ಇತ್ತೀಚಿನ ಸುದ್ದಿ
ಕಾರ್ಕಳ: ಬೈಕ್- ಪಿಕ್ ಅಪ್ ಡಿಕ್ಕಿ; ಸವಾರ ಭುವನೇಂದ್ರ ಕಾಲೇಜು ವಿದ್ಯಾರ್ಥಿ ದಾರುಣ ಸಾವು
30/07/2022, 20:50

ಕಾರ್ಕಳ(reporterkarnataka.com): ಬೈಕ್ ಮತ್ತು ಪಿಕ್ ಅಪ್ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ಬಳಿ ನಡೆದಿದೆ.
ಮೆನನ್ (20 )ಮೃತಪಟ್ಟ ವಿದ್ಯಾರ್ಥಿ.ಕಾರ್ಕಳದಿಂದ ಬೆಳ್ವಾಯಿ ಕಡೆಗೆ ಸಾಗುತ್ತಿದ್ದ ಪಿಕ್ ಅಪ್ ಗೆ ಎದುರಿನಿಂದ ಬರುತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ನೆಲಕ್ಕೆಸೆಯಲ್ಪಟ್ಟಿದ್ದು , ತೀವ್ರ ಗಾಯಗೊಂಡು ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ರೆಂಜಾಳದ ಮೆನನ್ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಸಿಎ ವ್ಯಾಸಂಗ ಮಾಡುತಿದ್ದರು ಎನ್ನಲಾಗಿದೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.