ಇತ್ತೀಚಿನ ಸುದ್ದಿ
ಈಡನ್ ಕ್ಲಬ್ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ: 50 ಲಕ್ಷ ರೂ. ಅನುದಾನ ಬಿಡುಗಡೆ
01/07/2022, 20:34

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ಈಡನ್ ಕ್ಲಬ್ ರಸ್ತೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಈಡನ್ ಕ್ಲಬ್ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಸ್ಥಳೀಯ ಕಾರ್ಪೋರೇಟರ್ ಹಾಗೂ ಸಾರ್ವಜನಿಕರ ಬೇಡಿಕೆಯಂತೆ ಅನುದಾನ ಬಿಡುಗಡೆಗೊಳಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಕಾಮತ್ ಹೇಳಿದರು.
ಈಗಾಗಲೇ ನಗರದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮಂಗಳೂರು ನಗರವು ಅತೀ ವೇಗವಾಗಿ ಬೆಳೆಯುತ್ತಿರುವ ಕಾರಣ ಭವಿಷ್ಯದ ದೃಷ್ಟಿಯಿಂದ ರಸ್ತೆ ನಿರ್ಮಾಣ, ಫುಟ್ ಪಾತ್, ಪಾರ್ಕಿಂಗ್ ವ್ಯವಸ್ಥೆಗಳ ಒಂದಷ್ಟು ಬದಲಾವಣೆ ಅನಿವಾರ್ಯವಾಗಿದೆ ಎಂದು ಶಾಸಕ ಕಾಮತ್ ನುಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಸ್ಥಳೀಯ ಕಾರ್ಪೋರೇಟರ್ ಶಕಿಲಾ ಕಾವಾ, ಕಾರ್ಪೋರೇಟರ್ ವನಿತಾ ಪ್ರಸಾದ್, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಶ್ರೀನಿವಾಸ್ ಶೇಟ್, ಪ್ರಸನ್ನ, ಪ್ರಸಾದ್, ರವಿಚಂದ್ರ, ವೆಂಕಟೇಶ್, ವಿಜಯ್ ಶೆಣೈ, ಚಂದ್ರಹಾಸ್ ಸೇಮಿತ, ನೈನಾ ವಿಶ್ವನಾಥ್, ಗಾಯತ್ರಿ, ಕಮಲಾಕ್ಷಿ, ಶಿಲ್ಪಾ, ಉಮಾ ಕಂಡೆಟ್ಟು, ವಿಜಯ ಕಲಿಯಾ, ಶೋಭಾ, ಜಗದೀಶ್ ಕಂಡೆಟ್ಟು, ಸತೀಶ್, ಕಿರಣ್, ಶ್ರವಣ್, ರವೀಂದ್ರ ಶೆಣೈ, ಸಂಜು ಸೇಮಿತ, ಬೇಬಿ ಸೇಮಿತ, ಪುಷ್ಪ, ವೀಣಾ ಗುಂಡಳಿಕೆ, ಹರೀಶ್, ನವೀನ್ ಗುಂಡಳಿಕೆ, ಪದ್ಮನಾಭ, ಶುಭಕರ್, ಯಶೋಧಾ, ಯಮುನಾ, ಸುಜಾತ, ಲತಾ ಕಾಮತ್, ಉಪೇಂದ್ರ, ಲೋಕಯ್ಯ, ಪ್ರಮೀಳಾ, ಪ್ರದೀಪ್, ಸರಸ್ವತಿ, ಪದ್ಮಿಣಿ, ಅಜಿತ್, ಯತೀಶ್, ದೀಪಕ್, ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು.