ಇತ್ತೀಚಿನ ಸುದ್ದಿ
ಅಕ್ಟೋಬರ್ 15 – 24: ಪೆರಾಜೆ ರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಜರಾಜೇಶ್ವರಿ ದೇವರ ಮಹಾಸಮಾರಾಧನೆ
14/10/2023, 10:14

ಬಂಟ್ವಾಳ(reporterkarnataka.com): ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ನವರಾತ್ರಿ ನಮಸ್ಯಾ ನವರಾತ್ರಿಯ ಪರ್ವಕಾಲದಲ್ಲಿ ಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀ ರಾಜರಾಜೇಶ್ವರಿಯ ಮಹಾಸಮಾರಾಧನೆ ಶ್ರೀ ರಾಮಚಂದ್ರಾಪುರ ಮಠ ಪೆರಾಜೆ ಮಾಣಿಯಲ್ಲಿ ಅಕ್ಟೋಬರ್ 15ರಿಂದ 24ರವರೆಗೆ ನೆರವೇರಲಿದೆ.
ಇದೇ ಸಂದರ್ಭದಲ್ಲಿ ಸ್ವರ್ಣ ಮಂಟಪದಲ್ಲಿ ಶ್ರೀ ಪೂಜೆ, ಸ್ವರ್ಣ ಪಾದುಕಾ ಪೂಜೆ ,ಸ್ವರ್ಣ ಭಿಕ್ಷಾ ಸೇವೆ ನಡೆಯಲಿದೆ. ಪ್ರತಿದಿನ ಅಪರಾಹ್ನ 3.15 ರಿಂದ ಶ್ರೀ ಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ ಎಂದು ಮಠದ ಅಧ್ಯಕ್ಷರು ತಿಳಿಸಿದ್ದಾರೆ.