ಇತ್ತೀಚಿನ ಸುದ್ದಿ
ಪುತ್ತೂರು: ಎಪ್ರಿಲ್ 13ರಿಂದ 22ರ ವರೆಗೆ ಉಚಿತ ಸಂಸ್ಕೃತ ಕಲಿಕಾ ಶಿಬಿರ
10/04/2026, 13:15
ಪುತ್ತೂರು(reporterkarnataka.com): ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಸಂಸ್ಕೃತವು ಭಾರತದ ಪ್ರಾಚೀನ ಭಾಷೆ. ಸರಳ, ಸುಂದರ ಹಾಗೂ ಮಧುರವಾದ ಈ ಭಾಷೆಯನ್ನು ಕಲಿಯಲು ಒಂದು ಉತ್ತಮ ಅವಕಾಶವಾಗಿ ಇದೀಗ ಪುತ್ತೂರಿನಲ್ಲಿ ಶಿಬಿರವೊಂದನ್ನು ಆಯೋಜಿಸಲಾಗಿದೆ.
ಸಂಸ್ಕೃತ ಭಾರತೀ ಮತ್ತು ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ‘ಉಚಿತ ಸಂಸ್ಕೃತ ಸಂಭಾಷಣಾ ಶಿಬಿರ’ವು ಇದೇ ಎಪ್ರಿಲ್ 13 ರಿಂದ ಏಪ್ರಿಲ್ 22ರ ವರೆಗೆ 10 ದಿನಗಳ ಕಾಲ ನಡೆಯಲಿದೆ.
ಪುತ್ತೂರಿನ ಬೊಳುವಾರಿನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ‘ನವನೀತಂ ಸಭಾಂಗಣ’ದಲ್ಲಿ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಶಿಬಿರವನ್ನು ನಡೆಸಲಾಗುತ್ತದೆ. ಸಂಸ್ಕೃತ ಭಾರತೀಯದಲ್ಲಿ ಸಕ್ರಿಯ ಸದಸ್ಯೆಯಾಗಿರುವ ಶ್ರೀಲತಾ ಕೆ.ಎಸ್. ಇಂದ್ರಪ್ರಸ್ಥ, ಮೈಸೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಅಲ್ಲಿಂದ ಆಗಮಿಸಿ ಶಿಬಿರವನ್ನು ನಡೆಸಿಕೊಡಲಿರುವರು. 6 ವರ್ಷ ಮೇಲ್ಪಟ್ಟ ಎಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಪರ್ಕಿಸಿ ;9591967066












