ಇತ್ತೀಚಿನ ಸುದ್ದಿ
ದಿಲ್ಲಿಯಲ್ಲಿ ಅಗ್ನಿ ಅನಾಹುತ: 7 ಮಂದಿ ಸಾವು, 60ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗಾಹುತಿ
12/03/2022, 22:14

ಹೊಸದಿಲ್ಲಿ(reporterkarnataka.com): ದಿಲ್ಲಿಯ ಗೋಕಲ್ ಪುರಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಗುಡಿಸಲುಗಳು ಅಗ್ನಿಗಾಹುತಿಯಾಗಿದೆ.
ದುರಂತ ನಡೆದ ಸ್ಥಳದಿಂದ 7 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಬೆಂಕಿಯನ್ನು ನಂದಿಸಲಾಗಿದೆ ಎಂದು ದಿಲ್ಲಿ ಅಗ್ನಿಶಾಮಕ ದಳ ಇಲಾಖೆ ತಿಳಿಸಿದೆ.
ರಾತ್ರಿ 1 ಗಂಟೆಗೆ ಗೋಕಲ್ ಪುರಿ ಪಿಎಸ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣವೇ ತಂಡಗಳು ಎಲ್ಲಾ ರಕ್ಷಣಾ ಸಾಧನಗಳೊಂದಿಗೆ ಸ್ಥಳಕ್ಕೆ ತಲುಪಿದವು. ನಾವು ಅಗ್ನಿಶಾಮಕ ಇಲಾಖೆಯನ್ನು ಕೂಡ ಸಂಪರ್ಕಿಸಿದ್ದೇವೆ, ಅವರು ಉತ್ತಮವಾಗಿ ಸ್ಪಂದಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.