2:38 AM Tuesday1 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ… Chikkamagaluru | ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಶಾಕ್ ನಿಂದ ಕಾಡಾನೆ ದಾರುಣ ಸಾವು ಕೂಡ್ಲಿಗಿ: ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಗಿ ಭಾಗಿ Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌

ಇತ್ತೀಚಿನ ಸುದ್ದಿ

Air India Express | ಮಂಗಳೂರಿನಿಂದ ಹೈದರಾಬಾದ್, ಚೆನ್ನೈಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್: ಏ. 2 ಮತ್ತು 5ರಿಂದ ಹಾರಾಟ ಶುರು

27/03/2025, 19:25

ಮಂಗಳೂರು(reporterkarnataka.com): ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ (ಬುಧವಾರ) ಮತ್ತು ಚೆನ್ನೈಗೆ (ಶನಿವಾರ) ವಿಮಾನ ಯಾನ ಆರಂಭಿಸಲಿದೆ. ಏಪ್ರಿಲ್ 2 ಮತ್ತು ಏಪ್ರಿಲ್ 5 ರಿಂದ ಹಾರಾಟ ಶುರುವಾಗುತ್ತದೆ.
IX 2915 ವಿಮಾನ ಮಂಗಳೂರಿನಿಂದ ಬೆಳಗ್ಗೆ 6.10ಕ್ಕೆ ಹೊರಟು 8 ಗಂಟೆಗೆ ಹೈದರಾಬಾದ್ ತಲುಪಲಿದೆ. IX 2913 ವಿಮಾನವು ಹೈದರಾಬಾದ್‌ನಿಂದ ಸಂಜೆ 5.25 ಕ್ಕೆ ಹೊರಟು 7.15 ಕ್ಕೆ ಮಂಗಳೂರು ತಲುಪಲಿದೆ.
ಹಾಗೆಯೇ, IX 2917 ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 3.40 ಕ್ಕೆ ಚೆನ್ನೈ ತಲುಪಲಿದೆ. ಹಿಂದಿರುಗುವ ವಿಮಾನ, IX 2918 ಚೆನ್ನೈನಿಂದ ಸಂಜೆ 4.20 ಕ್ಕೆ ಹೊರಟು 6 ಗಂಟೆಗೆ ಮಂಗಳೂರನ್ನು ತಲುಪುತ್ತದೆ.
ವಿಮಾನಯಾನ ಸಂಸ್ಥೆಯು ಈ ಎರಡೂ ಮಾರ್ಗಗಳಲ್ಲಿ 186 ಆಸನಗಳ ಬೋಯಿಂಗ್ 737-800 NG ವಿಮಾನವನ್ನು ನಿಯೋಜಿಸಲಿದೆ. ಪ್ರಸ್ತುತ, ಇಂಡಿಗೋ ಈ ಎರಡು ರಾಜಧಾನಿ ಮಾರ್ಗಗಳಿಗೆ 78 ಆಸನಗಳ ATR ವಿಮಾನಗಳ ಸಂಚಾರ ನಡೆಸುತ್ತಿದೆ. ಇಂಡಿಗೋ ಹೈದರಾಬಾದ್‌ಗೆ ಪ್ರತಿದಿನ ಎರಡು ಮತ್ತು ಮೂರು ವಾರಕ್ಕೊಮ್ಮೆ ಮತ್ತು ಚೆನ್ನೈಗೆ ಎರಡು ದೈನಂದಿನ ವಿಮಾನಗಳ ಯಾನ ನಡೆಸುತ್ತಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಎರಡೂ ಹೊಸ ಮಾರ್ಗಗಳಿಗೆ ಬುಕಿಂಗ್ ಅನ್ನು ತೆರೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು