11:33 AM Friday20 - June 2025
ಬ್ರೇಕಿಂಗ್ ನ್ಯೂಸ್
Power Minister | ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ; ನೌಕರರ ಬೇಡಿಕೆಗಳಿಗೆ ಸ್ಪಂದನೆ:… ವಿದ್ಯುತ್ ಪ್ರಸರಣ ಇಲಾಖೆಯ 532 ಮಂದಿ ಪೌರ ಕಾರ್ಮಿಕರ ಹುದ್ದೆ ಕಾಯಂ: ಮುಖ್ಯಮಂತ್ರಿ… ಎಂಜಿಎನ್ ವಿವೈ ಕ್ರಿಯಾ ಯೋಜನೆ ಸಿದ್ಧಪಡಿಸದ ಅಧಿಕಾರಿಗಳ ವಿರುದ್ಧ ಕ್ರಮ: ನಗರಾಭಿವೃದ್ಧಿ ಸಚಿವ… Yoga in Karnataka | ವಿಶ್ವ ಯೋಗ ದಿನದಂದು ‘ಯೋಗ ಸಂಗಮ’: ರಾಜ್ಯಾದ್ಯಂತ… Chikkamagaluru | ಕಳಸ: ಮರ ಬಿದ್ದು ಮನೆ ಸಂಪೂರ್ಣ ಹಾನಿ; ಮಹಿಳೆಗೆ ಗಾಯ ತರೀಕೆರೆ: ಪ್ರವಾಸಿಗರ ಕಾರಿನ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಜಖಂ; ತಪ್ಪಿದ… Bangalore | ಹೆಣಗಳ ಮೇಲಿನ ರಾಜಕೀಯ ಬಿಜೆಪಿಗೆ ಹೊಸದೇನಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ Agriculture | ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಸರ್ಕಾರದ ಪ್ರೋತ್ಸಾಹ: ಸಚಿವ ಚಲುವರಾಯಸ್ವಾಮಿ Davanagere | ದಾವಣಗೆರೆ: 1350 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ Bangalore | ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ: ಮಾಜಿ ಪ್ರಧಾನಿ…

ಇತ್ತೀಚಿನ ಸುದ್ದಿ

5ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಜನವಾದಿ ಮಹಿಳಾ ಸಂಘಟನೆ ಆಗ್ರಹ

20/01/2025, 19:49

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಇತ್ರೀಚೆಗೆ ಸಂಡೂರು ತಾಲೂಕಿನ ತೋರಣಗಲ್‌ ನಲ್ಲಿ 5 ವರ್ಷದ ಅಪ್ರಾಪ್ತ ಬಾಲಕೆ ಮೆಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯ ಕುರಿತು ಸೂಕ್ತ ವಾದ ಕ್ರಮವಹಿಸಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅರೋಪಿಗೆ ಕಠಿಣವಾದ ಶಿಕ್ಷೆಯಾಗುವಂತ ರೀತಿಯಲ್ಲಿ ಸಾಕ್ಷಿಗಳು ನಾಶಯಾಗದಂತೆ ಕ್ರಮ ಕೈಗೊಳ್ಳಬೇಕು,ಮಗುವಿನ ಫೋಷಕರು ಯಾವುದೆ ಒತ್ತಡಕ್ಕೆ ಮಣಿದು ದೂರು ಹಿಂಪಡೆಯದಂತೆ ಅವರಗೆ ಸೂಕ್ತ ವಾದ ರಕ್ಷಣೆಯನ್ನು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ವಿಕ್ಟಮ್ ಕಾಂಪನ್ಸೆಷನ್ ಸ್ಕೀಮ್ ಮೂಲಕ ಸಿಗಬೇಕಾದ ಅರ್ಥಿಕ ನೆರವು ಪೋಷಕರಿಗೆ ತಕ್ಷಣವೇ ಸಿಗುವಂತೆ ಕ್ರಮ ವಹಿಸಬೇಕು, ತೋರಣಗಲ್ ಗ್ರಾಮದಲ್ಲಿರುವ ಮತ್ತು ಸ್ಟೇಷನ್‌ ಭಾಗದಲ್ಲಿರುವರು ಜಿಂದಾಲ್ ಕಾರ್ಖಾನೆ ಯಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ವಾಸ ಮಾಡುತ್ತಿದ್ದು, ಬೇರೆ ಬೇರೆ ರಾಜ್ಯಗಳಿಂದ ಬಂದು ದುಡಿಯುತ್ತಿರುವ ಕಾರ್ಮಿಕರಿದ್ದಾರೆ. ಆ ಕುಟುಂಬಗಳಿಗೆ ವಾಸ ಮಾಡುವ ಪ್ರದೇಶಗಳಲ್ಲಿ ಸೂಕ್ತವಾದ ರಕ್ಷಣೆ ನೀಡುವ ಕ್ರಮಗಳನ್ನು ಜಾರಿ ಮಾಡಲು ಕ್ರಮ ವಹಿಸಬೇಕು.
ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿ ‌ಮಾಡಬೇಕು, ದೌರ್ಜನ್ಯ ತಡಿಯಲು ಉಗ್ರಪ್ಪ ಸಮಿತಿ ನೀಡಿದ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ಕ್ರಮ ವಹಿಸಬೇಕು ಎಂದು
ಅಖಿಲ ಬಾರತ ಜನವಾದಿ ಮಹಿಳಾ ಸಂಘಟನೆ
ರಾಜ್ಯ ಜಂಟಿ ಕಾರ್ಯದರ್ಶಿ, ಹಾಗೂ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು