11:09 AM Tuesday3 - February 2026
ಬ್ರೇಕಿಂಗ್ ನ್ಯೂಸ್
ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,… ಕಂಬನಿ ನಡುವೆ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್‌ ಅಂತಿಮವಿಧಿ: ಬನ್ನೇರುಘಟ್ಟದ ಕಾಸಾಗ್ರೌಂಡ್… ಯಾವ ಹೈಸ್ಪೀಡ್ ರೈಲೂ ಬರಲ್ಲ: ಕೇಂದ್ರ ಬಜೆಟ್ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್… ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿ; ಶಿಕ್ಷಣ, ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್… ಕೇಂದ್ರ ಬಜೆಟ್ | 2047ರ ವಿಕಸಿತ ಭಾರತಕ್ಕೆ ಸುಧಾರಣಾ ಎಕ್ಸ್‌ಪ್ರೆಸ್ ಎಂದ ಪ್ರಧಾನಿ… ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ

ಇತ್ತೀಚಿನ ಸುದ್ದಿ

ಏಪ್ರಿಲ್ 10 ವಿಶ್ವ ಹೋಮಿಯೋಪತಿ ದಿನ: ಪ್ರಪಂಚದಲ್ಲೇ 2ನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ

09/04/2022, 11:05

ಪ್ರತೀ ವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಹೋಮಿಯೋಪತಿ ಒಂದು ವಿಧದ ಚಿಕಿತ್ಸಾ ಪದ್ಧತಿಯಾಗಿದೆ. 

ಅಲೋಪತಿಯ ನಂತರ ವಿಶ್ವದಾದ್ಯಂತ ಎರಡನೇ ಅತೀ ಹೆಚ್ಚು ಜನರು ಬಳಸುವ ಚಿಕಿತ್ಸಾ ಪದ್ಧತಿ ಇದಾಗಿದೆ. ಜರ್ಮನಿನ ಡಾ. ಕ್ರಿಶ್ಚಿಯನ್ ಫೆಡ್ರಿಕ್ ಸಾಮ್ಯೂಯಲ್ ಹ್ಯಾನಿಮನ್ ಎನ್ನುವ ಅಂದಿನ ಕಾಲದ ಖ್ಯಾತ ವೈದ್ಯನಿಂದ ಕಂಡುಹಿಡಿಯಲ್ಪಟ್ಟ ಈ ವೈದ್ಯ ಪದ್ಧತಿ ಸಿಮಿಲಿಯಾ ಸಿಮಿಲಿಬಸ್ಕ್ಯೂರೆಂಟರ್ ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಅಂದರೆ, ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಜನಪ್ರೀಯ ಮಾತಿನಂತೆ , ಒಬ್ಬ ರೋಗಿಯ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಬೇಕಾದರೆ, ಅದೇ ಲಕ್ಷಣವನ್ನು  ಉಂಟುಮಾಡಬಲ್ಲ  ಔಷಧವನ್ನು ಅಲ್ಪ  ಪ್ರಮಾಣದಲ್ಲಿ ನೀಡಿದಾಗ  ರೋಗವನ್ನು ಶಮನ ಮಾಡಬಲ್ಲದು ಎಂದು ಅರ್ಥ.

ಈ ವಿಧಾನದ ಚಿಕಿತ್ಸೆಯ ವೈಶಿಷ್ಟ ಏನನಂದರೆ  ಒಬ್ಬ ರೋಗಿಯ ರೋಗಲಕ್ಷಣಗಳನ್ನು ಮಾತ್ರ ಪರಿಗಣಿಸದೇ, ಆತನ ದೈಹಿಕ ಹಾಗೂ ಮಾನಸಿಕ ವ್ಯಕ್ತಿತ್ವವನ್ನೂ  ಒಟ್ಟುಗೂಡಿಸಿ ಸೂಕ್ತವಾದ ಔಷಧಿಯನ್ನ ನೀಡಿ ಆ ಮೂಲಕ ಆತನ ರೋಗ ನಿರೋಧಕ ಶಕ್ತಿಯನ್ನೂ ಜಾಗೃತಗೊಳಿಸಿ ದೇಹವನ್ನು ಆ ರೋಗದ ವಿರುದ್ಧ ಹೋರಾಡುವಂತೆ  ಸಜ್ಜುಗೊಳಿಸುವ ಪ್ರಕ್ರೀಯೆಯಾಗಿದೆ.

ಹಾಗೆಯೇ  ಈ ಔಷಧಿಯ ಮೂಲ ತಿಳಿದುಕೊಳ್ಳುವುದಾದರೆ ಹೆಚ್ಚಿನ ಪ್ರಮಾಣದ ಮದ್ದನ್ನು ಸಸ್ಯಜನ್ಯದಿಂದ  ಇನ್ನೂ ಕೆಲವನ್ನು  ಪ್ರಾಣಿ ಜನ್ಯದಿಂದಲೂ, ಲವಣಗಳು ಲೋಹಗಳ  ಮೂಲದಿಂದಲೂ, ಸಾರ್ಕೋಡ್ ನೋಸೊಡ್ಗಳಿಂದಲೂ ತಯಾರಿಸಲಾಗುತ್ತದೆ.

ಈ ಔಷಧಗಳನ್ನು ಸಣ್ಣ ಗುಳಿಗೆ, ಮಾತ್ರೆ, ದ್ರವ ರೂಪದಲ್ಲಿ, ಚೂರ್ಣದ ರೂಪದಲ್ಲೂ ನೀಡಲಾಗುವುದು.ಇದನ್ನು ಸಣ್ಣ  ಶಿಶುವಿನಿಂದ ಹಿಡಿದು ವಯೋವೃದ್ದರು,

ಮಹಿಳೆಯರು  ಸಹ ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು. ಈ ಚಿಕಿತ್ಸೆಯಿಂದ ಯಾವುದೇ ರೀತಿಯ ಗಂಭೀರ ಅಡ್ಡ  ಪರಿಣಾಮಗಳಿಲ್ಲ. ಸಾಮಾನ್ಯವಾಗಿ ಹೊಮಿಯೋಪತಿಯ ಬಗ್ಗೆ ಕೇಳಿ ಬರುವ ತಪ್ಪುಅಭಿಪ್ರಾಯ ಎಂದರೆ ಇದು ನಿಧಾನಗತಿಯ (ಸ್ಲೋ ಆಕ್ಟಿಂಗ್ ) ಚಿಕಿತ್ಸೆ ಎಂದು.ಆದರೆ ಸತ್ಯ ಸಂಗತಿ ಏನೆಂದರೆ ಅಕ್ಯೂಟ್ ಅಥವಾ ಅಲ್ಪಕಾಲೀನಾ ರೋಗಗಳಾದ ಶೀತ, ಜ್ವರ,ವಾಂತಿಯಂತಹ ತೊಂದರೆಗಳಿಗೆ ಕೆಲವೇ ಗಂಟೆಗಳಲ್ಲಿ ಶಮನ ಮಾಡುವ ಸಾಮರ್ಥ್ಯ ಈ ಔಷಧಗಳಿಗಿವೆ.ಅಂತೆಯೇ ದೀರ್ಘಕಾಲೀನಾ ರೋಗಗಳಾದ ಅಲರ್ಜಿ, ಅಸ್ತಮಾ, ಗಂಟುನೋವು, ಸಂಧಿವಾತ, ಥೈರಾಡ್, ಗ್ಯಾಸ್ಟ್ರಿಟಿಸ್, ಕಿಡ್ನಿ ಕಲ್ಲು, ಉರಿಮೂತ್ರ,ಸ್ತ್ರೀಯರಲ್ಲಿ ಕಂಡುಬರುವ ಮುಟ್ಟಿನ ಸಮಸ್ಯೆ,PCOD, ಗರ್ಭಶಯದ ಗಡ್ಡೆ ಮುಂತಾದ ರೋಗಗಳಿಗೆ ಪರಿಣಾಮಕಾರಿಯಾಗಿದೆ. ಇಡೀ ಸಮಾಜದ ಸ್ವಾಸ್ತ್ಯ ವನ್ನು ಕೆಡಿಸಿದ ಕೊರೊನದಂತಹ ಖಾಯಿಲೆಗಳ ಈ ಸಂದರ್ಭದಲ್ಲಿ ಇ ನಾವೆಲ್ಲಾ ಒಳ್ಳೆಯ ಆರೋಗ್ಯಭ್ಯಾಸ ಹಾಗು ಹವ್ಯಾಸಗಳನ್ನು ರೂಢಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಕುಗ್ಗಲು ಬಿಡದೆ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಸ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು