ಇತ್ತೀಚಿನ ಸುದ್ದಿ
ಮಡಿಕೇರಿ ಜೈಲಿನಲ್ಲಿ ಚೂರಿ ಇರಿತ ಪ್ರಕರಣ: ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಾವು
03/06/2026, 12:42
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ಜೈಲಿನಲ್ಲಿ ಚೂರಿ ಇರಿತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಖೈದಿ ಚಿಕಿತ್ಸೆ ಫಲಿಸದೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಗಾಯಾಳು ಹೇಮಂತ್ ಮಂಗಳವಾರ ರಾತ್ರಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಶ್ರೀಮಂಗಲದ ರವಿ ಹಾಗೂ ಇಂದ್ರಾವತಿ ದಂಪತಿಯ ಏಕೈಕ ಪುತ್ರ.
ಈತನೂ ಸೇರಿದಂತೆ ತಂದೆ ತಾಯಿ,ಮಾವನನ್ನು ಪ್ರಕರಣವೊಂದರಲ್ಲಿ ಕೊಲೆಗೈದಿರುವ ರಾಜೇಶನ ಸಹೋದರ ಗಣೇಶ್ ನೀಡಿರುವ ದೂರಿನ ಮೇಲೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಪೊಲೀಸರಿಗೆ ಒಪ್ಪಿಸಿದ್ದರು.
ಆ ಸಂದರ್ಭ ಹಲ್ಲೆ ನಡೆದಿತ್ತು. ಈ ಕುಟುಂಬಕ್ಕೆ ಸೇರಿದ ಮನೆಯನ್ನು ಯಾರೋ ದುಷ್ಕರ್ಮಿಗಳು ವರ್ಷದ ಹಿಂದೆ ಸುಟ್ಟು ಹಾಕಿದ್ದರು.
ಅಲ್ಲದೆ ತಾತನ ಕಾಲದಿಂದಲೂ ಇವರ ಸ್ವಾನುಭಾವದಲ್ಲಿದ್ದ ಕಾಫಿ ತೋಟವನ್ನು ತಮ್ಮದೆಂದು ಕೆಲವರು ಇವರ ಮೇಲೆ ಪಿತೂರಿ ನಡೆಸಿ ಕೊಲೆ ಯತ್ನ ನಡೆಸಲಾಗಿತ್ತು. ಈ ಬಗ್ಗೆ ಶ್ರೀಮಂಗಲ ಪೊಲಿಸರು ಗಣೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದರು.












