ಇತ್ತೀಚಿನ ಸುದ್ದಿ
Raichuru | ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಸಂಸ್ಥಾಪನದ ದಿನ ಆಚರಣೆ
06/04/2026, 21:10
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಮಸ್ಕಿ ರಾಯಚೂರು
info.reporterkarnataka@gmail.com
ಬಿಜೆಪಿ ಸಂಸ್ಥಾಪನದ ದಿನದ ಅಂಗವಾಗಿ ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠದ್ ಅವರು ಧ್ವಜಾರೋಹಣ ನೆರವೇರಿಸಿದರು.
ಎಲ್ಲರಿಗೂ ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನದ ಶುಭಾಶಯಗಳು ತಿಳಿಸಲಾಯಿತು.
ಭಾರತೀಯ ಜನತಾ ಪಾರ್ಟಿ ನಿಷ್ಠಾವಂತ ಕಾರ್ಯಕರ್ತರ ಪಕ್ಷ. 1980ರಲ್ಲಿ ದೇಶಸೇವೆಯ ಸಂಕಲ್ಪದೊಂದಿಗೆ, ನಮ್ಮೆಲ್ಲಾ ಹಿರಿಯ ನಾಯಕರಿಂದ ಸ್ಥಾಪನೆಗೊಂಡ ಪಕ್ಷ, ಇಂದು 18 ಕೋಟಿಗೂ ಅಧಿಕ ಕಾರ್ಯಕರ್ತರ ಅಪ್ರತಿಮ ಪರಿಶ್ರಮದಿಂದ, ವಿಶ್ವದ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ.

ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನೇತೃತ್ವದಲ್ಲಿ, ನಮ್ಮ ಸಿದ್ದಾಂತಗಳ ಆಧಾರದ ಮೇಲೆ, ‘ವಿಕಸಿತ ಭಾರತ’ ನಿರ್ಮಾಣದ ಸಂಕಲ್ಪದೊಂದಿಗೆ, ದೇಶದ ಜನತೆಯ ಆಶೀರ್ವಾದದೊಂದಿಗೆ ಪಕ್ಷ ಮುನ್ನಡೆಯುತ್ತಿದೆ.
ಕಾರ್ಯಕರ್ತರೇ ನಮ್ಮ ಬಲ, ವಿಕಸಿತ ಭಾರತ ನಿರ್ಮಾಣದ ನಮ್ಮ ಗುರಿ ಅಚಲ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು ಮಲ್ಲಪಣ್ಣ ಅಂಕುಸದೊಡ್ಡಿ ಉಮಕಾಂತಪ್ಪ ಸಂಗನಾಳ ಡಾಕ್ಟರ್ ಮಲ್ಲಿಕಾರ್ಜುನ್ ಇತ್ಲಿ ನಾಗರಾಜ ಯoಬಲದ ಪುರಸಭೆ ಅಧ್ಯಕ್ಷರು ಸುರೇಶ್ ಅರಸೂರು, ಪದಾಧಿಕಾರಿಗಳಾದ ಜಿ. ವೆಂಕಟೇಶ್ ನಾಯಕ್ ಬಸವರಾಜ್ ವಕೀಲರು ರಮೇಶ್ ಉದ್ಬಾಳ್ ಪುರಸಭೆ ಸದಸ್ಯರು ಮೌನೇಶ್ ಮುರಾರಿ ಮಲ್ಲಿಕಾರ್ಜುನ ಬ್ಯಾಳಿ ಭರತ್ ಕುಮಾರ್ ಕೇಶವಮೂರ್ತಿ ಬಸವರಾಜ್ ಬುಕ್ಕಣ್ಣ ಯಮನಪ್ಪ ಬೋವಿ ಶಿವರಾಜ್ ಪಾಟೀಲ್ ಸಿದ್ದನಗೌಡ ಉದ್ಬಾಳ್ ಶಾಮಿದ್ ಬಯ್ಯ ಪಕ್ಷದ ಕಾರ್ಯಕರ್ತರು ಬಿಜೆಪಿ ಸಂಸ್ಥಾಪನ ದಿನವನ್ನು ಆಚರಣೆ ಮಾಡಲಾಯಿತು.












