5:14 AM Tuesday1 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

Mangaluru | ಜನಿವಾರ ಪ್ರಕರಣ: ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

23/04/2025, 09:29

ಮಂಗಳೂರು(reporterkarnataka.com): ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ವಿಪ್ರ ಸಂಘಟನೆಗಳು ಮತ್ತು ಬ್ರಾಹ್ಮಣರು ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಶರವು ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಿ ಬಳಿಕ ಅಲ್ಲಿಂದ ಮಿನಿ ವಿಧಾನ ಸೌಧದ ವರೆಗೆ ಮೌನ ಮೆರವಣಿಗೆಯಲ್ಲಿ ಸಾಗಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನು ಇಂತಹ ಕೃತ್ಯಗಳು ಮರುಕಳಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.
ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಶಾಸಕರಾದ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಮಲಾದೇವಿ ಪ್ರಸಾದ್ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿ, ಪ್ರದೀಪ್ ಕುಮಾರ್ ಕಲ್ಕೂರ, ಎಂ ಬಿ ಪುರಾಣಿಕ್, ಕರ್ನಾಟಕ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಎಂಎಸ್ ಮಹಾಬಲೇಶ್ವರ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಿ ಎಸ್ ಪ್ರಕಾಶ್, ಶ್ರೀಕರ ದಾಮ್ಲೆ, ಬಜರಂಗದಳದ ಭುಜಂಗ ಕುಲಾಲ್ ನಮ್ಮವರು ಸಂಘಟನೆಯ ಎಂಎಸ್ ಗುರುರಾಜ್, ಸಂಸ್ಕಾರ ಭಾರತೀಯ ನಾಗರಾಜ್ ಶೆಟ್ಟಿ, ಆಚಾರ್ಯ ಮಠದ ನರಸಿಂಹಾಚಾರ್ಯ, ವಿಶ್ವ ಹಿಂದೂ ಪರಿಷತ್ತು ಅರ್ಚಕ ಪುರೋಹಿತರ ಪರಿಷತ್ತಿನ ಗಿರಿ ಪ್ರಕಾಶ್ ತಂತ್ರಿ ಎಂಟಿ ಭಟ್, ನೆಟ್ಲೆ ರಾಮ ಭಟ್ ರಾಜಾರಾಮ್ ಭಟ್ ಟಿ ಜಿ, ಬ್ರಾಹ್ಮಣ ಸಮಾಜ ಹೊಸಬೆಟ್ಟು ವಲಯದ ವಿಶ್ವೇಶ್ವರ ಬದೆವಿದೆ, ಕರಾಡ ಸಮಾಜದ ಪುರುಷೋತ್ತಮ ಭಟ್ ವಕೀಲರ ಸಂಘದ ಅಧ್ಯಕ್ಷ ಎಚ್. ವಿ. ರಾಘವೇಂದ್ರ ಯುಗಪುರುಷ ಕಿನಿಗೋಳಿಯ ಭುವನಾಭಿರಾಮ ಉಡುಪ ಶಶಿಪ್ರಭಾ ಐತಾಳ್, ಪ್ರಭಾ ರಾವ್ ಲಲಿತ ಉಪಾಧ್ಯಾಯ ಕಾತ್ಯಾಯಿನಿ ಸೀತಾರಾಮ್, ಚೇತನ ದತ್ತಾತ್ರೇಯ ವಂದನಾ ಸುರೇಶ್ ಸಮತಾ ಬಳಗದ ಕಾತ್ಯಾಯಿನಿ ಬಿಡೆ ಭರತಾಂಜಲಿ ನೃತ್ಯ ಸಂಸ್ಥೆಯ ಗುರು ಪ್ರತಿಮಾ ಶ್ರೀಧರ್, ಹವ್ಯಕ ಮಂಡಲ ಮಂಗಳೂರು ಸಂಘಟನೆಯ ಉದಯ ಶಂಕರ್ ನಿರ್ಪಾಜೆ ಕೃಷ್ಣಮೂರ್ತಿ ಕಮ್ಮಜೆ ರಮೇಶ್ ಭಟ್ ಸರವು ಮಂಗಳೂರು ಹವ್ಯಕ ಸಭಾ ಇದರ ಅಧ್ಯಕ್ಷ ಗೀತಾದೇವಿ ಸಿ., ದ.ಕ. ಕಾಸರಗೋಡು ಹವ್ಯಕ ಮಹಾಸಭಾದ ಅಧ್ಯಕ್ಷ ಗಿರೀಶ್ಚಂದ್ರ, ಶ್ರೀರಾಮಚಂದ್ರಪುರ ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರಿಪ್ರಸಾದ್ ಪೆರಿಯಾಪು, ಹವ್ಯಕ ಮಹಾಮಂಡಲ ಕಾರ್ಯದರ್ಶಿ ಉದಯ ಶಂಕರ ಮಿತ್ತೂರು, ವಿಷ್ಣು ಗುಪ್ತ ವಿಶ್ವವಿದ್ಯಾಲಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ಗಣೇಶ್ ಮೋಹನ ಕಾಶಿಮಠ, ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್, ಪಿದೆಮಲೆ ಸಿ ಎ ಆರ್. ಡಿ ಶಾಸ್ತ್ರಿ, ಸಿ ಎ ಚಂದ್ರಮೋಹನ್, ಸಿಎ ಅನಂತ ಪದ್ಮನಾಭ, ಸಿಎ ಭಾರ್ಗವ ತಂತ್ರಿ, ಸಿಎ ಕಮಲೇಶ ರಾವ್, ಸಿ ಎ ಶಿವಕುಮಾರ್, ವಕೀಲರಾದ ಪ್ರಶಾಂತ್ ರಾವ್, ಶಿವಳ್ಳಿ ಸಭಾ ಮಂಗಳೂರು ವಲಯದ ಪದಾಧಿಕಾರಿಗಳು ಕೂಟ ಮಹಾ ಜಗತ್ತು ಮಂಗಳೂರಿನ ಪದಾಧಿಕಾರಿಗಳು ಶಿವಳ್ಳಿ ಸ್ಪಂದನದ ಕೃಷ್ಣ ಭಟ್ ಮತ್ತು ಪದಾಧಿಕಾರಿಗಳು, ನಮ್ಮವರು ಸಂಘಟನೆಯ ಪದಾಧಿಕಾರಿಗಳು, ಕರಾಡ ಸಮಾಜದ ಪ್ರತಿನಿಧಿಗಳು, ದೇಶಸ್ಥ ಸಮಾಜದ ಪ್ರತಿನಿಧಿಗಳು, ಸ್ಥಾನಿಕ ಸಮಾಜದ ಪ್ರತಿನಿಧಿಗಳು, ಚಿತ್ಪಾವನ್ ಸಮಾಜದ ಪ್ರತಿನಿಧಿಗಳು, ಕೋಟೇಶ್ವರ ಸಮಾಜದ ಪ್ರತಿನಿಧಿಗಳು, ಹವ್ಯಕ ಸಮಾಜದ ಪ್ರತಿನಿಧಿಗಳು, ವಿಪ್ರ ಸಮಾಗಮ ವೇದಿಕೆಯ ಶೇಷಾದ್ರಿ ಭಟ್, ರಾಮಕೃಷ್ಣ ರಾವ್, ಕೋಡಿಕ್ಕಲ್ ನ ಪ್ರತಿನಿಧಿಗಳು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಪ್ರ ಸಂಘಟನೆಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು