4:54 PM Monday4 - May 2026
ಬ್ರೇಕಿಂಗ್ ನ್ಯೂಸ್
ಕೊಡವರಿಗೆ ಪ್ರತ್ಯೇಕ ಲೋಕಸಭೆ, ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಸಿಎನ್‍ಸಿಯಿಂದ ಅಭಿಯಾನ ಆರಂಭ Kodagu | ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಹೋಂ ಸ್ಟೇ ಮಾಲೀಕನಿಗೆ… ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’:  ಜುಲೈ ತಿಂಗಳ ಟಾಪರ್ ಆಗಿ ದೀಕ್ಷಾ ಎ.ಜೆ. ಹಾಗೂ ಶ್ರದ್ಧಾ ಎಂ.ಪಿ. ಆಯ್ಕೆ

10/08/2022, 22:19

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ದೀಕ್ಷಾ ಎ.ಜೆ. ಹಾಗೂ ಶ್ರದ್ಧಾ ಎಂ.ಪಿ. ಆಯ್ಕೆಗೊಂಡಿದ್ದಾರೆ.

ದೀಕ್ಷಾ, ಕಾಸರಗೋಡು ಜಿಲ್ಲೆಯ ಬೋವಿಕ್ಕಾನದ ಅಶ್ವಥ್ ಕುಮಾರ್ ಹಾಗೂ ಆಶಾ ದಂಪತಿ ಪ್ರಥಮ ಪುತ್ರಿ. ಈಕೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಸರಸ್ವತಿ ವಿದ್ಯಾಲಯ ಬೋವಿಕ್ಕಾನದಲ್ಲಿ ಕಲಿತು ಐದನೇ ತರಗತಿಯಿಂದ ಕಾಸರಗೋಡಿನ  ಬಿಇಎಂಎಚ್ ಎಸ್ ಎಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.


ಈಕೆ ಭರತನಾಟ್ಯ, ಜಾನಪದ ನೃತ್ಯವನ್ನು ಗುರುಗಳಾದ ಗಿರೀಜ ಪಂಡಿತ್ 
ಕಾಸರಗೋಡು ಅವರೊಂದು ನಾಟ್ಯತರಂಗಿಣಿ ಯಲ್ಲಿ 8 ವರ್ಷಗಳಿಂದ ಕಲಿಯುತ್ತಿದ್ದಾಳೆ.

ಕೊರೋನಾ ಮಹಾಮಾರಿಯಿಂದ  ನೃತ್ಯ ತರಬೇತಿಯನ್ನು ನಿಲಿಸಬೇಕ್ಕಾಗಿ ಬಂತು. ಇವಳ ರಂಗಪ್ರವೇಶವು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಶಾಲಾ ಕಲೋತ್ಸವ ಜಿಲ್ಲಾ ಕಲೋತ್ಸವ, ಸಬ್ ಜಿಲ್ಲಾ ಕಲೋತ್ಸವದಲ್ಲಿ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ A ಗ್ರೇಡ್ ಹಾಗೂ ಗ್ರೂಪ್ ಡ್ಯಾನ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. 50ಕ್ಕಿಂತ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾಳೆ.

ಸ್ಪಂದನ ಟಿವಿಯಲ್ಲಿ ಮೂರು ಬಾರಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನ ದಲ್ಲಿ ಎರಡು ಬಾರಿ ವಿಜೇತಳಾಗಿದ್ದಾಳೆ.

ಶ್ರದ್ಧಾ ಎಂ.ಪಿ.  8ನೇ ತರಗತಿ ವಿದ್ಯಾರ್ಥಿನಿ. ಈಕೆಗೆ ಡ್ಯಾನ್ಸ್, ಯಕ್ಷಗಾನ. ಅಭಿನಯ ಅಂದರೆ ತುಂಬಾನೇ ಇಷ್ಟ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇದ್ದರೆ ನಾನು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಿಸುತ್ತೇನೆ. ನನ್ನ ಮೊದಲನೆಯ ಡ್ಯಾನ್ಸ್ ಜರ್ನಿ ನನ್ನ ಅಮ್ಮನಿಂದಲೇ ಶುರುವಾಯಿತು. ನನ್ನ ಟ್ಯಾಲೆಂಟ್ ಅನ್ನು ಹೊರ ತರಲು ಒಂದು ಒಳ್ಳೆ ವೇದಿಕೆ ನನಗೆ ಸಿಗಲು ತೊಡಗಿತು. ಅದರಲ್ಲಿ ಮುಖ್ಯವಾಗಿ ನನಗೆ ಥ್ಯಾಂಕ್ಸ್ ಹೇಳಬೇಕಂದ್ರೆ ವಾಯ್ಸ್ ಆಫ್ ಆರಾಧನಾ 

ತಂಡಕ್ಕೆ. ಯಾಕೆಂದರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೇನೆ.

ಸ್ಪಂದನ ಟಿವಿಯಲ್ಲಿ ಕೂಡ ನನಗೆ ಒಳ್ಳೆಯ ವೇದಿಕೆಯನ್ನು ಒದಗಿಸಿ ಕೊಟ್ಟಿದ್ದಾರೆ. ನೃತ್ಯದಿಂದಲೇ ನನ್ನ ಜರ್ನಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡು ಹೋಗಬೇಕೆಂದು ನನ್ನಾಸೆ.

ಇತ್ತೀಚಿನ ಸುದ್ದಿ

ಜಾಹೀರಾತು