ಇತ್ತೀಚಿನ ಸುದ್ದಿ
ಅಕ್ಷಯ ತೃತೀಯದ ಚಿನ್ನದ ಖರೀದಿ- ಧರ್ಮ ಪರಂಪರೆ: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಾಳೆ ವಿಚಾರ ಸಂಕಿರಣ
23/04/2025, 17:43

ಪುತ್ತೂರು(reporterkarnataka.com): ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಏಪ್ರಿಲ್ 24 (ನಾಳೆ) ಸಂಜೆ 4 ಗಂಟೆಗೆ ಅಕ್ಷಯ ತದಿಗೆ ದಿನದಂದು ಜನ ಚಿನ್ನದ ಖರೀದಿ ಯಾಕೆ ಮಾಡುತ್ತಾರೆ?. ಇದರ ಧಾರ್ಮಿಕ ಪರಂಪರೆ ಕಾರಣಗಳು ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ. ಕುಂಟಾರು ರವೀಶ್ ತಂತ್ರಿಗಳು, ಪಂಜ ಭಾಸ್ಕರ ಭಟ್ , ವಂದನಾಶಂಕರ್ ಅವರು ತಮ್ಮ ವಿಚಾರಧಾರೆಯನ್ನು ಮಂಡಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ಟ ಭಾಗವಹಿಸಲಿರುವರು. ಈ ಸಂವಾದ ಕಾರ್ಯಕ್ರಮವನ್ನು ಡಾ ವಿಜಯ ಸರಸ್ವತಿ ನಡೆಸಿಕೊಡುವವರು.
ಚಿನ್ನದ ಹೂಡಿಕೆ , ಮೌಲ್ಯವೃದ್ಧಿ ಹಾಗೂ ಹಲವು ಧಾರ್ಮಿಕ ಮತ್ತು ವೈಚಾರಿಕ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ. ಆಸಕ್ತರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಚೇರ್ಮನ್ ಕೃಷ್ಣ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.