ಇತ್ತೀಚಿನ ಸುದ್ದಿ
ಆಶ್ರಯ ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ: ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿ ಹೆಸರು ಪಂಚಾಯಿತಿಯಲ್ಲಿ ಮಾಯ!!
09/03/2026, 22:48
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಗ್ರಾಮ ಪಂಚಾಯತಿಯಲ್ಲಿ ಭಾರಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಆಶ್ರಯ ವಸತಿ ಯೋಜನೆಗೆ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗೆ ಬಾರಿ ಮೋಸ ಮಾಡಲಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಫಲಾನುಭವಿಯ ಹೆಸರನ್ನು ಕಿತ್ತೆಸೆದು ಆ ಜಾಗದಲ್ಲಿ ಬೇರೆ ವ್ಯಕ್ತಿಯ ಹೆಸರು ಹಾಕಲಾಗಿದೆ.
ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಅಂತರಗಂಗೆ ಗ್ರಾಮದಲ್ಲಿ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಹೆಸರು ಆಯ್ಕೆ ಮಾಡಿ ಪಟ್ಟಿ ಸಿದ್ದಪಡಿಸಲಾಯಿತು. ನಂತರ ಗ್ರಾಮಸ್ಥರಿಂದ ಸಹಿ ಕೂಡ ಪಡೆಯಲಾಗಿದೆ. ಆದರೆ, ನಂತರ ಗ್ರಾಮ ಪಂಚಾಯಿತಿಯಲ್ಲಿ ಬೇರೆಯೇ ಆಟ ನಡೆದಿದೆ. ಪಟ್ಟಿಯಲ್ಲಿ ಬದಲಾವಣೆ ಮಾಡಿ ನಿಜವಾದ ಫಲಾನುಭವಿಗೆ ಅನ್ಯಾಯ ಮಾಡಲಾಗಿದೆ.
ಗ್ರಾಮ ಸಭೆಯಲ್ಲಿ ಲಲಿತಾ ಸಾಲಿಮಠ ಅವರ ಹೆಸರು ಆಯ್ಕೆ ಮಾಡಲಾಗಿತ್ತು. ಆದರೆ ಪಂಚಾಯತಿಯಲ್ಲಿ ಆ ಹೆಸರನ್ನು ತೆಗೆದುಹಾಕಿ ಬೇರೆಯವರ ಹೆಸರನ್ನು ಹಾಕಲಾಯಿತು.
ಗ್ರಾಮದಲ್ಲಿ ಫಲಾನುಭವಿಗಳ ಮನೆ ಜಿಪಿಎಸ್ ಕಾರ್ಯಾಚರಣೆ ನಡೆಯುತ್ತಿದ್ದರೂ ಲಲಿತಾ ಸಾಲಿಮಠ ಮನೆ ಜಿಪಿಎಸ್ ಮಾಡಲು ಬರಲಿಲ್ಲ. ಗ್ರಾಮ ಪಂಚಾಯಿತಿ ಸಿಬ್ಬಂದಿ ಕೇಳಿದಾಗ ಅವರು ಏನೇನೋ ಸಾಬೂಬು ಹೇಳಿದ್ದಾರೆ. ಅಮ್ಮ ಇದರಲ್ಲಿ ನಿಮ್ಮ ಹೆಸರು ಇನ್ನೂ ಬಂದಿಲ್ಲ. ಬೇರೆಯವರಿಗೆ ಮಾತ್ರ ಬಂದಿದೆ. ನಿಮ್ಮದು ಬರಬಹುದು ನೋಡಿ ಎಂದು ಹೇಳಿದ್ದಾರೆ.


ಫಲಾನುಭವಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಇವರ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.
ತಾಲೂಕು ಪಂಚಾಯಿತಿ ಅಧಿಕಾರಿಗಳಿಗೂ ಇದರ ಬಗ್ಗೆ ಮಾಹಿತಿ ನೀಡಿದರೂ ಏನು ಪ್ರಯೋಜನವಾಗಿಲ್ಲ. ವಿಡಿಯೋ ಫೋಟೋ ಮತ್ತು ದಾಖಲೆಗಳಿದ್ದರೂ ಅಧಿಕಾರಿಗಳು ಕ್ಯಾರಿಯನ್ನುತ್ತಿಲ್ಲ.
ಈ ಬಗ್ಗೆ ಫಲಾನುಭವಿ ನಿಗಮಕ್ಕೆ ದೂರು ನೀಡಿದ್ದಾರೆ.
ಮುಂದೇನಾಗುತ್ತೋ ಕಾದು ನೋಡಬೇಕಾಗಿದೆ.












