10:27 PM Thursday7 - May 2026
ಬ್ರೇಕಿಂಗ್ ನ್ಯೂಸ್
ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್

ಇತ್ತೀಚಿನ ಸುದ್ದಿ

ಕೇರಳ ಶಾಸಕಿಯ ಬಲವಂತವಾಗಿ ಅಪ್ಪಿಕೊಳ್ಳಲು ಕಾಂಗ್ರೆಸ್‌ ಹಿರಿಯ ನಾಯಕ ಯತ್ನ: ದೂಡಿ ಮುಂದೆ ಹೋದ ನಾಯಕಿ; ವಿಡಿಯೋ ವೈರಲ್

07/05/2026, 21:41

ತಿರುವನಂತಪುರಂ(reporterkarnataka.com): ಕೇರಳ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಚೆರಿಯನ್ ಫಿಲಿಪ್ ಹಾಗೂ ಕೊಲ್ಲಂ ಶಾಸಕಿ ಬಿಂದು ಕೃಷ್ಣ ಅವರ ನಡುವಿನ ಶುಭಾಶಯ ವಿನಿಮಯ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ರಾಜಕೀಯ ಪಕ್ಷಗಳ ಸಭೆಗಳು ಎಂದರೇನೇ ಅಲ್ಲಿ ನಾಯಕರ ಧಾವಂತದ ಆಗಮನ, ಮುಗಿದ ಕೈಗಳು, ಕ್ಯಾಮೆರಾ ಫ್ಲ್ಯಾಷ್‌ಗಳು ಹಾಗೂ ಘೋಷಣೆಗಳು ಸಾಮಾನ್ಯ ಆದರೆ, ತಿರುವನಂತಪುರಂನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಒಂದು ಕ್ಷಣದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿದೆ.

*ವಿಡಿಯೋದಲ್ಲಿ ಏನಿದೆ?:*
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳ ಪ್ರಕಾರ, ಶಾಸಕಾಂಗ ಪಕ್ಷದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಶಾಸಕಿ ಬಿಂದು ಕೃಷ್ಣ ಅವರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು. ಅವರು ಕೈ ಮುಗಿದು ನಾಯಕರಿಗೆ ನಮಸ್ಕರಿಸುತ್ತಾ ಒಳಬರುತ್ತಿದ್ದಂತೆ, ಅಲ್ಲೇ ಇದ್ದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಶಾಸಕಿಯನ್ನು ಅಪ್ಪಿಕೊಂಡು ಶುಭಾಶಯ ತಿಳಿಸಿಲು ಮುಂದಾಗಿದ್ದಾರೆ. ಇದರಿಂದ ತಕ್ಷಣವೇ ವಿಚಲಿತರಾದ ಶಾಸಕಿ ಬಿಂದು ಕೃಷ್ಣ, ಅವರನ್ನು ಹಿಂದಕ್ಕೆ ದೂಡಿ, ಅಲ್ಲಿಂದ ಮುಂದಕ್ಕೆ ನಡೆಯಲು ಯತ್ನಿಸಿದ್ದಾರೆ.

ಅದಾದ ಬಳಿಕವೂ ಚೆರಿಯನ್ ಫಿಲಿಪ್ ಅವರು ಮತ್ತೆ ಶಾಸಕಿಯ ಬಳಿ ಬಂದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಬಿಂದು ಕೃಷ್ಣ ಅವರು ಕೈ ಮುಗಿದುಕೊಂಡೇ ಅವರಿಂದ ಸ್ಪಷ್ಟವಾದ ಅಂತರ ಕಾಯ್ದುಕೊಂಡು ಮುಂದಕ್ಕೆ ಸಾಗಿದ್ದಾರೆ. ಪಕ್ಷದ ಇತರ ನಾಯಕರು, ಪತ್ರಕರ್ತರು ಮತ್ತು ಕ್ಯಾಮೆರಾಗಳ ಮುಂದೆಯೇ ಈ ಘಟನೆ ನಡೆದಿದ್ದು, ತೀವ್ರ ಮುಜುಗರಕ್ಕೆ ಕಾರಣವಾಗಿದೆ.

*ನೆಟ್ಟಿಗರ ಆಕ್ರೋಶ:*
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಲಾರಂಭಿಸಿದ ಬೆನ್ನಲ್ಲೇ, ನೆಟ್ಟಿಗರಿಂದ ಟೀಕೆಗಳ ಸುರಿಮಳೆಯೇ ಹರಿದುಬರುತ್ತಿದೆ. ಶಾಸಕಿಗೆ ಆ ನಡವಳಿಕೆಯಿಂದ ಮುಜುಗರವಾಗಿರುವುದು ಅವರ ಹಾವಭಾವದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು ಮತ್ತು ಅವರು ಅಂತಹ ಸ್ಪರ್ಶವನ್ನು ಬಯಸಿರಲಿಲ್ಲ ಎಂಬುದನ್ನು ನೆಟ್ಟಿಗರು ಬೊಟ್ಟು ಮಾಡಿದ್ದಾರೆ.



ಸಾರ್ವಜನಿಕ ಮತ್ತು ವೃತ್ತಿಪರ ಸ್ಥಳಗಳಲ್ಲಿ ಮಹಿಳೆಯರ ‘ವೈಯಕ್ತಿಕ ಎಲ್ಲೆಗಳನ್ನು’ ಗೌರವಿಸಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ. ಸಭೆಗಳಲ್ಲಿ ಪಾಲ್ಗೊಳ್ಳಲು ಬರುವ ಮಹಿಳಾ ನಾಯಕಿಯರನ್ನು ರಾಜಕೀಯ ಕಚೇರಿಗಳಲ್ಲಿ ಈ ರೀತಿ ಮುಜುಗರಕ್ಕೀಡು ಮಾಡುವುದು ಸರಿಯಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿವಾದವು ರಾಜಕೀಯ ವಲಯಗಳಲ್ಲಿ ಸಾರ್ವಜನಿಕ ನಡವಳಿಕೆ ಮತ್ತು ಮೂಲಭೂತ ಶಿಷ್ಟಾಚಾರದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆ ಹುಟ್ಟುಹಾಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು