10:33 PM Wednesday20 - August 2025
ಬ್ರೇಕಿಂಗ್ ನ್ಯೂಸ್
ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು… ಸಂಸೆ ಯುವಕ ಆತ್ಮಹತ್ಯೆ ಪ್ರಕರಣ: ಕುದುರೆಮುಖ ಪೊಲೀಸ್ ಕಾನ್ ಸ್ಟೇಬಲ್ ಸಿದ್ದೇಶ್ ಗೋವಾದಲ್ಲಿ… ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರ: ಮಲೆನಾಡು ಅಕ್ಷರಶಃ ಜಲಾವೃತ ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ಇತ್ತೀಚಿನ ಸುದ್ದಿ

ಭಾರತೀಯ ಸಮಾಜದಲ್ಲಿ ಗಂಡು-ಹೆಣ್ಣು ಸಮಾನತೆ: ನಿಜವೇ? ಭ್ರಮೆಯೇ? ತಮಾಷೆಯೇ? ಅಲ್ಲ, ಇದು ಆಕಾಶಕ್ಕೊಂದು ಏಣಿಯೇ ?

15/06/2021, 16:55

ಭಾರತವು ವಿವಿಧತೆಯಲ್ಲಿ ಏಕತೆಯ ಕಂಡ ರಾಷ್ಟ್ರ. ಪ್ರಕೃತಿಯ ಅಭೂತಪೂರ್ವ ಸೃಷ್ಟಿಯೇ ಈ ಗಂಡು ಮತ್ತು ಹೆಣ್ಣಾದರೆ ಇವರಲ್ಲೇಕಿಲ್ಲ ಸಮಾನತೆ? ಇವರಿಬ್ಬರ ನಡುವೆ ಕೇವಲ ದೇಹರಚನೆಯಲ್ಲಿ ವ್ಯತ್ಯಾಸವಿದೆಯೇ ವಿನಃ ಇವರ ಆಸೆ, ಆಕಾಂಕ್ಷೆ ಮತ್ತು ಅಭಿರುಚಿಗಳಲ್ಲಿ ಅಲ್ಲ. ಭಗವಂತನ ಈ ಅಪರೂಪದ ಸೃಷ್ಟಿಯಲ್ಲಿ ಸಮಾನತೆ ಪದಕ್ಕಿಂದು ಅರ್ಥವಿಲ್ಲದಂತಾಗಿದೆ. 

ಅಂದು ಗಾಂಧೀಜಿ ನುಡಿದ ಮಾತು ‘ಯಾವತ್ತು ಒಬ್ಬ ಹೆಣ್ಣು ನಡುರಾತ್ರಿ ಒಬ್ಬಂಟಿಯಾಗಿ ಬೀದಿಯಲ್ಲಿ ನಡೆಯುತ್ತಾಳೋ, ಅಂದು ಭಾರತವು ಸ್ವಾತಂತ್ರ್ಯವನ್ನು ಪಡೆಯುವುದು’ ಇದು ಇಂದಿಗೂ ಕನಸಾಗಿಯೇ ಉಳಿದಿದೆ. ವಾಸ್ತವದಲ್ಲಿ ಇಂದು ನಾವು

ಪ್ರತಿದಿನವೂ ಟಿವಿ, ಪತ್ರಿಕೆ, ಶ್ರವಣ ಮಾಧ್ಯಮಗಳಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಸುದ್ದಿಯನ್ನು ನೋಡುತ್ತೇವೆ, ಕೇಳುತ್ತೇವೆ. ದಿನಬೆಳಗಾದರೆ ಸಾಕು GANG RAPE ಇನ್ನೊಂದು ಮತ್ತೊಂದು ಎಂದು ಹೆಣ್ಣಿನ ಮೇಲಾಗುವ ದೌರ್ಜನ್ಯ ಒಂದಲ್ಲ ಎರಡಲ್ಲ ಲೆಕ್ಕವಿಲ್ಲದಷ್ಟು. ಇದನ್ನ ನೋಡುವವರಿಗೆ, ಕೇಳುವವರಿಗೆ ಕೇವಲ ಸಣ್ಣ ವಿಷಯವಾದರೂ ಅನುಭವಿಸುವ ಜೀವಕ್ಕೆ ಗೊತ್ತು ಅದರ ಹಿಂದಿನ ಯಾತನೆ.

ರಾಷ್ಟ್ರಪಿತರ ಮಾತು ಶತ ಶತಮಾನಗಳುರುಳಿದರೂ ಫಲಿಸದು.

ನವಮಾಸ ತನ್ನ ಹೊಟ್ಟೆಯಲ್ಲಿ ಇಟ್ಟುಕೊಳ್ಳುವ ತಾಯಿ ಅದೆಷ್ಟೋ ಯಾತನೆ ಪಡುತ್ತಾಳೆ. ಅಂತಹ ಕಂದಮ್ಮನ ಮೇಲೆ ದೌರ್ಜನ್ಯ ನಡೆಯುತ್ತದೆ. ನಾವು ನಮ್ಮ ಅಮ್ಮ, ಅಕ್ಕ, ತಂಗಿಯರ ಮೇಲೆ ಯಾಕೆ ದೌರ್ಜನ್ಯ ನಡೆಸುವುದಿಲ್ಲ? ಅವರ ಹಾಗೆ ತಾನೆ ಬೇರೆ ಮನೆಯ ಹೆಣ್ಮಕ್ಕಳು ಕೂಡ ಎಂಬ ಅರಿವು ನಮ್ಮಲ್ಲಿ ಮೂಡಬೇಕು.

ಸಮಾಜದಲ್ಲಿ ಕೇವಲ ಸಂತಾನಭಿವೃದ್ಧಿಗೆ ಮಾತ್ರ ಹೆಣ್ಣು ಬೇಕೇ?

ಹೆಣ್ಣು ಗಂಡಿನ ಕಾಮದ ವಸ್ತುವೇ,? ಇಲ್ಲ ಸೂತ್ರದ ಗೊಂಬೆಯೇ? ಮೈತುಂಬಿ ಬೆಳೆದು ಜನಮದಾತರ ಎದೆ ಎತ್ತರಕ್ಕೆ ನಿಂತ ಮುಗ್ಧ ಜೀವಿಯು ಕೇವಲ ಕಾಮವನ್ನೇ ಉಸಿರಾಗಿಸಿರುವ ಕೆಲವೊಂದು ಬರಗೆಟ್ಟ ಗಂಡಿಗೆ ಆಹಾರವಾಗಬೇಕೇ? 

ಹೆಣ್ಣಿನ ಮೇಲಾಗುವ ಈ ಅಮಾನುಷ ಕೃತ್ಯಕ್ಕೆ ಆಕೆ ಧರಿಸುವ ಉಡುಪುಗಳೇ ಮೂಲ ಕಾರಣವೆಂದರೆ ನಂಬುವುದು ಕಷ್ಟಸಾಧ್ಯ. ಏಕೆಂದರೆ ಏನೂ ಅರಿಯದ ತೊಟ್ಟಿಲ ಹಸುಳೆಯನ್ನೇ ಬಿಡದ ಭಕ್ಷಕರು ಇನ್ನಾವ ಹೆಣ್ಣನ್ನು ಬಿಟ್ಟಾರು? ಹೀಗಿದ್ದ ಮೇಲೆ ಗಂಡಿನ ಕಾಮಕ್ಕೂ ಹೆಣ್ಣು ಧರಿಸುವ ಬಟ್ಟೆಗೂ ಸಂಬಂಧ ಕಲ್ಪಿಸಲಾಗದು. ಮತ್ತೊಂದೇನೆಂದರೆ ಸಾಮಾನ್ಯ ಪ್ರಜೆಗಳಾದ ನಾವು ಆ ಪಕ್ಷ ಈ ಪಕ್ಷ ಎಂದು ರಾಜಕೀಯವನ್ನು ಎತ್ತಿ ಹಿಡಿದು ಯಾವುದೇ ಪಕ್ಷವನ್ನು ಟೀಕಿಸಿ ಅಲ್ಲಗಳೆಯುವುದರಿಂದ ಏನನ್ನೂ ಕಿತ್ತುಕೊಳ್ಳಲಾಗದು. ರಾಜಕೀಯದ ಹಿಂದೆ ಓಟಕ್ಕಿಳಿಯುವುದಕ್ಕಿಂತ ನಾವೆಲ್ಲರೂ ಮಾನವರೆಂದು ನಮ್ಮೊಳಗಿನ ಸಹೋದರಿಗಿಂದು ಕಷ್ಟ ಒದಗಿದೆ ಎಂದರಿತು ನ್ಯಾಯದ ಹಾದಿಯಲ್ಲಿ ನಡೆಯಲಾಗದೆ? ಕಾಡಿಗೆ ಹತ್ತಿರುವ ಬೆಂಕಿ ತನ್ನ ಬುಡಕ್ಕೆ ಹತ್ತಿದಾಗ ಎಚ್ಚೆತ್ತುಕೊಳ್ಳುವುದು ಸರಿಯಲ್ಲ. ಕೆಲವೊಮ್ಮೆ ನನಗೆ ಕಾಡುವ ಪ್ರಶ್ನೆಯೆಂದರೆ ಈ ನೀಚ ಕೃತ್ಯವೆಸಗುವ ಗಂಡು ಜೀವಿ ನಿಜವಾಗಿಯೂ ತನ್ನ ತಾಯಿ ಗರ್ಭದಿಂದಲೇ ಜನಿಸಿರುವನೇ? ಅಕೆಯ ಎದೆ ಹಾಲೇ ಕುಡಿದಿರುವನೇ ? ಎಂದು ಇನ್ನೂ ಅರ್ಥವಾಗಿಲ್ಲ. ಇತರ ಎಲ್ಲ ಜೀವಿಗಳಿಗಿರುವ ಸ್ವಾತಂತ್ರ್ಯ ಹೆಣ್ಣಿಗೆಂದು ದಕ್ಕುವುದೋ..? ಇದಕ್ಕೆಲ್ಲ ಕೊನೆ ಎಂದೋ..?? 

ಪ್ರೀತಿ
ಉಪನ್ಯಾಸಕಿ
ಮಂಗಳ ಕಾಲೇಜು ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು