11:13 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ವಿಕಲಚೇತನರ ಕುಟುಂಬಗಳಿಗೆ ತಿಂಗಳ ದಿನಸಿ ವಿತರಣೆ:  ಹೃದಯವಂತಿಕೆ ಮೆರೆದ ಬ್ಯಾಲಹಳ್ಳಿ ಗೋವಿಂದಗೌಡ

30/05/2021, 11:25

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಸೊಪ್ಪು ತರಕಾರಿ , ಟೀ ಮಾರಿ ಸ್ವಾಭಿಮಾನಿ ಜೀವನ ಕಟ್ಟಿಕೊಂಡಿದ್ದ ವಿಕಲಚೇತನರ ಕುಟುಂಬಗಳು ಲಾಕ್‌ಡೌನ್‌ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿರುವುದು ಅತ್ಯಂತ ನೋವಿನ ಸಂಗತಿ , ಅಂತಹವರಿಗೆ ತಮ್ಮ ಕೈಲಾದಷ್ಟು ನೆರವು ಒದಗಿಸುವ ಪ್ರಯತ್ನ ಮಾಡುವುದಾಗಿ ಕೋಲಾರ  ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನ್ವಂತರ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೀಡಾಗಿ ಕುಟುಂಬ ಉಪವಾಸದಲ್ಲಿದೆ ಎಂದು ನೋವು ತೋಡಿಕೊಂಡ ವಿಕಲಚೇತನರಿಗೆ ಇಡೀ ತಿಂಗಳಿಗಾಗುವಷ್ಟು ಎಲ್ಲಾ ರೀತಿಯ ದಿನಸಿ ವಸ್ತುಗಳನ್ನು ವಿತರಿಸಿದರು.

ಲಾಕ್‌ಡೌನ್ ಇಂದು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ . ಇದು ದುರ್ದೈವ ಎಂದು ತಿಳಿಸಿ ಇಂತಹ ಸಂದರ್ಭದಲ್ಲಿ ಉಳ್ಳವರು ಮತ್ತಷ್ಟು ನೆರವು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು. 

ಭಿಕ್ಷೆ ಬೇಡುವುದು ಗೊತ್ತಿಲ್ಲ , ಕೆಲವರು ಸೊಪ್ಪು ತರಕಾರಿ ಮಾರಿ , ಮತ್ತೆ ಕೆಲವು ವಿಶಿಷ್ಟ ಚೇತನರು ಟೀ ಮಾರಿ ಜೀವನ ನಡೆಸುತ್ತಿದ್ದೇವು. ಆದರೆ ಇದೀಗ ಲಾಕ್‌ಡೌನ್‌ನಿಂದ ನಮ್ಮ ಕೆಲಸಕ್ಕೆ ಕತ್ತರಿ ಬಿದ್ದಿದೆ . ನಾವು ಬೀದಿಗೆ ಬಂದಿದ್ದೇವೆ ಎಂದು ಕಣ್ಣೀರಿಟ್ಟ ವಿಕಲಚೇತನರನ್ನು ಕಂಡ ಗೋವಿಂದಗೌಡರು ಭಾವಪರವಶರಾದರು .

ವಿಕಲಚೇತನ ಪತಿ , ಇಬ್ಬರು ಮಕ್ಕಳು ಅತ್ತೆಮಾವರನ್ನು ಪೋಷಿಸುತ್ತಿರುವ ನಗರದ ಚಾಮುಂಡೇಶ್ವರಿ ನಗರದ ಸುಮಿತ್ರಾ , ನಾವು ಆರು ಮಂದಿ ಇದ್ದೇವೆ , ಇದೀಗ ತರಕಾರಿ ಮಾರಾಟಕ್ಕೂ ಕುತ್ತು ಬಂದಿದ್ದು , ಮಕ್ಕಳಿಗೆ ರಾತ್ರಿ ಅನ್ನ ನೀಡಿ , ಹಸಿವಿಗೆ ಅಂಜಿ ನೆರವು ಬೇಡುತ್ತಿರುವುದಾಗಿ ತಿಳಿಸಿದರು . ಅದೇ ರೀತಿ ಟೀ ಮಾರಿ ಬದುಕು ಸಾಗಿಸುತ್ತಿದ್ದ ವಿಕಲಚೇತನ ಚಾಮುಂಡೇಶ್ವರಿ ನಗರದ ಬಾಲಾಜಿ , ಕಾರಂಜಿ ಕಟ್ಟೆಯ ನಿಶಾಂತ್ ಇಡೀ ಕುಟುಂಬ ಪೋಷಣೆ ನಮ್ಮ ಹೆಗಲಿಗಿದೆ ಆದರೆ ಲಾಕ್‌ಡೌನ್ ನಮ್ಮ ಬದುಕು ಕಸಿದಕೊಂಡಿದೆ ಎಂದು ಅಳಲು ತೋಡಿಕೊಂಡರು.

ಅಮ್ಮೇರಹಳ್ಳಿಯ ವಿಕಲಚೇತನರಾದ ಶ್ರೀನಿವಾಸ್ , ತರಕಾರಿ ಮಾರಿ ಜೀವನ ಕಟ್ಟಿಕೊಂಡಿದ್ದರೆ ಚಾಮುಂಡೇಶ್ವರಿ ನಗರದ ನಾಗರಾಜ್ ಪೆಂಡಾಲ್ ರಿಪೇರಿ ಮೂಲಕ ಪತ್ನಿ , ಮಕ್ಕಳು , ತಂದೆ , ತಾಯಿಯನ್ನು ಪೋಷಿಸುವ ಹೊಣೆ ಹೊತ್ತಿದ್ದು , ಮದುವೆ , ಕಾರ್ಯಕ್ರಮಗಳಿಲ್ಲದ ಕಾರಣ ಆ ಕೆಲಸವೂ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟರು.

ವಿಕಲಚೇತನರ ಸಂಕಷ್ಟಕ್ಕೆ ಸ್ಪಂದಿಸಿದ ಬ್ಯಾಲಹಳ್ಳಿ ಗೋವಿಂದಗೌಡರು ಪ್ರತಿಕುಟುಂಬಕ್ಕೂ ೧೫ ಕೆಜಿ ಅಕ್ಕಿ , ೫ ಕೆಜಿ ಗೋದಿಹಿಟ್ಟು , ೨ ಕೆಜಿ ಬೇಳೆ , ಟೀ , ಕಾಫಿ , ಮಕ್ಕಳಿಗೆ ಹಾರ್ಲಿಕ್ಸ್ ಸಮೇತ ಇಡೀ ತಿಂಗಳಿಗಾಗುವಷ್ಟು ದಿನಸಿ ವಸ್ತುಗಳನ್ನು ವಿತರಿಸಿ ಮತ್ತಷ್ಟು ನರವಿನ ಭರವಸೆ ನೀಡಿದರು. 

ಮನ್ವಂತರ ಜನಸೇವಾ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಆನಂತರ ಮಾತನಾಡಿ , ಕಷ್ಟಪಟ್ಟು ಬೆಳೆದ ತರಕಾರಿಗಳಿಗೆ ಬೆಲೆಯಿಲ್ಲದೇ ತೋಟವನ್ನೇ ನಾಶಪಡಿಸುವ ಪ್ರಯತ್ನ ನಡೆಸಿರುವ ರೈತರ ನೋವಿಗೂ ಸ್ಪಂದಿಸಿರುವ ಬ್ಯಾಲಹಳ್ಳಿ ಗೋವಿಂದಗೌಡರು , ರೈತರಿಂದ ತೋಟದಲ್ಲೇ ತರಕಾರಿ ಖರೀದಿಸಿ ಹಣ ನೀಡಿ ಅದೇ ತರಕಾರಿಯನ್ನು ಬಡವರಿಗೆ ಹಂಚುವ ಕೆಲಸವನ್ನೂ ಮನ್ವಂತರ ಜನಸೇವಾ ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್ , ಟ್ರಸ್ಟ್‌ನ ಖಜಾಂಚಿ ಎಸ್.ಎನ್.ಪ್ರಕಾಶ್ , ಡಿಸಿಸಿ ಬ್ಯಾಂghಕಿನ ಪದ್ಮಮ್ಮ , ಖಲೀಮುಲ್ಲಾ ಮತ್ತಿತರರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು