ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಡಿಕೆಶಿಗೆ 2 ಲಕ್ಷ ಮೆಣಸಿನಕಾಯಿ- ಬೆಳ್ಳುಳ್ಳಿ ಹಾರ: ದೃಷ್ಟಿ ತೆಗೆದ ಕಾರ್ಯಕರ್ತರು!
08/06/2026, 10:15
ಬೆಂಗಳೂರು(reporterkarnataka.com):ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರಕ್ಕೆ ಆಗಮಿಸಿದ ವೇಳೆ ಕ್ಷೇತ್ರದ ಕಾರ್ಯಕರ್ತರು ದೃಷ್ಟಿ ತೆಗೆಯುವ ಉದ್ದೇಶದಿಂದ ಒಣ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಬಳಸಿ ಹಾರ ತಯಾರಿಸಿ ಸ್ವಾಗತ ಕೋರಿ ಮಹಿಳೆಯರು ದೃಷ್ಟಿ ತೆಗೆದರು.
ಮುಖ್ಯಮಂತ್ರಿಗಳ ಸ್ವಾಗತಕ್ಕಾಗಿ ಹಾರೋಹಳ್ಳಿ ಸರ್ಕಲ್ ಅನ್ನು ಸಂಪೂರ್ಣವಾಗಿ ಬಾಳೆಗಿಡ, ಬಂಟಿಂಗ್ಸ್ ಹಾಗೂ ಬೃಹತ್ ಫ್ಲೆಕ್ಸ್ಗಳಿಂದ ಸಿಂಗರಿಸಲಾಗಿತ್ತು . ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಿತ್ತು , ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಜಮಾಯಿಸಿದ್ದರು .
*2 ಲಕ್ಷದ ಮೆಣಸಿನಕಾಯಿ-ಬೆಳ್ಳುಳ್ಳಿ ಹಾರ!*
ಈ ಬಾರಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೂವಿನ ಹಾರದ ಬದಲಾಗಿ ಅತ್ಯಂತ ವಿಭಿನ್ನವಾದ ಹಾರವನ್ನು ಹಾಕಲು ಅಭಿಮಾನಿಗಳು ಮುಂದಾಗಿದ್ದರು ಹಾರೋಹಳ್ಳಿ ಸರ್ಕಲ್ಗೆ ಸಿಎಂ ಆಗಮಿಸುತ್ತಿದ್ದಂತೆ ಅವರಿಗೆ ಹಸಿಮೆಣಸಿನಕಾಯಿ, ಕೆಂಪುಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಬಳಸಿ ವಿಶೇಷವಾಗಿ ಸಿದ್ಧಪಡಿಸಿರುವ ಬೃಹತ್ ಹಾರವನ್ನು ಹಾಕಲಾಯಿತು
ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ವಿಶಿಷ್ಟ ಹಾರವನ್ನು ತಯಾರಿಸಲಾಗಿದ್ದು, ಇದನ್ನು ಕ್ರೇನ್ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಹಾಕಿ ಅಭಿಮಾನಿಗಳು ಸಂಭ್ರಮಿಸಲಿದರು ಇದರೊಂದಿಗೆ ನಾಯಕನ ಮೇಲೆ ಟ್ರ್ಯಾಕ್ಟರ್ಗಳಲ್ಲಿ ಟನ್ಗಟ್ಟಲೆ, ಮಲ್ಲಿಗೆ ಚೆಂಡುಹೂವು ಸುರಿಯ ಲಾಯಿತ್ತು.












