2:46 PM Tuesday18 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಉಗುಳು ಮುಕ್ತ ‘ಕುಡ್ಲ’ ನಮ್ಮದಾಗಲಿ: ಕಡಲನಗರಿಯ ಅಂದಕ್ಕೆ ಮಸಿ ಬಳಿಯದಿರಿ!

18/08/2026, 14:46

ಮನೋಜ್ ಕೆ. ಬೆಂಗ್ರೆ, ಮಂಗಳೂರು

info.reporterkarnataka@gmail.com

ಕರಾವಳಿಯ ಹೆಮ್ಮೆಯ ನಗರಿ, ಶೈಕ್ಷಣಿಕ ಹಾಗೂ ವೈದ್ಯಕೀಯ ರಂಗದಲ್ಲಿ ತನ್ನದೇ ಆದ ಸ್ವಚ್ಛ ಹಾಗೂ ಸುಂದರ ಛಾಪು ಮೂಡಿಸಿರುವ ‘ಕುಡ್ಲ’ (ಮಂಗಳೂರು) ಇಂದು ಕಣ್ಣಿಗೆ ಕಾಣದ ಮತ್ತೊಂದು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಅದೇನೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳಿ ನಗರವನ್ನು ಗಲೀಜು ಮಾಡುವುದು!


​ವಿಶೇಷವಾಗಿ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ಹೊರ ಊರುಗಳಿಂದ, ಹೊರ ರಾಜ್ಯಗಳಿಂದ ಮಂಗಳೂರಿಗೆ ಬರುವ ಕೆಲವರಲ್ಲಿ ಸಾರ್ವಜನಿಕ ನೈರ್ಮಲ್ಯದ ಅರಿವೇ ಇಲ್ಲದಿರುವುದು ದುರಂತ. ಬಸ್ ತಂಗುದಾಣಗಳು, ರಸ್ತೆ ಬದಿ ಗೋಡೆಗಳು, ವಾಣಿಜ್ಯ ಸಂಕೀರ್ಣದ ಮೆಟ್ಟಿಲುಗಳು, ಡಿವೈಡರ್‌ಗಳು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಪಾನ್ ಮೆಲ್ಲುವುದು, ಗುಟ್ಕಾ ಜಗಿದು ಉಗುಳುವುದು ಹಾಗೂ ಕಂಡಕಂಡಲ್ಲಿ ಎಂಜಲು ಚೆಲ್ಲುವುದು ಇಂದು ನಿತ್ಯದ ದೃಶ್ಯವಾಗಿದೆ.

*​ಉಗುಳುವಿಕೆ ಹೆಚ್ಚಳ, ರೋಗ ಭೀತಿ*
ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಪ್ರತಿಯೊಬ್ಬರಿಗೂ ನಗರ ಆಶ್ರಯ, ಸೌಲಭ್ಯ ನೀಡುತ್ತದೆ. ಆದರೆ, ಈ ಮಣ್ಣಿಗೆ ಬಂದು ಇಲ್ಲಿನ ಸೌಂದರ್ಯ ಮತ್ತು ನೈರ್ಮಲ್ಯವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕೇವಲ ಅಸಹ್ಯಕರ ನೋಟವನ್ನು ನೀಡುವುದಷ್ಟೇ ಅಲ್ಲ, ಹಲವು ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ನೇರ ದಾರಿಯಾಗಿದೆ.

*​ಅಧಿಕಾರಿಗಳೇ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ*
ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತವು ‘ಸ್ವಚ್ಛ ಭಾರತ್’ ಅಭಿಯಾನದಡಿ ನೀರಿನಂತೆ ಹಣ ವೆಚ್ಚ ಮಾಡಿ ನಗರವನ್ನು ಅಲಂಕರಿಸುತ್ತಿದೆ. ಆದರೆ, ಈ ರೀತಿ ಸಾರ್ವಜನಿಕ ಆಸ್ತಿಯನ್ನು ಗಲೀಜು ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಇಲ್ಲದಿರುವುದೇ ಈ ಬೇಜವಾಬ್ದಾರಿತನಕ್ಕೆ ಮುಖ್ಯ ಕಾರಣವಾಗಿದೆ.

*ದಂಡ ಪ್ರಹಾರ, ಜಾಗೃತಿ*
ಮೆಟ್ರೋ ನಗರಗಳಲ್ಲಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ವ್ಯವಸ್ಥೆ ತಕ್ಷಣ ಜಾರಿಯಾಗಬೇಕಿದೆ. ಪ್ರಮುಖ ವೃತ್ತಗಳು, ಬಸ್ ನಿಲ್ದಾಣಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಸಿಸಿ ಟಿವಿ ಮೂಲಕ ನಿಗಾ ವಹಿಸಿ, ನಿಯಮ ಉಲ್ಲಂಘಿಸುವವರಿಗೆ ದಂಡದ ಚಲನ್ ಕಳುಹಿಸುವ ಕೆಲಸವಾಗಬೇಕು. ನಗರಕ್ಕೆ ಬರುವ ಹೊರರಾಜ್ಯದ ಕಾರ್ಮಿಕರು ಹಾಗೂ ಜನರಿಗೆ ಅವರವರ ಭಾಷೆಯಲ್ಲೇ ಸಾರ್ವಜನಿಕ ನೈರ್ಮಲ್ಯ ಕಾಪಾಡುವ ಬಗ್ಗೆ ಅರಿವು ಮೂಡಿಸುವ ಬೋರ್ಡ್‌ಗಳನ್ನು ಪ್ರದರ್ಶಿಸಬೇಕು.

*​ನಮ್ಮ ನಗರ, ನಮ್ಮ ಜವಾಬ್ದಾರಿ*
ಬಂದವರನ್ನು ಪ್ರೀತಿ-ನಂಬಿಕೆಯಿಂದ ಅಪ್ಪಿಕೊಳ್ಳುವುದು ಕರಾವಳಿಯ ಸಂಸ್ಕೃತಿ. ಆದರೆ, ನಗರದ ನೈರ್ಮಲ್ಯವನ್ನು ಕಾಪಾಡುವುದು ಇಲ್ಲಿ ವಾಸಿಸುವ ಎಲ್ಲ ನಾಗರಿಕರ ಮತ್ತು ಬಂದು ಹೋಗುವ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಮಂಗಳೂರಿನ ಸ್ವಚ್ಛತೆ ಮತ್ತು ಹಿರಿಮೆ- ಗರಿಮೆಯನ್ನು ಎತ್ತಿ ಹಿಡಿಯಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು