11:36 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಹಲ್ಯಾಳ ಗ್ರಾಮದ ಯುವಕರಿಂದ ಕೃಷ್ಣಾ ನದಿ ಸ್ವಚ್ಛತೆ: ಸಾರ್ವಜನಿಕರಿಂದ ಶ್ಲಾಘನೆ

18/02/2022, 14:18

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಒಂದು ಕಡೆ ರಾಜ್ಯದಲ್ಲಿ ಹಿಜಾಬ್ /ಕೇಸರಿ ವಿವಾದ ತಲೆದೋರಿದರೆ, ಇನ್ನೊಂದು ಕಡೆ ಅಥಣಿ ತಾಲೂಕಿನ ಹಲ್ಯಾಳ ಯುವಕರು ಸ್ವಯಂ ಪ್ರೇರಣೆಯಿಂದ ಕೃಷ್ಣಾ ನದಿ ಸ್ವಚ್ಛತೆಗೆ  ಮುಂದಾಗಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.


ಹಲ್ಯಾಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರವ್ವ ಪರಸಪ್ಪ ಮಾದರ, ಅವರ ಮಗನಾದ ರಾಹುಲ್ ಪರಸಪ್ಪ, ಮಾದರ್ ಹಾಗೂ ವಿನೋದ್ ಅರ್ಜುನ್ ಕುರಣಿ, ಪುಂಡಲಿಕ್ ಚಂದ್ರಪ್ಪ ಮಾದರ ಅವರು ಸ್ವಯಂ ಪ್ರೇರಿತವಾಗಿ ನದಿ ದಡದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.


ಚಿಂಚಲಿ ಮಯಕ್ಕಾ ದೇವಿಯ ಜಾತ್ರೆ ನಿಮಿತ್ಯ ಸಾವಿರಾರು ಭಕ್ತಾದಿಗಳು ಮೊದಲು ಕೃಷ್ಣ ನದಿ ಪವಿತ್ರ ಸ್ನಾನಕ್ಕೆ ಹೆಚ್ಚಿನ ಆದ್ಯತೆ ನೀಡಿ ತದನಂತರ ದೇವಿಯ ದರ್ಶನಕ್ಕೆ ಹೋಗುತ್ತಾರೆ. ಹೋದ ವರ್ಷ ಪ್ರವಾಹದಿಂದ ನದಿ ತೀರಕ್ಕೆ ಅಪಾರ ಪ್ರಮಾಣದಲ್ಲಿ ಮುಳ್ಳುಗಳು ತುಂಬಿ ಜನಗಳಿಗೆ ಸಮಸ್ಯೆ ಆಗುವುದನ್ನು ಅರಿತು ಖುದ್ದಾಗಿ ಗೆಳೆಯರೊಂದಿಗೆ ನದಿ ಸ್ವಚ್ಛತೆ ಕಾರ್ಯವನ್ನು  ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು