2:52 PM Tuesday16 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ ಸೋಮವಾರಪೇಟೆ:ತೋಟದಲ್ಲಿ ಒಣಗಿದ್ದ ಮರ ಬಿದ್ದು ಬೆಳೆಗಾರ ಸಾವು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಲೀಟರ್‍ ಗಿಂತ ಕಡಿಮೆ ಪ್ರಮಾಣದ ಕುಡಿಯುವ… ಹುಣಸೂರು ತಾಲೂಕಿನ ಕೂಡ್ಲೂರಿನಲ್ಲಿ ವ್ಯಾಘ್ರ ಸೆರೆ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹುಲಿ 15 ಸಾವಿರ ಲಂಚ ಸ್ವೀಕಾರ: ಮೂಡಿಗೆರೆ ಸರ್ವೇ ಇಲಾಖೆ ಮಹಿಳಾ ಸಿಬ್ಬಂದಿ ಸುಮಾ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ಸಂಪಾದಕ ಅಶೋಕ್ ಕಲ್ಲಡ್ಕಗೆ  ಪಿತೃ ವಿಯೋಗ: ಹಲವು ಗಣ್ಯರ ಸಂತಾಪ

25/12/2021, 22:35

ಮಂಗಳೂರು(reporterkarnataka.com): ರಿಪೋರ್ಟರ್ ಕರ್ನಾಟಕ ಸಂಪಾದಕ ಅಶೋಕ್ ಕಲ್ಲಡ್ಕ ಅವರ ತಂದೆ ಕೃಷ್ಣ ಕಲ್ಲಡ್ಕ ಅವರು ಗುರುವಾರ ನಿಧನರಾದರು.

ಕಲ್ಲಡ್ಕದಲ್ಲಿ ಕೃಷ್ಣ ಟೈಲರ್ ಎಂದೇ ಪ್ರಸಿದ್ಧರಾಗಿದ್ದ ಅವರು ಕಲ್ಲಡ್ಕ ಸಮೀಪದ ನಾಗತಿಮಾರ್ ನಲ್ಲಿ 1928ರಲ್ಲಿ ಜನಿಸಿದ್ದರು. ಬಾಲ್ಯದ ಜೀವನವನ್ನು ಮಂಗಳೂರಿನಲ್ಲಿ ಕಳೆದ ಅವರು ಕಲ್ಲಡ್ಕದಲ್ಲಿ ಟೈಲರಿಂಗ್ ವೃತ್ತಿ ಆರಂಭಿಸಿದ್ದರು. ಕಲ್ಲಡ್ಕದ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸ್ನೇಹಿತರ ಬಳಗವನ್ನೇ ಸಂಪಾದಿಸಿದ್ದರು.

ಅವರು ಪತ್ನಿ ರಾಜೀವಿ, ಪುತ್ರರಾದ ಚೆನ್ನೈನ ನಂಜಿಲ್ ಕಂಪನಿಯ ಜನರಲ್ ಮೆನೇಜರ್ ಉದಯ್ ಕಲ್ಲಡ್ಕ, ಕುಳಾಯಿಯ ರಶ್ಮಿ ಸ್ಟಿಚ್ ವೇರ್ ಮಾಲೀಕ ವಿದ್ಯಾಧರ ಕಲ್ಲಡ್ಕ, ಅಶೋಕ್ ಕಲ್ಲಡ್ಕ ಮತ್ತು ಪುತ್ರಿಯರಾದ ವಿಜಯಲಕ್ಷ್ಮೀ ಹಾಗೂ ಭಾರತಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸಂತಾಪ: ಕೃಷ್ಣ ಕಲ್ಲಡ್ಕ ಅವರ ನಿಧನಕ್ಕೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು