8:21 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಶೌರ್ಯ ಜಾಗರಣಾ ರಥಯಾತ್ರೆ: ಬಂಟ್ವಾಳದಲ್ಲಿ ಬೃಹತ್ ಜಾಗೃತ ಹಿಂದೂ ಸಮಾಜೋತ್ಸವ

09/10/2023, 19:41

ಬಂಟ್ವಾಳ(reporterkarnataka.com): ಭಾರತ ಟಿಪ್ಪುಸುಲ್ತಾನ್, ಔರಂಗಜೇಬ್ ರಂತಹ ಲೂಟಿಕೋರರ ಭೂಮಿಯಲ್ಲ,ಇದು ಶ್ರೀರಾಮ, ಶಿವಾಜಿ ಮಹಾರಾಜರಂತ ಮಹಾಪುರುಷರು ಜನ್ಮತಾಳಿದ ಭೂಮಿ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಹೇಳಿದರು.
ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 60ನೇ ವರ್ಷಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ದೇಶದಾದ್ಯಂತ ಸಂಚರಿಸುತ್ತಿರುವ ‘ಶೌರ್ಯ ಜಾಗರಣಾ ರಥಯಾತ್ರೆ’ಯು ಭಾನುವಾರ ಬಂಟ್ವಾಳಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಬಂಟ್ವಾಳ ಬಸ್ತಿಪಡ್ಪು ಶೌರ್ಯ ಮೈದಾನ‌ದಲ್ಲಿ ಸಂಪನ್ನಗೊಂಡ ಬೃಹತ್ “ಜಾಗೃತ ಹಿಂದೂ ಸಮಾಜೋತ್ಸವ”ದಲ್ಲಿ‌ ಅವರು ದಿಕ್ಸೂಚಿ ಭಾಷಣ ಗೈದರು.
ಹಿಂದೂಗಳೆಲ್ಲ ಸಹೋದರರು,ಯಾವ ಜಾತಿಯವನಾದರೂ ಅವನು ಹಿಂದುವೇ ಆಗಿದ್ದಾನೆ. ಹಿಂದೂಗಳು ಒಗ್ಗಟ್ಟಾದರೆ ಮಾತ್ರ ದೇಶ ಉಳಿಯುತ್ತದೆ ಮಾತ್ರವಲ್ಲ ವಿಶ್ವಕ್ಕು ಒಳಿತಾಗುತ್ತದೆ ಎಂದರು.
ಈ ದೇಶದ ಸಂಸ್ಕೃತಿ ನಾಶವಾದರೆ , ದೇಶವೇ ನಾಶವಾದೀತು,ನಾವೆಲ್ಲರೂ‌ ಸನಾತನಿಗಳು ,ಸನಾತನ ಧರ್ಮ ಉಳಿಯಬೇಕಾದರೆ ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕಾದ ಅನೀವಾರ್ಯತೆ ನಿರ್ಮಾಣವಾಗಿದೆ ಎಂದರು.
ಕರ್ನಾಟಕ ಶ್ರೀಗಂಧದ ನಾಡು:ಕರ್ನಾಟಕ ಶ್ರೀಗಂಧದ ನಾಡು, ಇದು ಅಂಜನೇಯನ ಭೂಮಿ, ಅವನ ಕೈಯಲ್ಲಿರುವ ಗದೆ, ಹಿಂದೂ ಧರ್ಮರಕ್ಷಣೆಗೆ ಆಯಧವಾಗಲಿ ಎಂದ ಅವರು ಮಾತೆಯರು ದುರ್ಗಾ ಮಾತೆಯಾರಾಗಬೇಕು, ಯುವಕರು ಬಜರಂಗಿಗಳಾಗಬೇಕು ಎಂದು ಕರೆ ನೀಡಿದರು.
ನಮ್ಮ ಧರ್ಮ, ಸಂಸ್ಕೃತಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ.ಇತ್ತೀಚೆಗೆ ಹುಟ್ಟಿದಾತನೋರ್ವ ಸನಾತನ ಧರ್ಮ ನಾಶ ಮಾಡುತ್ತೇನೆಂಬ ದುರಾಂಹಕಾರ ಹೇಳಿಕೆ ಅವನ ಸರ್ವನಾಶಕ್ಕೆ ನಾಂದಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾಗೃತರಾಗಿ:ನಮ್ಮ ಕಾರ್ಯಕರ್ತರಲ್ಲಿ ಸೆರಗೊಡ್ಡಿ ವಿನಂತಿಸುವುದೇನಂದರೆ‌ ನಮ್ಮ ಧರ್ಮಸಂಸ್ಥಾಪನೆಗಾಗಿ ನಾವು ಒಗ್ಗಟ್ಟಾಗಬೇಕು,ಗೋಹತ್ಯೆ ನಿಲ್ಲಲೇ ಬೇಕು, ಸ್ತ್ರೀಯರ ಮಾನ, ಪ್ರಾಣ ರಕ್ಷಣೆಯಾಗಬೇಕು. ಅದಕ್ಕೆ ನಾವೆಲ್ಲರು ಜಾಗೃತರಾಗೋಣ ಎಂದರು.
ಹನುಮನ ಪರಾಕ್ರಮ ಯುವಕರಿಗೆ ಪ್ರರೇಣೆ:

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಮಾತನಾಡಿ,ಹನುಮಂತ ಶೌರ್ಯ ಮತ್ತು ಶೀಲದ ಪ್ರತೀಕವಾಗಿದ್ದು,ಸ್ವಾರ್ಥ ವಿಲ್ಲದ ಜೀವನ ನಡೆಸಿ ಆದರ್ಶನಾಗಿದ್ದಾನೆ. ಹನುಂಮತನ ಅದರ್ಶವನ್ನಿರಿಸಿಕೊಂಡು ಬಜರಂಗದಳ ಆರಂಭವಾಗಿದ್ದು, ಹನುಮಂತನ ಪರಾಕ್ರಮ ನಮ್ಮ ಯುವಕರಿಗೆ ಪ್ರರೇಣೆಯಾಗಬೇಕು ಎಂದರು.


ಹಿಂದೂ ಧರ್ಮದಲ್ಲಿ ಸ್ಪ್ರಶ್ಯ,ಅಸ್ಪ್ರಶ್ಯ,ಮೇಲು,ಕೀಳು ಭಾವನೆಗೆ ಅವಕಾಶವಿಲ್ಲ,ಭಗವಂತನಲ್ಲಿ ನಂಬಿಕೆಯನ್ನಿಟ್ಟುಕೊಂಡ ಧರ್ಮ , ದೇಶವೇ ನಮ್ಮ ಒಂದು ಕುಟುಂಬ,ಭಾರತವೇ ಮಾತೃಭೂಮಿ,ಹುಟ್ಟು ಸಾವಿಲ್ಲದ ಸೂರ್ಯನಂತೆ ಜಗತ್ತಿಗೆ ಬೆಳಕನ್ನು ನೀಡುವ ಹಿಂದೂ ಧರ್ಮಕ್ಕೆ ವಿನಾಶವಿಲ್ಲ ಎಂದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ , ಶ್ರೀಧಾಮ‌ಮಾಣಿಲದ ಮೋಹನದಾಸ ಸ್ವಾಮೀಜಿ, ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತ್ಯನ್ಯಾಂದ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ವಿ .ಹಿಂ.ಪ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೌರ್ಯ ಜಾಗರಣ ರಥಯಾತ್ರೆ ಯ ಸ್ವಾಗತ ಸಮಿತಿ ಅಧ್ಯಕ್ಷರು, ಕಾವೇಶ್ವರ ದೇವಸ್ಥಾನದ ಸಮಿತಿ ಕಾರ್ಯಾಧ್ಯಕ್ಷರಾದ ರಘ ಎಲ್. ಶೆಟ್ಟಿ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಮೊದಲಾದ ಹಲವು ಗಣ್ಯರು, ಸಂಘಪರಿವಾರ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ಮಾಣಿಯಲ್ಲಿ ಸ್ವಾಗತ:
ಮಾಣಿಯಲ್ಲಿ ಶೌರ್ಯ ಜಾಗರಣ ರಥಯಾತ್ರೆ ರಥವನ್ನು ಬಂಟ್ವಾಳಕ್ಕೆ ಸ್ವಾಗತಿಸಲಾಯಿತು. ಪೆರಾಜೆ ಶ್ರೀರಾಮ ಚಂದ್ರಾಪುರ ಮಠ ದ್ವಾರದಿಂದ ಬೃಹತ್ ಶೋಭಾಯಾತ್ರೆ ಮಾಣಿಯವರೆಗೆ ..ಕುಣಿತ ಭಜನೆ,ನಾಸಿಕ್ ಬ್ಯಾಂಡ್ ಸಹಿತ ಹಲವಾರು ಮಂದಿ ಭಾಗವಹಿಸಿದ್ದರು‌. ಕ್ಯಾಪ್ಟನ್ ಬೃಜೇಶ್ ಚೌಟ ಸ್ವಾಗತಿಸಿ ಮಾತನಾಡಿದರು. ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ,ರಾಜಾರಾಮ ಕಾಡೂರು,ಕ.ಕೃಷ್ಣಪ್ಪ,ಸಾಂತಪ್ಪ ಪೂಜಾರಿ ,ಮೋನಪ್ಪ ದೇವಸ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಶೋಭಾಯಾತ್ರೆ:
ಬಿ.ಸಿ.ರೋಡಿನ ಕೈಕಂಬ ಪೊಳಲಿದ್ವಾರದ ಬಳಿಯಿಂದ ಶೌರ್ಯ ಜಾಗರಣ ರಥಯಾತ್ರೆಯ ವೈಭವಯುತವಾದ ಶೋಭಾಯಾತ್ರೆಯು ಬಿ.ಸಿ.ರೋಡಿನ ಹೆದ್ದಾರಿಯ ರಾಜಾರಸ್ತೆಯಲ್ಲಿ ಸಾಗಿಬಂದು ಸಮಾಜೋತ್ಸವ ನಡೆಯುವ ಮೈದಾನದಲ್ಲಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಹೆದ್ದಾರಿಯುದ್ದಕ್ಕು ಜೈಘೋಷ ಹಾಕಿ ಹೆಜ್ಜೆ ಹಾಕಿದರು.
ತೆರೆದ ವಾಹನದಲ್ಲಿ ಸಾಧ್ವಿ:ಕೈಕಂಬ ಪೊಳಲಿ ದ್ವಾರದಿಂದ ಸಾಧ್ವಿ ದೇವಿ ಸರಸ್ವತಿ ಜೀ ಅವರನ್ನು ತೆರೆದ ವಾಹನದಲ್ಲಿ ಮೈದಾನದತ್ತ ಕರೆತರಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಮಂದಿ ನಿಂತು ಸಾಧ್ವಿ ಅವರಿಗೆ ನಮಸ್ಕರಿಸಿದರಲ್ಲದೆ,ಮೊಬೈಲ್ ಮೂಲಕ ಪೊಟೋ ಕ್ಲಿಕ್ಕಿಸಿದರು.
ಸಮಾಜೋತ್ಸವದಲ್ಲಿ ಸಾಗರೋಪಾದಿಯಲ್ಲಿ ತರುಣರು, ಮಹಿಳೆಯರು,ವಯಸ್ಕರು ಸೇರಿದ್ದು,ಸಂಘಟಕರ ನಿರೀಕ್ಷೆಗೂ ಮೀರಿ ಭಾಗವಹಿಸಿದ್ದರು.
ವಿಶ್ವ ಹಿಂದು ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ‌ ಸ್ವಾಗತಿಸಿದರು.ಭಾಸ್ಕರ ರಾವ್ ಪ್ರರೇಣಾಗೀತೆ ಹಾಡಿದರು.ವಿ.ಹಿಂ.ಪ.ನ ಕಲ್ಲಡ್ಕ ಘಟಕದ ಅಧ್ಯಕ್ಷ ಸಚ್ಚಿನ್ ಮೆಲ್ಕಾರ್ ವಂದಿಸಿದರು.
ವಿಶ್ವ ಹಿಂದೂ ಪರಿಷತ್ – ಬಜರಂಗ ದಳ
ಬಂಟ್ವಾಳ ಪ್ರಖಂಡದ ವತಿಯಿಂದ ನಡೆಯುವ ಜಾಗೃತ ಹಿಂದೂ ಸಮಾಜೋತ್ಸವಕ್ಕೆ ಕಲ್ಲಡ್ಕ,ವಿಟ್ಲ,ವೇಣೂರು ಘಟಕಗಳು ಹಾಗೂ
ಆರ್. ಎಸ್ .ಎಸ್.ನ ಅಧೀನದಲ್ಲಿರುವ ಪರಿವಾರ ಸಂಘಟನೆಗಳು ಕೂಡ ಸಾಥ್ ನೀಡಿದರು.
ಪೋಲೀಸ್ ಬಂದೋಬಸ್ತ್:ಸಮಾಜೋತ್ಸವದ ಹಿನ್ನೆಲೆಯಲ್ಲಿ ಮತ್ತು‌ಕಾರ್ಯಕ್ರಮ ಶಾಂತಯುತವಾಗಿ ನಡೆಯುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ತುಳುವಿನಲ್ಲಿ ಮಾತು
“ತುಳುನಾಡ್ ದ ಜನಕ್ಲೆಗ್ ಎನ್ನ ಸೊಲ್ಮೆಲು‌ ಎಂದು ಸಾಧ್ವಿ ದೇವಿ ಸರಸ್ವತಿ ಜೀ ಅವರು ತಮ್ಮ ದಿಕ್ಸೂಚಿ ಆರಂಭಿಸಿ ಬಳಿಕ ನಿರರ್ಗಳವಾಗಿ ಹಿಂದಿಯಲ್ಲಿ ಯುವಕರಿಗೆ ಸ್ಪೂರ್ತಿಯ ಮಾತಗಳನ್ನಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು