10:38 AM Tuesday25 - August 2026
ಬ್ರೇಕಿಂಗ್ ನ್ಯೂಸ್
ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

ಇತ್ತೀಚಿನ ಸುದ್ದಿ

ತುಂಬಾ ಸೆಂಟಿಮೆಂಟಲ್ ಕಣ್ರೀ ನಮ್ಮ ಸಿಎಂ: ಮುದ್ದಿನ ನಾಯಿ ಸತ್ತಾಗ ಕಣ್ಣೀರಿಟ್ಟ ಬೊಮ್ಮಾಯಿ !

28/07/2021, 21:07

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಕಣ್ಣೀರಿಟ್ಟ ಘಟನೆ ನಡೆದಿತ್ತು. ಸಿಎಂ ಆಗುವ ಕೇವಲ ಒಂದು ವಾರದ ಮುನ್ನ ಬೊಮ್ಮಾಯಿ ಅವರು ದುಃಖ ತಾಳಲಾಗದೆ ಕರ್ಚೀಫನ್ನು ಕಣ್ಣಿಗೆ ಒತ್ತಿಕೊಂಡಿದ್ದರು. ತನ್ನ ಕುಟುಂಬದ ಸದಸ್ಯರ ಎದುರೇ ಬೊಮ್ಮಾಯಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು.


ಬೊಮ್ಮಾಯಿ ಅವರ ಬೆಂಗಳೂರಿನ ನಿವಾಸದಲ್ಲೇ ಈ ಘಟನೆ ನಡೆದಿತ್ತು. ಇವೆಲ್ಲ ನಡೆದಾಗ ಅವರು ಗೃಹ ಸಚಿವರಾಗಿದ್ದರು. ಅವರು ಸಾಕಿ ಸಲಹಿದ ಮುದ್ದಿನ ನಾಯಿ ಮೃತಪಟ್ಟಾಗ ಅವರು ದುಃಖ ತಾಳಲಾಗದೆ ಕಣ್ಣೀರು ಹಾಕಿದ್ದರು. ಈ ಕುರಿತು ವೀಡಿಯೊವೊಂದು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ವೈರಲ್ ಆಗಿದೆ. ಮುದ್ದಿನ ನಾಯಿಗೆ ಅಂತಿಮ ವಿದಾಯ ಹೇಳುವಾಗ ಬೊಮ್ಮಾಯಿ ಜತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ವಾನದ ಮೃತದೇಹದ ಮೇಲೆ ಹೂವಿನ ಹಾರ ಹಾಕಲಾಗಿತ್ತು.

ಬೊಮ್ಮಾಯಿ ಅವರು ನೆಲದಲ್ಲಿ ಮಂಡಿಯೂರಿ ಬಾಗಿ ಶ್ವಾನಕ್ಕೆ ಅಂತಿಮ ಮುತ್ತು ನೀಡಿದ್ದರು. ನಂತರ ದುಃಖ ತಾಳಲಾಗದೆ ಕಂಗಳನ್ನು ಕರ್ಚೀಫ್ ನಲ್ಲಿ ಒರಸಿಕೊಂಡರು. ಮುಖ್ಯಮಂತ್ರಿಯವರ ಪ್ರಾಣಿ ಪ್ರೇಮಕ್ಕೆ ಹಾಟ್ಸಾಪ್. 

ಇತ್ತೀಚಿನ ಸುದ್ದಿ

ಜಾಹೀರಾತು