11:54 PM Monday6 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ಅಂಡರ್​ 19 ವಿಶ್ವಕಪ್: ಬಿಸಿಸಿಐಯಿಂದ ಟೀಮ್ ಇಂಡಿಯಾ ಪ್ರಕಟ; ದಿಲ್ಲಿಯ ಯಶ್​ ಧುಲ್​ ನಾಯಕ

20/12/2021, 11:45

ಹೊಸದಿಲ್ಲಿ(reporterkarnataka.com):

ವೆಸ್ಟ್​ ಇಂಡೀಸ್​​ನಲ್ಲಿ ಜನವರಿ 14ರಿಂದ ಫೆಬ್ರವರಿ 5ರವರೆಗೆ ನಡೆಯುವ 2022ರ ಅಂಡರ್​ 19 ವಿಶ್ವಕಪ್​ಗಾಗಿ ಬಿಸಿಸಿಐ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. 

ದಿಲ್ಲಿಯ ಯಶ್​ ಧುಲ್​ ನಾಯಕನಾಗಿ ಮತ್ತು ಆಂಧ್ರಪ್ರದೇಶದ ಎಸ್​ ಕೆ ರಶೀದ್ ಉಪನಾಯಕನಾಗಿ ನೇಮಕವಾಗಿದ್ದಾರೆ.

ಈ 14ನೇ ಆವೃತ್ತಿಯ ಟೂರ್ನಿಯಲ್ಲಿ 16 ದೇಶಗಳು ಭಾಗವಹಿಸಲಿವೆ. ಒಟ್ಟು 48 ಪಂದ್ಯಗಳು 4 ಕೆರಿಬಿಯನ್ ದೇಶಗಳಲ್ಲಿ ನಡೆಯಲಿವೆ.

ಯಶ್​ ಧುಲ್(ನಾಯಕ, ಡೆಲ್ಲಿ), ಹರ್ನೂರ್ ಸಿಂಗ್(UTCA ಚಂಡೀಗಡ) ಅಂಗ್​ಕ್ರಿಶ್​ ರಘವಂಶಿ(ಮುಂಬೈ), ಎಸ್​ಕೆ ರಶೀದ್(ಆಂದ್ರ ಪ್ರದೇಶ)​, ನಿಶಾಂತ್ ಸಿಂಧು(ಹರಿಯಾಣ), ಸಿದ್ಧಾರ್ಥ್​ ಯಾದವ್​(ಉತ್ತರಪ್ರದೇಶ), ಅನೀಶ್ವರ್ ಗೌತಮ್(ಕರ್ನಾಟಕ)​, ದಿನೇಶ್ ಬಾನ(ವಿಕೀ, ಹರಿಯಾಣ) ಆರಾಧ್ಯ ಯಾದವ್​(ವಿಕೆಟ್ ಕೀಪರ್, ಉತ್ತರಪ್ರದೇಶ), ರಾಜ್​ ಅಂಗದ್ ಬಾವಾ(UTCA ಚಂಡೀಗಢ), ಮನವ್ ಪ್ರಕಾಶ್(ತಮಿಳುನಾಡು), ಕೌಶಾಲ್ ತಾಂಬೆ(ಮಹಾರಾಷ್ಟ್ರ), ಆರ್​ಎಸ್​ ಹಂಗಾರ್ಗೆಕರ್ (ಮಹಾರಾಷ್ಟ್ರ), ವಾಸು ವತ್ಸ್(ಉತ್ತರಪ್ರದೇಶ)​, ವಿಕಿ ಒಸ್ತ್ವಾಲ್(ಮಹಾರಾಷ್ಟ್ರ) , ರವಿಕುಮಾರ್(ಬೆಂಗಾಲ್), ಗರ್ವ್​ ಸಂಗ್ವಾನ್(ಹರಿಯಾಣ).

ಮೀಸಲು ಆಟಗಾರರು
ರಿಶಿತ್ ರೆಡ್ಡಿ(ಹೈದರಾಬಾದ್​), ಉದಯ್ ಶಹರನ್(ಪಂಜಾಬ್), ಅನಶ್​ ಗೋಸಾಯ್(ಸೌರಾಷ್ಟ್ರ), ಅಮೃತ್​ ರಾಜ್ ಉಪಾಧ್ಯಾಯ್(ಬೆಂಗಾಲ್), ಪಿಎಂ ಸಿಂಗ್ ರಾಥೋರ್(ರಾಜಸ್ಥಾನ್)

ಭಾರತ U19 ಬಿ ಗುಂಪಿನಲ್ಲಿದ್ದು, ಜನವರಿ 15 ರಂದು ದಕ್ಷಿಣ ಆಫ್ರಿಕಾ, ಜನವರಿ 18ರಂದು ಐರ್ಲೆಂಡ್ ಮತ್ತು ಜನವರಿ 22ರಂದು ಉಗಾಂಡ ವಿರುದ್ಧ ಸೆಣಸಾಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು