7:40 AM Wednesday5 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ಉಚಿತ ಪಾಸ್‌ ವಿತರಣೆ ವೇಳೆ ಅವಘಡ: ಕೇರಳ ಸಚಿವೆ ಮೇಲೆ ಚೆಲ್ಲಿದ ಬಿಸಿಬಿಸಿ ಪಾಯಸ

15/06/2026, 22:02

ತಿರುವನಂತಪುರಂ(reportekarnataka.com):ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯನ್ನು ಉದ್ಘಾಟಿಸುವ ಬಸ್ ಪ್ರಯಾಣದ ಸಮಯದಲ್ಲಿ ಆಕಸ್ಮಿಕವಾಗಿ ಬಿಸಿಬಿಸಿ ಪಾಯಸವು ಸಚಿವೆಯ ಮೈಮೇಲೆ ಬಿದ್ದು ಅವಘಡ ಆಗಿರುವ ಘಟನೆ ನಡೆದಿದೆ. ಕಾಂಗ್ರೆಸ್‌ ಕಾರ್ಯಕರ್ತರು ಉಚಿತ ಪಾಸ್‌ ಬಿಡುಗಡೆಯ ಸಂತೋಷದ ಸಮಯದಲ್ಲಿ ಪಾಯಸ ಹಂಚುತ್ತಿರುವಾಗ ಈ ಘಟನೆ ನಡೆದಿದೆ.

ತುಂಬಿದ್ದ ಬಸ್ಸಿನೊಳಗೆ ಭಾರೀ ಜನದಟ್ಟಣೆಯ ನಡುವೆ, ಸಿಹಿತಿಂಡಿಯನ್ನು ಹಿಡಿದಿದ್ದ ಪಾತ್ರೆ ಆಕಸ್ಮಿಕವಾಗಿ ಸಚಿವರಿಗೆ ಡಿಕ್ಕಿ ಹೊಡೆದು, ಅದು ಅವರ ತಲೆ ಮತ್ತು ಬಟ್ಟೆಯ ಮೇಲೆ ಚೆಲ್ಲಿತು. ಇದರ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಪಾಯಸವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತಿರುವಾಗ ಸಚಿವರು ಪಾಯಸವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ.

*ಎಲ್ಲಿ ನಡೆದ ಘಟನೆ:?*
ಅಂದಹಾಗೆ ಈ ಘಟನೆ ನಡೆದಿರುವುದು ಕೇರಳದಲ್ಲಿ. ಈ ಅನಾಹುತದಲ್ಲಿ ಮೈಮೇಲೆ ಬಿಸಿಬಿಸಿ ಪಾಯಸ ಬಿದ್ದುದರಿಂದ ಭಾರಿ ನೋವು ಅನುಭವಿಸಿದವರು, ಕೇರಳದ ಡೈರಿ ಅಭಿವೃದ್ಧಿ ಸಚಿವೆ ಬಿಂದು ಕೃಷ್ಣಾ. ಇವರೇ ಮಹಿಳೆಯರಿಗೆ ರಾಜ್ಯದ ಉಚಿತ ಪಾಸ್‌ ವಿತರಣೆ ಮಾಡುತ್ತಿದ್ದರು. “ಪ್ರಿಯದರ್ಶಿನಿ” ಯೋಜನೆಯ ಉದ್ಘಾಟನೆಯ ಭಾಗವಾಗಿ ಸಚಿವರು ಪ್ರಯಾಣಿಸುತ್ತಿದ್ದಾಗ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ನೊಳಗೆ ಈ ಘಟನೆ ಸಂಭವಿಸಿದೆ. ಅವರನ್ನು ಸ್ವಾಗತಿಸಲು ಬಸ್ ಹತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಈ ಅವಘಡ ಸಂಭವಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು