ಇತ್ತೀಚಿನ ಸುದ್ದಿ
ಬಾಗಲಕೋಟೆ ವೈದ್ಯರ ಕಳ್ಳಾಟ ಬಯಲು: ರೋಗಿಯ ಆಪರೇಷನ್ ಮಾಡದೆ ಲಕ್ಷಾಂತರ ಹಣ ವಂಚನೆ!
15/11/2024, 19:29

ಶಿವ ರಾಠೋಡ್ ಲಿಂಗಸಗೂರು ರಾಯಚೂರು
info.reporterkarnataka@gmail.com
ರೋಗಿಗೆ ಬೆನ್ನುಮೂಳೆಯ ಸಮಸ್ಯೆ ಇದೆ ಅದಕ್ಕೆ ಆಪರೇಷನ್ ಮಾಡಬೇಕು ಎಂದು ಹೇಳಿ ವೈದ್ಯರು ಆಪರೇಷನ್ ನಾಟಕವಾಡಿ ಲಕ್ಷಾಂತರ ಹಣವನ್ನು ಪಡೆದು ವಂಚಿಸಿದ್ದು ಗುಣಮುಖವಾಗದ ರೋಗಿ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದಾಗ ವೈದ್ಯರ ಹಗರಣ ಬಯಲಾಗಿದೆ ಎಂದು ಚಿಕಿತ್ಸೆ ಪಡೆದ ಸಂಗನಗೌಡ ಪಾಟೀಲ್ ಹಾಗೂ ರೈತ ಸಂಘದ ಅಧ್ಯಕ್ಷರು ಆರೋಪಿಸಿದ್ದಾರೆ
*ಏನಿದು ಪ್ರಕರಣ?:*
ಲಿಂಗಸಗೂರು ತಾಲೂಕಿನ ಕನಸಾವಿ ಗ್ರಾಮದ ಸಂಗನಗೌಡ ಪೊಲೀಸ್ ಪಾಟೀಲ್ ಎನ್ನುವವರು ಬೆನ್ನುಮೂಳೆ ಸಮಸ್ಯೆಯಿಂದ ಬಳುತ್ತಿದ್ದರು. ಅವರು ನವಂಬರ ೨೦೨೨ರಂದು ಬಾಗಲಕೋಟೆಯ ಆಶೀರ್ವಾದ ಆಸ್ಪತ್ರೆಯಲ್ಲಿ ಡಾ ಶ್ರೀನಿವಾಸ ಓದುಗೌಡರ ಎನ್ನುವವರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರಿಗೆ ಸಮಸ್ಯೆ ಇದೆ ಎನ್ನುವುದನ್ನು ಬಾಗಲಕೋಟೆಯ ಸರಕಾರಿ ಆಸ್ಪತ್ರೆಗಳು ಖಚಿತ ಪಡಿಸಿವೆ. ಅದನ್ನು ಗಮನಿಸಿದ ವೈದ್ಯರು ಇದಕ್ಕೆ ಬೆನ್ನುಮೂಳೆಯ ಸರಿಪಡಿಸಬೇಕು ಅದಕ್ಕೆ ಆಪರೇಷನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ರೋಗಿಯು ಆಪರೇಷನ್ ಗೆ ಒಪ್ಪಿದ್ದಾರೆ. ೧೮-೧೧-೨೦೨೨ರಲ್ಲಿ ದಾಖಲಾಗಿದ್ದಾರೆ ೨೧,೧೧,೨೦೨೨ರಂದು ರೋಗಿಯನ್ನು ಬಿಡುಗಡೆ ಮಾಡಲಾಗಿದೆ. ಬೆನ್ನುಹುರಿ ಸರ್ಜರಿ ಮಾಡಿ ಸ್ಪಿçಂಗ್ ಹಾಗೂ ಸಬ್ ಬೋಲ್ಟ್ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಈ ಆಪರೇಷನ್ ಗಾಗಿ ಸರಕಾರದಿಂದ ಹಣ ಪಡೆದಿದ್ದಾರೆ ಮತ್ತು ರೋಗಿಯಿಂದಲೂ ಸಾಕಷ್ಟು ಹಣ ಖರ್ಚು ಮಾಡಿಸಿದ್ದಾರೆ. ಪುನಃ ಪುನಃ ಚಿಕಿತ್ಸೆಗಾಗಿ ಸಾಕಷ್ಟು ಸಲ ಬಾಗಲಕೋಟೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ. ಆದರೂ ರೋಗಿಗೆ ಯಾವುದೆ ರೀತಿಯ ಗುಣಮುಖರಾಗಿಲ್ಲ. ಆಗ ಅನಿವಾರ್ಯವಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಹೋದಾಗ ಅವರಿಗೆ ಯಾವುದೇ ರೀತಿಯ ಸರ್ಜರಿಯನ್ನು ಮಾಡಿರುವುದಿಲ್ಲ. ಆಪರೇಷನ್ ಮಾಡಬೇಕೆಂದು ತಿಳಿಸಿದ್ದಾರೆ. ಆಗ ಬಾಗಲಕೋಟೆಯ ವೈದ್ಯರ ಕಳ್ಳಾಟ ಹೊರಬಿದ್ದಿದೆ.
ರೋಗಿ ಸಂಗನಗೌಡ ಪಾಟೀಲ್ ಬಾಗಲಕೋಟೆಗೆ ಪ್ರತಿತಿಂಗಳು ತಿರುಗಾಡಿ ಚಿಕಿತ್ಸೆಯ ನೆಪದಲ್ಲಿ ೫ರಿಂದ ೬ಲಕ್ಷ ಅವರ ಕುಟುಂಬ ಖರ್ಚು ಮಾಡಿದೆ ಅಲ್ಲದೆ ಸರಕಾರದಿಂದ ಬರುವ ಹಣವನ್ನು ಪಡೆದು ವಂಚಿಸಲಾಗಿದೆ ಎಂದರು ಆರೋಪಿಸಲಾಗುತ್ತಿದೆ.
*ಮತ್ತೊಬ್ಬ ರೋಗಿಗೂ ಇದೆ ಗತಿ:* ಈ ಪ್ರಕರಣ ಹೊರಬರುತ್ತಿರುವಂತೆ ಅದೇ ಕನಸಾವಿ ಗ್ರಾಮದ ಮತ್ತೊಬ್ಬ ವ್ಯಕ್ತಿ ಶರಣಪ್ಪ ಎಂಬುವವರಿಗೂ ಬಾಗಲಕೋಟೆಯ ಆಶಿರ್ವಾದ ಆಸ್ಪತ್ರೆಯಲ್ಲಿ ಇದೇ ರೀತಿ ಚಿಕಿತ್ಸೆ ನೀಡಿ ವಂಚಿಸಲಾಗಿದ್ದು ಆ ವ್ಯಕ್ತಿಯ ಆರೋಗ್ಯವು ಸಂಪೂರ್ಣವಾಗಿ ಹದಗೆಟ್ಟಿದೆ ಎನ್ನಲಾಗುತ್ತಿದೆ.
*ವೈದ್ಯ ಬರುವುದನ್ನು ಕಾದುಕುಳಿತ ರೈತಸಂಘ:* ಸದರಿ ಡಾ. ಶ್ರೀನಿವಾಸ ಓದುಗೌಡರ ಚಿಕಿತ್ಸೆ ನೀಡಲು ಲಿಂಗಸಗೂರಿನ ಆಸ್ಪತ್ರೆಯೊಂದಕ್ಕೆ ಬರುತ್ತಿರುವದಾಗಿ ತಿಳಿದು ರೈತಸಂಘಟನೆಯವರು ಮುತ್ತಿಗೆ ಹಾಕಲು ತೆರಳಿದಾಗ ಬಾಗಲಕೋಟೆಯಿಂದ ಲಿಂಗಸಗೂರಿಗೆ ಬರುತ್ತಿರುವ ಡಾ ಶ್ರೀನಿವಾಸ ಪ್ರಯಾಣ ರದ್ದು ಪಡಿಸಿರುವುದಾಗಿ ತಿಳಿದು ಬಂದಿದೆ. ಆಸ್ಪತ್ರೆ ಮುಂದೆ ಕಾಯ್ದುನಿಂತ ರೈತರು ನಂತರ ವೈದ್ಯರ ವಿರುದ್ದ ಪ್ರಕರಣ ದಾಖಲಿಸುವುದಾಗಿ ಸ್ಟೇಷನ್ ತೆರಳಿದ ಘಟನೆ ಜರುಗಿದೆ.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಶಿವುಪುತ್ರಗೌಡ ತಾಲೂಕಾಧ್ಯಕ್ಷ ದುರ್ಗಾಪ್ರಸಾದ ಸಂಗನಗೌಡ ಹಾಗೂ ನೂರಾರು ರೈತರು ಸೇರಿದಂತೆ ಇದ್ದರು.