4:20 PM Sunday13 - July 2025
ಬ್ರೇಕಿಂಗ್ ನ್ಯೂಸ್
Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಇತ್ತೀಚಿನ ಸುದ್ದಿ

ಮಂಗಳೂರಿನ ಚಾಲಕರು ಪ್ರಜ್ಞಾವಂತರು: ಚಾಲಕರಿಗೆ ಜಾಗೃತಿ ಶಿಬಿರದಲ್ಲಿ ಎಸಿಪಿ ನಟರಾಜ್

15/01/2022, 15:25

ಮಂಗಳೂರು(reporterkarnataka.com
ನಗರ ಟ್ರಾಫಿಕ್ ಪೊಲೀಸ್ ಮತ್ತು ದ. ಕ ಜಿಲ್ಲಾ ಶಾಲಾ ಮಕ್ಕಳ ಮಕ್ಕಳ ವಾಹನ ಚಾಲಕರ ಸಂಘ ಇವರ ಸಹಯೋಗದೊಂದಿಗೆ ಚಾಲಕರಿಗೆ ಜಾಗೃತಿ ಶಿಬಿರವು ಅತ್ತಾವರ ಉಮಾಮಹೇಶ್ವರಿ ದೇವಸ್ಥಾನದ ಹಾಲ್ ನಲ್ಲಿ ಜರುಗಿತು.
ಟ್ರಾಫಿಕ್ ಎಸಿಪಿ ನಟರಾಜ್ ಮಾತನಾಡಿ ಮಂಗಳೂರಿನ ಚಾಲಕರು ಇತರ ಕಡೆಗಳಿಗೆ ಹೋಲಿಸಿದರೆ ಪ್ರಜ್ಞಾವಂತರು. ಬದಲಿ ಚಾಲಕರನ್ನು ನಿಯೋಜನೆ ಮಾಡುವಾಗ ಜಾಗ್ರತೆ ವಹಿಸಿ., ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಮಕ್ಕಳ ಜಾಗ್ರತೆ ನಿಮ್ಮ ಹೊಣೆ. ಹಾಗೂ ಲೈಂಗಿಕತೆ ತೊಂದರೆಗಳಿಂದ ಕಾಪಾಡಿ, ದೌರ್ಜನ್ಯವನ್ನು ಮಾಡುವುದು ಎಷ್ಟು ಅಪರಾಧವೋ. ಅಷ್ಟೇ ಅದನ್ನು ನೋಡಿ ಸುಮ್ಮನಿರುವುದೋ ಅಪರಾಧ, ರಕ್ಷೆ ಸುರಕ್ಷತೆ ನಮ್ಮ ಹೊಣೆ, ಚಾಲನೆ ವೇಳೆ ತಾಳ್ಮೆಯುತ ಚಲಾವಣೆ ಮಾಡಿ ಮಾಡಿ, ಮಕ್ಕಳ ಮೇಲೆ ಸಲಿಗೆಯಿಂದ ವರ್ತಿಸಬೇಡಿ, ನೀವು ಸರಿಯಾಗಿದ್ದರೂ ನೋಡುವವರು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ ಎಂದು ಚಾಲಕರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕದ್ರಿ ಟ್ರಾಫಿಕ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಭಟ್,ಮಾತನಾಡಿ ಪೊಲೀಸ್ ಸಿಬ್ಬಂದಿ ಕಾನೂನಿನ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದ್ದರಿಂದ ನಾವು ಯಾರ ಮೇಲೆಯೂ ಕೂಡ ಅನಗತ್ಯ ದಂಡ ವಿಧಿಸಲು ಇಚ್ಚಿಸುವುದಿಲ್ಲ. ಓವರ್ ಲೋಡ್ ಮಾಡಿಕೊಂಡು ಹೋಗದೆ ಹೊಂದಾಣಿಕೆಯನ್ನು ಮಾಡುವ ನಿಟ್ಟಿನಲ್ಲಿ ಚಾಲಕರು ನಡೆದುಕೊಳ್ಳಬೇಕು. ಅದರ ಬದಲು ಇತರ ಚಾಲಕರಿಗೆ ದುಡಿಯಲು ಅವಕಾಶ ನೀಡಿ ಎಂದು ಅವರು ಮನವಿ ಮಾಡಿದರು.

ಮಂಗಳೂರು ಶಾರದಾ ಶಾಲೆಯ ಪ್ರಾಂಶುಪಾಲ ದಯಾನಂದ ಕಟೀಲ್ ಚಾಲಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಪಾಂಡೇಶ್ವರ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಜಯಾನಂದ, ಸಂಘದ ಅಧ್ಯಕ್ಷ ಉಮೇಶ್ ಅತ್ತಾವರ, ಸಂಘಟನಾ ಕಾರ್ಯದರ್ಶಿ ಲೋಕೇಶ್,ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರೆಹಮಾನ್ ಕುಂಜತಬೈಲ್ ನೆರೆವೇರಿಸಿದರು. ಪ್ರಧಾನ ಕಾರ್ಯದರ್ಶಿ ಕಿರಣ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು