ಇತ್ತೀಚಿನ ಸುದ್ದಿ
ಮಂಜೇಶ್ವರ ಮದನಂತೇಶ್ವರ ದೇವಸ್ಥಾನದಲ್ಲಿ ವೈಭವದ ಷಷ್ಠಿ ಮಹೋತ್ಸವ: ಬ್ರಹ್ಮ ರಥೋತ್ಸವ
09/12/2021, 19:05

ಚಿತ್ರ: ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com) : ಗೌಡ ಸಾರಸ್ವತ ಸಮಾಜದ 18 ಪೇಟೆಯ ದೇವಳವೆಂಬ ಖ್ಯಾತಿ ಪಡೆದ ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ವೈಭವದ ಷಷ್ಠ ಮಹೋತ್ಸವ ಆಚರಿಸಲಾಯಿತು.
ದೇವರ ಸನ್ನಿಧಿಯಲ್ಲಿ ಷಷ್ಠಿ ಬ್ರಹ್ಮ ರಥೋತ್ಸವ ಅಂಗವಾಗಿ ಇಂದು ಪ್ರಾತಃ ಸ್ವರ್ಣ ಲಾಲ್ಕಿ ಉತ್ಸವ ಜರಗಿತು ಬಳಿಕ ಸಂಜೆ ಶ್ರೀ ದೇವರ ಬ್ರಹ್ಮ ರಥೋತ್ಸವ ನೆರವೇರಿತು. ಸಾಯಂಕಾಲ ಶ್ರೀದೇವರ ಬ್ರಹ್ಮ ರಥೋತ್ಸವ ಪ್ರಯುಕ್ತ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ರಥಾರೂಢ ಶ್ರೀದೇವರಿಗೆ ಮಂಗಳಾರತಿ ನೆರವೇರಿಸಿದರು . ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಕೋಟೇಶ್ವರ ದಿನೇಶ್ ಕಾಮತ್ , ಛತ್ರಪತಿ ಪ್ರಭು , ಯೋಗೇಶ್ ಕಾಮತ್ ಕೃಷ್ಣ ಭಟ್ , ರಾಘವೇಂದ್ರ ಪ್ರಭು ಹಾಗೂ ೧೮ ಪೇಟೆಯ ಸದಸ್ಯರು ಉಪಸ್ಥಿತರಿದ್ದರು .ಷಷ್ಠಿ ಮಹೋತ್ಸವ ಪ್ರಯುಕ್ತ ದೇಶ ವಿದೇಶಗಳಿಂದ ಸಹಸ್ರಾರು ಭಜಕರು ಪಾಲ್ಗೊಂಡರು ರಾತ್ರಿ ಸಮಾರಾಧನೆ ನಡೆಯಿತು.