಡೋ ವಿಚಾರ ಇದೆ, ಸದ್ಯಕ್ಕಿಲ್ಲ ಎಂದು ಅವರು ನುಡಿದರು.

*ಸಿಎಂ ಬದಲಾವಣೆ ಪ್ರಶ್ನೆಗೆ ನಸುನಕ್ಕ ಸತೀಶ್ ಜಾರಕಿಹೊಳಿ:*
ಅದೇಗೆ ಬದಲಾವಣೆ ಮಾಡ್ತಾರೆ? ನಿಮಗೆ ಹೇಳಿದ್ದು ಯಾರು? ಎಂದು ಸಚಿವರು ನಸುನಕ್ಕರು.
ಎರಡೂವರೆ ವರ್ಷಕ್ಕೆ ಮಾಡ್ತಾರೆ ಅಂತ ನಿಮಗೆ ಯಾರು ಹೇಳಿದ್ದು?
ಎರಡೂವರೆ ವರ್ಷ ಅಂತ ಎಲ್ಲೂ ಇಲ್ಲ, ಅವರೇ ಇದ್ದಾರೆ ಮುಂದೆಯೂ ಇರುತ್ತಾರೆ ಅಷ್ಟೇ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು